ಪ್ರಜ್ಞಾಹೀನ ಸ್ಥಿತಿಯಲ್ಲಿ ನಟ ಕೆ ಎಸ್ ಅಶ್ವತ್ಥ್

ಗೃಹಸಚಿವ ಡಾ.ವಿ ಎಸ್ ಆಚಾರ್ಯ ಆಸ್ಪತ್ರೆಗೆ ಭೇಟಿ ನೀಡಿ ಎಷ್ಟೇ ಪ್ರಯತ್ನಿಸಿದರೂ ಅಶ್ವತ್ಥ್ ಪ್ರತಿಕ್ರಿಯಿಸಲಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕರೆದೊಯ್ಯಲು ಕುಟುಂಬ ವರ್ಗ ಪ್ರಯತ್ನಿಸಿತಾದರೂ ಈ ಪರಿಸ್ಥಿತಿಯಲ್ಲಿ ಕರೆದೊಯ್ಯುವುದು ಬೇಡ ಎಂಬ ವೈದ್ಯರ ಸಲಹೆ ಮೇರೆಗೆ ಕೈಬಿಟ್ಟರು.
ಬಸಪ್ಪ ಮೆಮೋರಿಯಲ್ ಆಸ್ಪತ್ರೆಗೆ ಬೆಂಗಳೂರಿನ ಕೆಲವು ವೈದ್ಯರನ್ನು ಕರೆಸಲಾಗಿದ್ದು, ಮೆದುಳಿನಲ್ಲಿ ಆಗಿರುವ ಸಮಸ್ಯೆಯನ್ನು ಸರಿಪಡಿಸುವಲ್ಲಿ ವೈದ್ಯರ ತಂಡ ಪ್ರಯತ್ನಿಸುತ್ತಿದೆ. ಕಳೆದ ಐದು ದಿನಗಳಲ್ಲಿ ತಮ್ಮ ತಂದೆಯವರು ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಇದೇ ಮೊದಲು ಎಂದು ಪುತ್ರ ಶಂಕರ್ ಅಶ್ವತ್ಥ್ ತಿಳಿಸಿದರು.
More from Filmibeat
ಮೈಸೂರು mysore ks ashwath ವಿ ಎಸ್ ಆಚಾರ್ಯ vs acharya ಸರಸ್ವತಿಪುರಂ shankar ashwath ಕೆ ಎಸ್ ಅಶ್ವತ್ಥ್ ಶಂಕರ್ ಅಶ್ವತ್ಥ್ ಅಸ್ವಸ್ಥ ಬಿ ಎಂ ಆಸ್ಪತ್ರೆ bm hospital


Click it and Unblock the Notifications











