ಸಾಹಿತಿ ಜಯಂತ್ ಕಾಯ್ಕಿಣಿಗೆ ಗೌರವ ಡಾಕ್ಟರೇಟ್

ನವಿರು ಕಥೆಗಳು. ಅತಿ ನವಿರು ಕವಿತೆಗಳು. ನವಿರಾತಿನವಿರು ಅಂಕಣ ಬರಹಗಳು. ಜಿಲೇಬಿಯಂಥ ಮಾತುಗಳು. ಹೌದು, ಇವೆಲ್ಲ ಜಯಂತರ ಯಕ್ಷಸೃಷ್ಟಿಗಳೇ! ಆದರೆ, ಇವೆಲ್ಲ ಈಸ್ಟ್ಮನ್ ಕಲರ್ ನೆನಪುಗಳು. ಈಗ, ಜಯಂತ್ ಎಂದರೆ ಮುಂಗಾರುಮಳೆ. ಜಯಂತ್ ಎಂದರೆ ಮಿಲನ. ಜಯಂತ್ ಎಂದರೆ ಹಾಗೇ ಸುಮ್ಮನೆ, ಪಂಚರಂಗಿ, ಪರಮಾತ್ಮ! ಅವರ ಸಾಹಿತ್ಯಕ್ಕೆ ಎಲ್ಲರೂ 'ಪರವಶನಾದೆನು...' ಎನ್ನುವವರೇ.
ಕನ್ನಡ ಸಿನಿಮಾ ಹಾಡುಗಳಿಗೆ ಹೊಸ ನುಡಿಗಟ್ಟುಗಳನ್ನು, ಕನ್ನಡ ಪ್ರೇಮಿಗಳಿಗೆ ಹೊಸ ಹಾಡುಗಳನ್ನು ಕಟ್ಟಿಕೊಟ್ಟಿರುವ ಈ ಜಯಂತ್ ಕಾಯ್ಕಿಣಿಯವರನ್ನು ಹುಡುಕಿಕೊಂಡು ಇದೀಗ ಗೌರವ ಡಾಕ್ಟರೇಟ್ ಬಂದಿದೆ. ತುಮಕೂರು ವಿಶ್ವವಿದ್ಯಾಲಯ ಈ ಪ್ರಶಸ್ತಿಯನ್ನು ನೀಡಲಿರುವುದಾಗಿ ಸುದ್ದಿ ಬಂದಿದೆ. ಸಿನಿಮಾ ಉದ್ಯಮ ಹಾಗೂ ಸಿನಿಮಾ ಪ್ರಿಯರ ಸಂತಸಕ್ಕೆ ಇನ್ನೇನು ಬೇಕು? (ಒನ್ ಇಂಡಿಯಾ ಕನ್ನಡ)
More from Filmibeat
English summary
One of the popular lyrics writer in the Kannada cinema industry, Jayanth Kaikini has been chosen to receive an honorary doctorate from the Tumkur University.


Click it and Unblock the Notifications











