Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾರಥಿ ಶತದಿನೋತ್ಸವ ಸಮಾರಂಭದಲ್ಲಿ ಸುದೀಪ್
ಸ್ಯಾಂಡಲ್ ವುಡ್ ನಲ್ಲಿ ಈ ವರ್ಷದ ಮೊದಲ ಶತದಿನೋತ್ಸವ ಸಮಾರಂಭ 'ಸಾರಥಿ' ಚಿತ್ರದ ಮೂಲಕ ನಡೆಯಿತು. ನಿನ್ನೆ (ಜನವರಿ 16, 2012) ಬೆಂಗಳೂರಿನ ವಿಜಯನಗರದ 'ಬಂಟರ ಸಂಘ'ದಲ್ಲಿ ಸಾರಥಿ ಚಿತ್ರದ ನಿರ್ಮಾಪಕ ಕೆ ವಿ ಸತ್ಯಪ್ರಕಾಶ್, ಗೆಲುವಿಗೆ ಕಾರಣಕರ್ತರಾದ ಚಿತ್ರತಂಡದ ಎಲ್ಲ ಸದಸ್ಯರನ್ನು ವೇದಿಕೆಗೆ ಕರೆದು ಸನ್ಮಾನಿಸುವ ಮೂಲಕ ಸಂಭ್ರಮಿಸಿದರು.
ದರ್ಶನ್ ಜೊತೆ ಕಿಚ್ಚ ಸುದೀಪ್ ಕೂಡ ವೇದಿಕೆಯಲ್ಲಿದ್ದದ್ದು ಹೆಚ್ಚಿನ ರೋಮಾಂಚನಕ್ಕೆ ಕಾರಣವಾಯಿತು. ನಿರ್ದೇಶಕ, ದರ್ಶನ್ ತಮ್ಮ ದಿನಕರ್, ದರ್ಶನ್ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್ ಹಾಗೂ ತಾಯಿ ಮೀನಾ ತೂಗುದೀಪ ಕೂಡ ಸಮಾರಂಭದಲ್ಲಿ ಹಾಜರಾಗಿದ್ದು ವಿಶೇಷವೆನಿಸಿತು. ಜೊತೆಗೆ ನಟ ಶರತ್ ಕುಮಾರ್ ಹಾಜರಿದ್ದರು. ಸುದೀಪ್, ಬಹಳಷ್ಟು ಮಂದಿಗೆ ನೆನಪಿನ ಕಾಣಿಕೆ ನೀಡಿ ಚಿತ್ರತಂಡಕ್ಕೆ ವಿಶೇಷ ವ್ಯಕ್ತಿ ಎನಿಸಿದರು.
ಚಿತ್ರದ ನಾಯಕಿ ದೀಪಾ ಸನ್ನಿಧಿ ಕೂಡ ಆಗಮಿಸಿ ವೇದಿಕೆಗೆ ಗ್ಲಾಮರ್ ಕಳೆ ನೀಡಿದರು. ನಟಿಸಿದ ಮೊದಲ ಚಿತ್ರವೇ ಶತದಿನೋತ್ಸವ ಆಚರಿಸಿದ್ದು ಸಹಜವಾಗಿಯೇ ದೀಪಾಗೆ ಖುಷಿತಂದಿತ್ತು. ಖುಷಿಖುಷಿಯಾಗಿ ವೇದಿಕೆಯಲ್ಲಿ ಎಲ್ಲರ ಗಮನ ಸೆಳೆದ ದೀಪಾ, ಹೆಚ್ಚೇನೂ ಮಾತನಾಡಲಿಲ್ಲ. ಒಟ್ಟಿನಲ್ಲಿ ಎರಡು ಸಾರಿ ಮುಂದೂಡಲ್ಪಟ್ಟಿದ್ದ ಸಾರಥಿ ಶತದಿನೋತ್ಸವ ಸಮಾರಂಭ ಕೊನೆಗೂ ನಡೆದು ಚಿತ್ರತಂಡ ಧನ್ಯತಾಭಾವ ಅನುಭವಿಸಿತು. (ಒನ್ ಇಂಡಿಯಾ ಕನ್ನಡ)