Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಾಂಪತ್ಯಕ್ಕೆ ಅಡಿಯಿಟ್ಟ ಶಂಕರನಾಗ್ ಮಗಳು ಕಾವ್ಯ
ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ಮತ್ತು ದಿವಂಗತ ನಟ ಶಂಕರನಾಗ್ ಅವರ ಮಗಳು ಕಾವ್ಯ ನಾಗ್ ಭಾನುವಾರ(ಜ.25) ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಬಾಲ್ಯದ ಗೆಳೆಯ ಸಲೀಲ್ ಅವರನ್ನು ಕಾವ್ಯ ಬೆಂಗಳೂರು ಹೊಸೂರು ರಸ್ತೆಗೆ ಸಮೀಪದ ಮಣಿಪಾಲ್ ಕಂಟ್ರಿ ರೆಸಾರ್ಟ್ ನಲ್ಲಿ ಮದುವೆಯಾದರು.
ಸಲೀಲ್ ವೃತ್ತಿಯಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರೆ ಕಾವ್ಯ ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉನ್ನತ ವ್ಯಾಸಂಗಕ್ಕಾಗಿ ಕಾವ್ಯ ಮತ್ತು ಸಲೀಲ್ ನೂತನ ದಂಪತಿಗಳು ಶೀಘ್ರದಲ್ಲೇ ಇಂಗ್ಲೆಂಡ್ ಗೆ ಹಾರಲಿದ್ದಾರೆ.
ಕಾವ್ಯ ಅವರ ದೊಡ್ಡಪ್ಪ ಅನಂತನಾಗ್, ಕನ್ನಡ ಚಿತ್ರರಂಗದ ನಟರಾದ ರಮೇಶ್ ಅರವಿಂದ್, ಪ್ರಣಯರಾಜ ಶ್ರೀನಾಥ್, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್, ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡ್, ನಟಿ ಸುಮಲತಾ ಅಂಬರೀಷ್ ಸೇರಿದಂತೆ ಹಲವು ಚಿತ್ರನಟರು ಮತ್ತು ರಂಗಭೂಮಿ ಕಲಾವಿದರು ಆಗಮಿಸಿದ್ದರು.
ಮದುವೆ ಸಮಾರಂಭಕ್ಕೆ ಆರ್ ಕೆ ನಾರಾಯಣ್ ಅವರ ಜನಪ್ರಿಯ ಕಾದಂಬರಿ 'ಮಾಲ್ಗುಡಿ ಡೇಸ್'ಪಾತ್ರಧಾರಿಗಳು ಆಗಮಿಸಿದ್ದದ್ದು ವಿಶೇಷವಾಗಿತ್ತು. ಕಾವ್ಯ ಮತ್ತು ಸಲೀಲ್ ಅವರ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಹಾರೈಸೋಣ.