ಒಳಗೆ ಸೇರಿದರೆ ಗುಂಡು ವಿದ್ಯಾ ಬಾಲನ್ ಆಗುವಳು ಗಂಡು!
ಬಾಲಿವುಡ್ ತಾರೆ ವಿದ್ಯಾ ಬಾಲನ್ ಗುಂಡು ಹಾಕಿ ತೂರಾಡಿದ ಪ್ರಸಂಗವಿದು. ಥೇಟ್ ನಮ್ಮ 'ನಂಜುಂಡಿ ಕಲ್ಯಾಣ'ದ ಮಾಲಾಶ್ರೀ ಅವರಂತೆ ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು ಎಂದು ಚಿತ್ರೀಕರಣದಲ್ಲಿ ತೂರಾಡಿದ್ದಾರೆ. ವಿದ್ಯಾರ ತೂರಾಟ ನೋಡಿ ನಿರ್ದೇಶಕ ಸುಜಾಯ್ ಗೋಷ್ ಕ್ಷಣಕಾಲ ದಂಗಾಗಿದ್ದಾರೆ.
ಹಿಂದಿಯ 'ಕಹಾನಿ' ಚಿತ್ರದ ಪೋಟೋ ಶೂಟ್ ನಡೆಯುತ್ತಿದ್ದ ಸಂದರ್ಭವದು. ವಿದ್ಯಾ ಬಾಲನ್ ಎಲ್ಲಿ ಎಂದು ಕೇಳಿದ ನಿರ್ದೇಶಕರ ಮುಂದೆ ಆಕೆ ತೂರಾಡುತ್ತಾ ಬಂದು ನಿಂತರು. ಇದನ್ನು ಕಂಡ ಸುಜೋಯ್ ಕ್ಷಣಕಾಲ ತಬ್ಬಿಬ್ಬಾದರು. ಆದರೆ ಇದು ಕೇವಲ ನಟನೆ ಅಷ್ಟೆ ಎಂಬುದು ಸ್ವಲ್ಪ ಸಮಯದ ಬಳಿಕ ಅಲ್ಲಿದ್ದ ಎಲ್ಲರಿಗೂ ಮನದಟ್ಟಾಗಿದೆ! ಬಳಿಕ ಆಕೆಯ ನಟನೆಗಯನ್ನು ಎಲ್ಲರೂ ಕೊಂಡಾಡಿದರಂತೆ.
ಒಟ್ಟಿನಲ್ಲಿ ಕೊಂಚ ಕಾಲ ಸೆಟ್ನಲ್ಲಿದ್ದ ಎಲ್ಲರನ್ನೂ ವಿದ್ಯಾ ತಬ್ಬಿಬ್ಬುಗೊಳಿಸಿದ್ದರು. ಅಂದಹಾಗೆ ಈ ಚಿತ್ರದಲ್ಲಿ ಈಕೆ ಗರ್ಭಿಣಿ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲಂಡನ್ನಿಂದ ಈಕೆಯ ಪತಿ ಉದ್ಯೋಗ ಹುಡುಕಿಕೊಂಡು ಭಾರತಕ್ಕೆ ಬರುತ್ತಾನೆ. ಪತಿಯನ್ನು ಹುಡುಕಿಕೊಂಡು ಈಕೆ ಕೋಲ್ಕತ್ತಾಗೆ ಹೋಗುತ್ತಾಳೆ. ಮುಂದೇನಾಗುತ್ತದೆ ಎಂಬುದೇ ಚಿತ್ರದ ಕಥೆ! (ಏಜೆನ್ಸೀಸ್)


Click it and Unblock the Notifications











