ನನ್ನ ಕನಸು...ನನಸಾಗಲು ಬನ್ನಿ ಕೈ ಜೋಡಿಸಿ...

By Mahesh

Nanna Kanasu, Education through visual media
"ಏಯ್ ಏಯ್ ನಿಲ್ಲೋ ಅಲ್ಲಿ" ಅಂತ ನಾನು ಕೂಗೋದು ಇನ್ನೂ ಮುಗಿದಿರಲಿಲ್ಲ ಅಷ್ಟರಲ್ಲಿ ಅವನು ಬಿರುಗಾಳಿಯಂತೆ ಪಲ್ಸರ್ ನಲ್ಲಿ ಟ್ರಾಫಿಕ್ಕನ್ನು ಸೀಳಿಕೊಂಡು ಹೋಗೇ ಬಿಟ್ಟಿದ್ದ, ಎದುರಿಗೆ ಅಡ್ಡವಾಗಿ ಬಂದ ನಾಯಿಯನ್ನೂ ಲೆಕ್ಕಿಸದೆ. ಕನಿಷ್ಟ ಸೌಜನ್ಯಕ್ಕಾದ್ರು "ಕ್ಷಮಿಸಿ" ಅಂತ ನಮಗೆ ಕೇಳಲಿಲ್ಲ ಜೊತೆಗೆ ನಾಯಿ ಕಂಡು ಅನುಕಂಪಾನೂ ಮೂಡಲಿಲ್ಲ ಅವನಿಗೆ ಅಂತ ಇನ್ನೂ ಬೇಸರವಾಯ್ತು. "ಇರ್ಲಿ ಬಿಡಲೇ ಏನ್ ಮಾಡೋಕೆ ಆಗುತ್ತೆ... ಬೆಂಗ್ಳೂರಿನಲ್ಲಿ ಇವೆಲ್ಲಾ ಕಾಮನ್, ಹೋಗ್ಲಿ... ಗಾಡೀಗೆ ಏನಾಯ್ತು ಅಂತ ನೋಡು" ಅಂತ ನನ್ನ ಸಮಾಧಾನ ಪಡಿಸಲು ಅಂದ ಪಕ್ಕಕ್ಕಿದ್ದ ಸ್ನೇಹಿತ.

"ಇವನ್ಯಾವನೋ ಎಲ್ಲಿಂದ ಬಂದ, ಒಂದ್ಚೂರು ಕಾಮನ್ ಸೆನ್ಸ್ ಬೇಡ್ವಾ ಅಂತ ಸ್ವಲ್ಪ ಮುಂದಕ್ಕೆ ಹೋಗಿ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ನೋಡಿದ್ರೆ, ಮುಂದುಗಡೆ ಆ ಗಾಡಿ ತರಚಿದ್ದರ ಪರಿಣಾಮ ಹೊಸ ಕಾರಿನ ಬಣ್ಣ ಅಲ್ಲಲ್ಲಿ ಹೋಗಿದ್ದು ಎದ್ದು ಕಾಣುತ್ತಿತ್ತು. ಇಂಥವರಿಗೆಲ್ಲಾ ಯಾವಾಗ ಬುದ್ಧಿ ಬರುತ್ತೋ ಅಂತ ಗೊಣಗುತ್ತಾ ಹತ್ತದಿರಲು ಮನಸ್ಸು ಬಿಡಲಿಲ್ಲ.

"ಅಲ್ಲ... ಇವರೆಲ್ಲಾ ಶಾಲಾ-ಕಾಲೇಜುಗಳಲ್ಲಿ ಏನ್ ಓದುಕೊಂಡು ಬರ್ತಾರೆ ಅಂತ, ಸಾಮಾಜಿಕ ಕಳಕಳಿ ಅನ್ನೋದು ಎಳ್ಳಷ್ಟೂ ಇರಲ್ವಲ್ಲ, ನಮ್ಮಿಂದ ಇನ್ನೊಬ್ರಿಗೆ ತೊಂದರೆಯಾಗಬಾರದು, ಒಂದು ವೇಳೆ ಆದರೆ ಅವರಿಗೆ ಕ್ಷಮೆ ಕೇಳಬೇಕು ಅನ್ನೋದೆ ಗೊತ್ತಿಲ್ಲ ಅಂದ್ರೆ, ಏನ್ ಓದಿ ಏನ್ ಉಪಯೋಗ?, ಸುಮ್ಮನೆ ಮನೆಯ ಷೋಕೇಸಿನ ತುಂಬಾ ಪ್ರಶಸ್ತಿಗಳು ಹಾಗೂ ಪ್ರಶಸ್ತಿ ಪತ್ರಗಳು. ಮಾನವೀಯತೆ, ಸಾಮಾಜಿಕ ಕಳಕಳಿ ಹರಿಯದ ರಕ್ತ ಭೂಮಿಗೆ ಭಾರವಲ್ಲದೆ ಮತ್ತಿನ್ನೇನು." ಮನಸ್ಸಿನಲ್ಲಿ ಆಲೋಚನೆಗಳು ನನ್ನ ಕಾರಿಗಿಂತ ವೇಗವಾಗಿ ಓಡ್ತಾನೆ ಇದ್ದವು.

