ರಾಜ್‌ಗೆ ಭಾರತ ರತ್ನ; ಅಡ್ಡಗಾಲು ಹಾಕಿದ್ದ ವ್ಯಕ್ತಿ ಯಾರು?

By Rajendra

ಭಾನುವಾರ (ಏ.24)ರಂದು ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಈ ನೆಪದಲ್ಲಿ ಅವರನ್ನು ನೆನೆಸಿಕೊಳ್ಳಲು, ಪರಸ್ಪರ ಸಂಭ್ರಮ ಸಡಗರಗಳನ್ನು ಹಂಚಿಕೊಳ್ಳಲು ಅಭಿಮಾನಿ ದೇವರುಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಕರ್ನಾಟಕ ರತ್ನ ಪುರಸ್ಕೃತ ರಾಜಣ್ಣನಿಗೆ ದೇಶದ ಅತ್ಯುನ್ನತ ಪುರಸ್ಕಾರ ಭಾರತರತ್ನ ನೀಡಬೇಕಾಗಿತ್ತು ಎಂಬ ಕೂಗು ಮುಂಚಿನಿಂದಲೂ ಕೇಳಿಬರುತ್ತಿದೆ. ಆದರೆ ರಾಜ್‌ಗೆ ಭಾರತ ರತ್ನ ನೀಡಲು ರಾಜ್ಯ ರಾಜಕಾರಣಿಯೊಬ್ಬ ಅಡ್ಡಗಾಲು ಹಾಕಿದ್ದರು ಎಂಬ ಅಂಶ ಈಗ ದಿಢೀರ್ ಎಂದು ಸ್ಫೋಟಗೊಂಡಿದೆ.

1990ರಲ್ಲೇ ರಾಜ್ ಅವರಿಗೆ ಭಾರತ ರತ್ನ ಸಿಗುವ ಸಾಧ್ಯತೆಗಳಿತ್ತು. ಅಂದಿನ ಪ್ರಧಾನಿ ವಿ ಪಿ ಸಿಂಗ್ ಅವರಿಗೆ ಪ್ರಶಸ್ತಿ ನೀಡುವ ಸಂಬಂಧ ಮನವಿ ಸಲ್ಲಿಸಲಾಗಿತ್ತು. ಪ್ರಧಾನಿ ಕಚೇರಿಯಿಂದಲೂ ಸಕಾರಾತ್ಮಕ ಸ್ಪಂದನೆಯೂ ಲಭ್ಯವಾಗಿತ್ತು.ಆದರೆ ರಾಜ್ಯ ರಾಜಕಾರಣಿಯೊಬ್ಬರು ಹಾಕಿದ ಅಡ್ಡಗಾಲಿನ ಕಾರಣ ಅಣ್ಣಾವ್ರಿಗೆ ಈ ಪುರಸ್ಕಾರ ಕೈತಪ್ಪಿತು ಎಂಬ ಮಾತುಗಳು ಕೇಳಿಬಂದಿವೆ.

ಈ ಗಂಭೀರ ಆರೋಪವನ್ನು ಮಾಡಿರುವವರು ಟಿಡಿಆರ್ ಹರಿಶ್ಚಂದ್ರಗೌಡ. ಆದರೆ ಆ ರಾಜಕಾರಣಿ ಯಾರು? ಯಾವ ಕ್ಷೇತ್ರದವರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.ರಾಜ್ ಹುಟ್ಟುಹಬ್ಬ ಸಮೀಪಿಸುತ್ತಿದ್ದಂತೆ ಹರಿಶ್ಚಂದ್ರಗೌಡ ಅವರು ಈ ಗಂಭೀರ ಆರೋಪ ಮಾಡಿ ಗಮನಸೆಳೆದಿದ್ದಾರೆ. ಅವರು ಆದಷ್ಟು ಬೇಗ ರಾಜಕಾರಣಿಯ ಹೆಸರನ್ನೂ ಬಹಿರಂಗಪಡಿಸಿದರೆ ಮತ್ತಷ್ಟು ಸತ್ಯಾಸತ್ಯತೆಗಳು ಹೊರಬೀಳುವ ಸಾಧ್ಯತೆಗಳಿವೆ.

More from Filmibeat

English summary
TDR Harishchandra Gowda has alleged that one of the state politician tried to block Bharat Ratna to Dr Rajkumar. In 1990 Dr Raj had been nominated for the highest civilian award. But the politician's wrong statement messed up everything and Raj missed Bharat Ratna. Who is that politician?!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X