Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೈಜ ಸಂಗೀತದ ಕಾರಂಜಿಗೆ ಸೆನ್ಸಾರ್ ಮುಕ್ತ ಪ್ರಶಂಸೆ
ಸದಬಿರುಚಿಯ ಚಿತ್ರಗಳ ನಿರ್ಮಾಪಕ ಎಂದೇ ಹೆಸರಾದ ಎನ್.ಎಂ. ಸುರೇಶ್, ನಿರ್ಮಾಣದ ಉತ್ಸಾಹಿ ಯುವಕ ಶ್ರೀಧರ್ ರವರ ಕಥೆ-ಚಿತ್ರಕಥೆ-ನಿರ್ದೇಶನದ ಕಾರಂಜಿ ಸಂಗೀತ ಪ್ರೇಮಿಗಳಿಗೆ, ಚಿತ್ರ ಪ್ರೇಮಿಗಳಿಗೆ ಸಂಗೀತದ ರಸದೌತಣ ನೀಡಲಿದೆ. ಈಗಾಗಲೇ ಚಿತ್ರದ ಪ್ರಥಮ ಪ್ರತಿ ಕೂಡ ಹೊರಬಂದು ಕಳೆದವಾರ ಸೆನ್ಸಾರ್ ಮಂಡಳಿಯ ಸದಸ್ಯರ ಮುಂದೆ ಪ್ರದರ್ಶನಗೊಂಡಿತು. ಬಹಳದಿನಗಳ ನಂತರ ಒಂದು ಕಿವಿಗೆ ಇಂಪಾದ, ಕಣ್ಣಿಗೆ ತಂಪಾದ ಸಂಗೀತ ದೃಶ್ಯಗಳನ್ನೊಳಗೊಂಡ ಚಿತ್ರನೋಡಿದ ಅನುಭವವಾಯಿತು ಎಂದು ಮುಕ್ತಕಂಠದಿಂದ ಪ್ರಶಂಸಿಸಿ 'ಯು'ಪ್ರಮಾಣ ಪತ್ರ ನೀಡಿದ್ದಾರೆ.
ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ವೀರಸಮರ್ಥ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಗಿಟಾರ್, ಡ್ರಮ್ಸ್, ಹಾಗೂ ಕೊಳಲು ಸೇರಿದಂತೆ ಇನ್ನೂ ಅನೇಕ ನೈಜ ವಾದ್ಯ ಪರಿಕರಗಳನ್ನು ಬಳಸಿ ಈ ಚಿತ್ರದ ಸಂಗೀತಕ್ಕೆ ನೈಜತೆಯ ಜೀವ ತುಂಬಿದ್ದಾರೆ. ಅಲ್ಲದೇ, ಇಡೀ ಚಿತ್ರದಲ್ಲಿ ಹೊಸ ಪ್ರತಿಭೆಗಳೇ ತುಂಬಿರುವುದರಿಂದ ಚಿತ್ರದಲ್ಲಿ ಹೊಸತನ ಕೂಡ ಎದ್ದುಕಾಣುತ್ತದೆ. ಇನ್ನೊಂದು ಮ್ಯೂಸಿಕಲ್ ಹಿಟ್ ಆಗುತ್ತದೆ ಎನ್ನುತ್ತಾರೆ 'ಎಕ್ಸ್ ಕ್ಯೂಸ್ ಮಿ' ನಿರ್ಮಾಪಕ ಎನ್.ಎಂ. ಸುರೇಶ್. ಗುರು ಪ್ರಶಾಂತರ ಅತ್ಯುತ್ತಮ ಛಾಯಾಗ್ರಹಣ ಇದ್ದು, ವಿಜಯರಾಘವೇಂದ್ರ, ಸುರ್ ಖ್ಯಾತಿಯ ಗೌರಿ ಕಾರ್ನಿಕ್, ಚಂದನ್, ಚೇತನ್, ನಂಜುಂಡ, ರಾಜ್ ಹಾಗೂ ಎಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್, ಸುಧಾ ಬೆಳವಾಡಿ, ಅರವಿಂದ ಶ್ರೀಧರ ಅಲ್ಲದೆ ನಿರ್ಮಾಪಕ ಎನ್.ಎಂ. ಸುರೇಶ್ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಕನ್ನಡಕ್ಕೆ
ಗುಂಗುರು
ಕೂದಲ
ಚೆಲುವೆ
ಗೌರಿ!
ಸಂಗೀತಮಯ
ಚಿತ್ರ
ಕಾರಂಜಿ
ಮುನ್ನೋಟ