Don't Miss!
- News Bengaluru Rain: ಬೆಂಗಳೂರಿನ ಹಲವೆಡೆ ಗುಡುಗು ಜಿನುಗು ಮಳೆ.. ಮನೆಯಿಂದ ಹೊರಬಂದು ಕುಣಿದು ಕುಪ್ಪಳಿಸಿದ ಮಕ್ಕಳು
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ಬಾಗಿಲು ಮುಚ್ಚಿದ ಭೂಮಿಕ ಚಿತ್ರಮಂದಿರ
ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಸ್ಟೇಟ್ಸ್ ಚಿತ್ರಮಂದಿರ ಇತ್ತೀಚೆಗಷ್ಟೇ ನವೀಕರಣಗೊಂಡಿತ್ತು. ಈ ಚಿತ್ರಮಂದಿರಕ್ಕೆ ಹೊಸದಾಗಿ ಭೂಮಿಕ ಎಂದು ಹೆಸರಿಡಲಾಗಿತ್ತು.ಇದೀಗ ಈ ಚಿತ್ರಮಂದಿರವನ್ನು ಮತ್ತ್ತೆ ಮುಚ್ಚಿಲಾಗಿದೆ. ಚಿತ್ರಮಂದಿರದಲ್ಲಿನ ಅಸಮರ್ಪಕ ಸೀಟಿನ ವ್ಯವಸ್ಥೆಯೇ ಇದಕ್ಕೆ ಕಾರಣ.
ಭೂಮಿಕ ಚಿತ್ರಮಂದಿರದಲ್ಲಿನ ಅಸಮರ್ಪಕ ಆಸನ ವ್ಯವಸ್ಥೆಯಿಂದ ಪ್ರೇಕ್ಷಕರು ಕಿರಿಕಿರಿ ಅನುಭವಿಸುವಂತಾಗಿತ್ತು. ಹಿಂದಿನ ಸಾಲಿನ ಪ್ರೇಕ್ಷಕರು ಚಿತ್ರವನ್ನು ಸರಿಯಾಗಿ ವೀಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಮುಖ್ಯವಾಗಿ ಬಾಲ್ಕನಿ ಮತ್ತು ಸೆಕೆಂಡ್ ಕ್ಲಾಸಿನ ಕೊನೆಯ ಸಾಲಿನ ಪ್ರೇಕ್ಷಕರು ಪರದಾಡ ಬೇಕಾಗಿತ್ತು. ಇದೀಗ ಸೀಟಿನ ವ್ಯವಸ್ಥೆಯನ್ನು ಸರಿಪಡಿಸಲಾಗುತ್ತಿದೆ. ಹಾಗಾಗಿ ಚಿತ್ರಮಂದಿರದ ಬಾಗಿಲನ್ನು ಸದ್ಯಕ್ಕೆ ಮುಚ್ಚಲಾಗಿದೆ.
ನವೀಕರಣಗೊಂಡ ನಂತರ ದರ್ಶನ್ ಅಭಿನಯದ 'ಯೋಧ' ಚಿತ್ರದೊಂದಿಗೆ ಆರಂಭವಾಗಿತ್ತು. ತಾಕತ್ ಚಿತ್ರದ ನಂತರ ಭೂಮಿಕ ಚಿತ್ರಮಂದಿರಕ್ಕೆ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. 1942ರಲ್ಲಿ ನಿರ್ಮಾಣವಾಗಿದ್ದ ಈ ಚಿತ್ರಮಂದಿರದಲ್ಲಿ ಎರಡನೇ ಮಹಾಯುದ್ಧದ ತನಕ ಚಿತ್ರ ಪ್ರದರ್ಶನವಿರಲಿಲ್ಲ. ಅಲ್ಲಿಯವರೆಗೂ ಈ ಕಟ್ಟಡ ಬ್ರಿಟೀಷ್ ಸೈನಿಕರ ಮದ್ದು ಗುಂಡುಗಳನ್ನು ಅಡಗಿಸಿಡುವ ತಾಣವಾಗಿತ್ತು.
ಕೆಎಫ್ ಸಿಸಿ ಮಾಜಿ ಅಧ್ಯಕ್ಷ ತಲ್ಲಂ ನಂಜುಂಡಶೆಟ್ಟಿ ಅವರಿಗೆ ಹಸ್ತಾಂತರವಾದ ಬಳಿಕ ಚಿತ್ರಮಂದಿರವನ್ನು ಹಲವಾರು ಸಲ ನವೀಕರಣಗೊಳಿಸಲಾಗಿತ್ತು. ಇಂದಿಗೂ ಮರೆಯಲಾಗದ ಡಾ.ರಾಜ್ ಅಭಿನಯದ 'ಬಂಗಾರದ ಮನುಷ್ಯ' ಸತತ ಎರಡು ವರ್ಷಗಳ ಕಾಲ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿದ್ದು ಈ ಚಿತ್ರಮಂದಿರದಲ್ಲೇ.
(ದಟ್ಸ್ ಕನ್ನಡ ಚಿತ್ರವಾರ್ತೆ)