Don't Miss!
- News Lok Sabha Election: ಗೂಗಲ್ನಲ್ಲೂ ಪ್ರಜಾಪ್ರಭುತ್ವದ ಹಬ್ಬದ ಸಂಭ್ರಮ
- Automobiles Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುಣ್ಯವಂತನಿಗೆ ಇನ್ನೂ ಶುಭಮುಹೂರ್ತ ಕೂಡಿಬಂದಿಲ್ಲ
ನಾಗೇಂದ್ರಪ್ರಸಾದ್ ಗೀತರಚನೆಕಾರ ಕಮ್ ನಿರ್ದೇಶಕ. ನಿರ್ದೇಶನದಲ್ಲಿ ಇದುವರೆಗೂ ಅಂತ ಹೇಳಿಕೊಳ್ಳುವಂಥ ಯಶಸ್ಸು ಸಿಕ್ಕಿಲ್ಲವಾದರೂ, ಗೀತರಚನೆಕಾರರಾಗಿ ಅವರು ಇವತ್ತಿಗೂ ಬ್ಯುಸಿ. ಅವರ ನಿರ್ದೇಶನದ ಕೊನೆಯ ಚಿತ್ರ 'ವಿನಾಯಕ ಗೆಳೆಯರ ಬಳಗ'. ಅದಾದ ಮೇಲೆ ಅವರ ಸದ್ದಿರಲಿಲ್ಲ. ಈಗೊಂದು ಹೊಸ ಚಿತ್ರ ಅನೌನ್ಸ್ ಮಾಡುವ ಮೂಲಕ ನಾಗೇಂದ್ರ ಪ್ರಸಾದ್ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಹೆಸರು 'ಪುಣ್ಯವಂತ'.
ಶಿವರಾಜ್ಕುಮಾರ್ ಈಗಾಗಲೇ ಒಪ್ಪಿಕೊಂಡು ಚಿತ್ರೀಕರಣದಲ್ಲಿರುವ ಸಿನಿಮಾಗಳ ಸಂಖ್ಯೆಯೇ ಬೆಚ್ಚಿಬೀಳಿಸುವಂತಿದೆ. ಅದರ ನಡುವೆಯೇ ತೂರಿ ಬಂದಿರುವ ಹೆಸರು ಪುಣ್ಯವಂತ. ನಾಗೇಂದ್ರ ಪ್ರಸಾದ್ ಒಪ್ಪಿಸಿರುವ ಸ್ಕ್ರಿಪ್ಟ್ ಶಿವಣ್ಣ ಒಪ್ಪಿದ್ದಾರಂತೆ. ಆದರೆ ಪುಣ್ಯದ ಕೆಲಸದ ಆರಂಭ ಯಾವಾಗ ಅನ್ನೋದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.
ಶಿವಣ್ಣ ತನ್ನ ಕಮಿಟೆಡ್ ಸಿನಿಮಾಗಳನ್ನೆಲ್ಲ ಮುಗಿಸಿದ ಆಮೇಲಷ್ಟೇ ಪುಣ್ಯವಂತ ಸಿನಿಮಾವಾದ್ದರಿಂದ, ಸದ್ಯಕ್ಕೆ ನಾಗೇಂದ್ರ ಪ್ರಸಾದ್ ಕೂಡಾ ಈ ವಿಷಯದಲ್ಲಿ ಹೆಚ್ಚು ಗುಟ್ಟೊಡೆಯುವುದಿಲ್ಲ. ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೈನರ್ ಅನ್ನೋದು ಅವರ ಸದ್ಯದ ಪ್ರತಿಕ್ರಿಯೆ. ನಟರಾಜ್ ಮತ್ತು ಮುನಿರಾಜ್ ಎಂಬುವವರು ಪುಣ್ಯವಂತನಿಗೆ ಕಾಸು ಸುರಿಯುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)