Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೃಹಬಂಧನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್!
ಗಣೇಶ್ ಕುಟುಂಬದ ಮೂಲದ ಪ್ರಕಾರ ಈ ತಿಂಗಳ 27ನೇ ತಾರೀಕಿನ ನಂತರ ಗಣೇಶ್ ದರ್ಶನವಾಗುತ್ತದೆ. ಸದ್ಯಕ್ಕೆ ತನ್ನ ನಾಗರಬಾವಿ ಮನೆಯಲ್ಲಿರುವ ಗಣೇಶ್ ಜ್ಯೋತಿಷಿಗಳು ಆದೇಶವನ್ನು ಶಿರಸಾ ಪಾಲಿಸುತ್ತಿದ್ದಾರೆ. ಮಾರ್ಚ್ ತಿಂಗಳಿಂದ ಗಣೇಶ್ ತನ್ನ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿ ಗೃಹಬಂಧನದಲ್ಲಿದ್ದಾರೆ. ಕನ್ನಡ ಚಿತ್ರರಂಗದ ಅಮೃತ ಮಹೋತ್ಸವದ ನಂತರ ಗಣೇಶ್ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.
ಗರುಡ ಮಾಲ್ ವ್ಯವಸ್ಥಾಪಕ ನಂದೀಶ್ ತನ್ನ ಮಾಲ್ ನ ನಾಲ್ಕನೇ ವರ್ಷದ ಆಚರಣೆಗೆ ಮೇ 22 ರಂದು ಮುಖ್ಯ ಅತಿಥಿಯಾಗಿ ಭಾಗವಹಿಸಲು ಗಣೇಶ್ ಅವರನ್ನು ಕೇಳಿಕೊಂಡಾಗ ಗಣೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದರಂತೆ. ಈಗ ಬರಲು ಸಾಧ್ಯವಿಲ್ಲ. ಮೇ.27 ರ ನಂತರ ಕರೆಯಿರಿ ಬೇಕಾದರೆ ಬರುತ್ತೇನೆ ಎಂದು ಗಣೇಶ್ ಉತ್ತರ ಕೊಟ್ಟರಂತೆ.
ಗಣೇಶ್ ಗೆ ತನಗೆ ಈ ಹಿಂದಿನ ಯಶಸ್ಸು ಸಿಗುವುದು ಕಷ್ಟ. ಜುಲೈ ತಿಂಗಳ ನಂತರ ಸುಧಾರಿಸಿಕೊಂಡರೂ ತನ್ನ ಹಿಂದಿನ ಆ ಜನಪ್ರಿಯತೆ ಮತ್ತೆಂದೂ ಸಿಗುವುದಿಲ್ಲ ಎಂದು ಗಣೇಶ್ ಅವರ ಜ್ಯೋತಿಷಿ ಬಸವರಾಜ್ ಹೇಳಿದ್ದಾರೆ. ಹಾಗಾಗಿ ಗಣೇಶ್ ತಾತ್ಕಾಲಿಕವಾಗಿ ತನಗೆ ತಾನೇ ಗೃಹಬಂಧನವನ್ನು ವಿಧಿಸಿಕೊಂಡಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)