Don't Miss!
- News Karnataka Lok Sabha Elections: ರಾಷ್ಟ್ರೀಯ ಮುಖಂಡರು VS ರಾಜ್ಯ ನಾಯಕರು; ಗೆಲ್ಲೋದು ಯಾರು?
- Automobiles ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- Lifestyle ರಸ್ತೆ ಬದಿಯ ಮರಗಳಿಗೆ ಬಣ್ಣ ಏಕೆ ಬಳಿದಿರುತ್ತಾರೆ..? ಕೆವಿನ್ ಪೀಟರ್ಸನ್ಗೆ ಈ ಪ್ರಶ್ನೆ ಕಾಡಿದ್ದೇಕೆ..?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ತಾರ ಫಸ್ಟ್, ಮಲ್ಲಿಗೆ ನೆಕ್ಸ್ಟ್, ಆಮೇಲೆ ಅನಾಥರು!
ಈವಾರದ ಟಾಪ್ 5 ಕನ್ನಡ ಚಲನಚಿತ್ರಗಳು ಇಲ್ಲಿವೆ. ಬಾಕ್ಸಾಫೀಸ್ ಗಳಿಕೆ ಮೇಲೆ ಚಿತ್ರಗಳಿಗೆ ಶ್ರೇಯಾಂಕ ನೀಡಲಾಗಿದೆ.
1. ಚೆಲುವಿನ ಚಿತ್ತಾರ : ವರ್ಷದ ಮೆಗಾ ಹಿಟ್ ಸಿನಿಮಾ ಎನ್ನುವ ಖ್ಯಾತಿಗೆ ಚಿತ್ತಾರ ಪಾತ್ರವಾಗಿದೆ. ಕಾದಲ್ ತಮಿಳು ಚಿತ್ರದ ಕನ್ನಡ ರೂಪವೇ ಈ ಚಿತ್ತಾರ. ಮುಂಗಾರು ಮಳೆಗಿಂತಲೂ ಹೆಚ್ಚಿನ ಹಣ ಸಂಗ್ರಹಿಸುವ ಸೂಚನೆಗಳು ಸಿಕ್ಕಿವೆ. ಎಸ್.ನಾರಾಯಣ್ ಅಂತೂ ಖುಷಿಯಲ್ಲಿ ತೇಲುತ್ತಿದ್ದಾರೆ. ಈ ರೀಮೇಕ್ ಚಿತ್ರ ಗೆದ್ದ ಖುಷಿಯಲ್ಲಿಯೇ, ಇನ್ನೊಂದು ರೀಮೇಕ್ ಸಿನಿಮಾ ತೆಗೆಯುವ ಅಪಾಯವೂ ಇದೆ! ಚಿತ್ರದ ಗೆಲುವಿಗೆ ಗಣೇಶ್ ಮತ್ತು ಅಮೂಲ್ಯ ಕಾರಣ ಎಂಬುದನ್ನು ನಾರಾಯಣ್ ಮರೆಯದಿದ್ದರೇ ಸಾಕು ಎನ್ನುತ್ತಾರೆ ಪ್ರೇಕ್ಷಕರು.
2. ಮಾತಾಡ್ ಮಾತಾಡು ಮಲ್ಲಿಗೆ : ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರಕ್ಕೆ ನಾಲ್ಕನೇ ವಾರ. ಮಣ್ಣಿನ ಮಗನ ಪಾತ್ರದಲ್ಲಿ ವಿಷ್ಣು, ಹಳ್ಳಿ ಹೆಂಗಸಿನ ಪಾತ್ರದಲ್ಲಿ ಸುಹಾಸಿನಿ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗಿದೆ. ಜಾಗತೀಕರಣದ ವಿರುದ್ಧ ಈ ಚಿತ್ರದ ಮುಖಾಂತರ ನಾಗತಿ ಕಪ್ಪು ಬಾವುಟ ಹಾರಿಸಿದ್ದಾರೆ.
3. ಅನಾಥರು : ತಮಿಳಿನ 'ಪಿತಾಮಗನ್'ಚಿತ್ರ ಕನ್ನಡದಲ್ಲಿ 'ಅನಾಥರು' ಆಗಿ ಹೊರಬಂದಿದೆ. ನಿರ್ದೇಶಕ ಸಾಧು ಕೋಕಿಲಾ ಶ್ರಮ ವ್ಯರ್ಥವಾಗಿಲ್ಲ. ಉಪೇಂದ್ರ ಅಭಿನಯ ಅವರ ಅಭಿಮಾನಿಗಳಿಗೆ ಬಹುದಿನಗಳ ನಂತರ ಮತ್ತೆ ಇಷ್ಟವಾಗಿದೆ. ದರ್ಶನ್ ಪಾತ್ರವೂ ಮೆಚ್ಚುಗೆಗೆ ಪಾತ್ರವಾಗಿದೆ.
4. ಮಿಲನ : ಖುಷಿ ಪ್ರಕಾಶ್ ಅವರ ಮಿಲನವನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಮತ್ತೆ ಗೆದ್ದಿದ್ದಾರೆ. ಮನೋ ಮೂರ್ತಿ ಸಂಗೀತ ನಿರ್ದೇಶನದಲ್ಲಿನ ಹಾಡುಗಳು ಮಧುರ.. ಸುಮನೋಹರ. 'ಕದ್ದುಕದ್ದು ನೋಡೋ ಕಳ್ಳ ಯಾರೋ ಗೀತೆ'ಯಂತೂ ಎಲ್ಲೆಲ್ಲೂ ಕೇಳಿಬರುತ್ತಿದೆ.
5. ಮುಂಗಾರು ಮಳೆ : ಹೊಸ ಚಿತ್ರಗಳ ಮಧ್ಯೆಯೂ 'ಮಳೆ'ಸುರಿಯುತ್ತಿದೆ. ಚಿತ್ರ ಒಂದು ವರ್ಷ ಪೂರೈಸುವ ಸಾಧ್ಯತೆಗಳಿವೆ.