Don't Miss!
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾತು ಮರೆತ ನಿಖಿತಾ; ದರ್ಶನ್ ಜೊತೆ ಐಟಂ ಸಾಂಗ್
ಕೆಲವೊಮ್ಮೆ ಮಾತ್ರ ಆಕಸ್ಮಿಕಗಳು ಸಂಭವಿಸುತ್ತವೆ. ಕಳೆದ ವರ್ಷದ ವಿವಾದಕ್ಕೀಡಾಗಿದ್ದ ತಾರಾಜೋಡಿ ದರ್ಶನ್ ಮತ್ತು ನಿಖಿತಾ ಮತ್ತೆ ಒಂದಾಗಿದ್ದಾರೆ. ಅಂದರೆ ಸ್ನೇಹಿತರು' ಚಿತ್ರದಲ್ಲಿ ಮತ್ತೆ ಅವರಿಬ್ಬರೂ ಒಟ್ಟಿಗೆ ನಟಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಚಿತ್ರ ವಿವಾದಕ್ಕಿಂತ ಮೊದಲೇ ಪ್ರಾರಂಭವಾದ ಚಿತ್ರವಾಗಿತ್ತು. ಆದರೆ ಸ್ನೇಹಿತರು ನಂತರ ಒಪ್ಪಿಕೊಂಡ ಚಿತ್ರ.
ವಿವಾದ ಹೊಗೆಯಾಡುತ್ತಿದ್ದ ವೇಳೆ ನಿಖಿತಾ ಹೇಳಿದ್ದು "ಒಪ್ಪಿಕೊಂಡದ್ದನ್ನು ಮುಗಿಸುತ್ತೇನೆ, ಮತ್ತೆ ದರ್ಶನ್ ಸಹವಾಸವೇ ಬೇಡ" ಎಂಬ ಮಾತು. ಆದರೆ ಆ ಮಾತೀಗ ಕಾಲಗರ್ಭದೊಳಕ್ಕೆ ಜಾರಿದೆ. ನಿಖಿತಾ ಮತ್ತೆ ದರ್ಶನ್ ಜೊತೆ ಹೆಜ್ಜೆಹಾಕಿದ್ದಾರೆ. ಅದೂ 'ಐಟಂ ಸಾಂಗ್' ನಲ್ಲಿ ಎಂಬುದು ಸಿಕ್ಕ ಮಾಹಿತಿ ಹಾಗೂ ವಿಶೇಷ ಸಂಗತಿ.
ಗೀತಸಾಹಿತಿ ರಾಮ್ ನಾರಾಯಣ್ ನಿರ್ದೇಶನದ 'ಸ್ನೇಹಿತರು' ಚಿತ್ರದಲ್ಲಿ ನಿಖಿತಾರದ್ದು ವಿಶೇಷ ಪಾತ್ರ, ಅವರು ನಾಯಕಿಯಲ್ಲ. ಅಷ್ಟೇ ಅಲ್ಲ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಇದರಲ್ಲಿ ನಾಯಕರಲ್ಲ. ಆದರೆ, ಅವರದ್ದೂ ವಿಶೇಷ ಪಾತ್ರವೇ. ವಿಜಯ್ ರಾಘವೇಂದ್ರ, ಸೃಜನ್ ಲೋಕೇಶ್, ತರುಣ್, ರವಿಶಂಕರ್ ಇಲ್ಲಿ ನಾಯಕರು. ಇವರಿಗೆಲ್ಲ ಒಬ್ಬಳೇ ನಾಯಕಿ ಪ್ರಣೀತಾ. ಮುಂದಿನ ಪುಟ ನೊಡಿ...