ಈ ತರಹದ ಘಟನೆಗಳು ಪ್ರತಿದಿನ ಒಂದಿಲ್ಲ-ಇನ್ನೊಂದೆಡೆ ನಡಿತಾನೆ ಇರುತ್ವೆ. "ದಿನಾ ಸಾಯೋರಿಗೆ,ಅಳೋರ್ಯಾರು" ಅಂತ ಅನ್ನುವಂತೆ, ಎಲ್ಲರೂ ಹೀಗೆಯೆ ಮಾಡ್ತಿರಬೇಕಾದ್ರೆ, ಸರಿಪಡಿಸೋರು ಯಾರು ಅಂತ ಎಲ್ಲರೂ ತಪ್ಪು ಮಾಡ್ತಾನೆ ಹೋಗ್ತಾರೆ ಸರಿ ಪಡಿಸಲು ಮನಸ್ಸು ಮಾಡದೆ!. ಅಂಥ ತಪ್ಪನ್ನು ನಾವು ಮಾಡಬಾರದು ಅಂತ ಆಲೋಚಿಸಿದ್ದರಿಂದ ಜನ್ಮ ತಾಳಿದ್ದು "ನನ್ನ ಕನಸು".

"ಬೆಳೆಯುವ ಸಿರಿ ಮೊಳಕೆಯಲ್ಲಿ" ಅನ್ನೋ ಗಾದೆ ಮಾತಿನಂತೆ, ನಾವು ಚಿಕ್ಕಮಕ್ಕಳಲ್ಲಿ ಇಂಥಾ ಸಾಮಾಜಿಕ ಕಳಕಳಿ ಮೂಡಿಸಲು ಪ್ರಯತ್ನ ಪಟ್ಟರೆ, ಈ ಕ್ಷಣ ಅಲ್ಲದಿದ್ದರೂ ಮುಂದೊಂದಿನ ಅದು ಪ್ರತಿಫಲ ಕೊಟ್ಟೇಕೊಡುತ್ತೆ ಅಂತ, "ದೃಶ್ಯ ಮಾಧ್ಯಮ ಮುಖಾಂತರ ಶಿಕ್ಷಣ" ವನ್ನು ಮತ್ತು ನಮ್ಮ ಕೈಲಾದ ಸೌಲಭ್ಯಗಳನ್ನು "ನನ್ನ ಕನಸು" ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಕೊಡುತ್ತಿದ್ದೇವೆ.

ಕಡೇ ಪಕ್ಷ ಮಕ್ಕಳಿಗೆ ಕೊಟ್ಟರೆ ಮುಂದೊಂದಿನ ಭವ್ಯ ಭಾರತ ಸಾಮಾಜಿಕ ಕಳಕಳಿಯ ಶ್ರೀಮಂತಿಕೆ ಪಡೆಯಬಹುದು ಅನ್ನೋ ಸದ್ದುದ್ದೇಶದಿಂದ. ಬೈಟು ಕಾಫೀ ಫಿಲ್ಮ್ಸ್(http://www.by2coffeefilms.com ) ಮತ್ತು ನಿರಂತರ (http://www.nirantarafoundation.org.in ) ತಂಡಗಳ ಸಹಯೋಗದಲ್ಲಿ ನಡೆಯುವ ಮುಂದಿನ "ನನ್ನ ಕನಸು" ಕಾರ್ಯಕ್ರಮಗಳ ಮುಖಾಂತರ ಶಾಲೆಗೆ ದೇಣಿಗೆ ಕೊಡಲಿಚ್ಛಿಸುವವರು, ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಅಥವಾ ಈ-ಮೇಲ್ ವಿಳಾಸ ಸಂಪರ್ಕಿಸಿ: 98866 44123, 96119 09052
ಈ-ಮೇಲ್ ವಿಳಾಸ: [email protected]

ಮುಂದಿನ ನನ್ನ ಕನಸು ಕಾರ್ಯಕ್ರಮ ನಡೆಯುವ ವಿವರಗಳು ಹೀಗಿವೆ:
ದಿನಾಂಕ: 27 ನವೆಂಬರ್ 2010
ಸ್ಥಳ: ಗಾಂಧಿನಗರ ಪ್ರೌಢಶಾಲೆ, ಕುಮಾರಪಾರ್ಕ್ ಪಶ್ಚಿಮ, ಬೆಂಗಳೂರು

ಬೈಟು ಕಾಫೀ ಫಿಲ್ಮ್ಸ್ ಪರವಾಗಿ...
ಅಮರನಾಥ್ ವಿ.ಬಿ

More from Filmibeat

English summary
By 2 Coffee Films in association Nirantara Foundation have come up with an idea to educate children with visual media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X