For Daily Alerts
Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್ ಜತೆ ನಾರಾಯಣ್ ಚಿತ್ರ 'ವೀರ ಪರಂಪರೆ'
News
oi-Rajendra Chintamani
By Rajendra
|
ಎಸ್ ನಾರಾಯಣ್ ನಿರ್ದೇಶಿಸಿ, ನಿರ್ಮಿಸುತ್ತಿರುವ ಸುದೀಪ್ ಚಿತ್ರಕ್ಕೆ 'ವೀರ ಪರಂಪರೆ' ಎಂದು ಹೆಸರಿಡಲಾಗಿದೆ. 'ವೀರ ಪರಂಪರೆ' ಚಿತ್ರ ಮಾರ್ಚ್ ಅಂತ್ಯಕ್ಕೆ ಅಥವಾ ಏಪ್ರಿಲ್ ಮೊದಲ ವಾರದಿಂದ ಚಿತ್ರೀಕರಣ ಆರಂಭಿಸಲಿದೆ. ಇದು ತಮಿಳಿನ 'ಸಾಮಿ' ಚಿತ್ರದ ರೀಮೇಕ್ ಅಲ್ಲ ಎಂದು ಎಸ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.
ಇದೊಂದು ಅಪ್ಪಟ ಸ್ವಮೇಕ್ ಚಿತ್ರವಾಗಿದ್ದು ನಾರಾಯಣ್ ಬಹಳ ಹಿಂದೆಯೆ ಕತೆಯನ್ನು ಸಿದ್ಧಪಡಿಸಿದ್ದರಂತೆ. ಸುದೀಪ್ ಜೊತೆ ಕೋಮಲ್, ಶರಣ್, ಶ್ರೀನಿವಾಸಮೂರ್ತಿ ಮೊದಲಾದವರಿದ್ದಾರೆ. ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಕನ್ನಡದ ಹೊಸ ಮುಖಕ್ಕಾಗಿ ಹುಡುಕಾಟ ನಡೆದಿದೆ.
'ವೀರ ಪರಂಪರೆ' ಚಿತ್ರದ ನಾಯಕಿಗಾಗಿ ಈ ಹಿಂದೆ ಅರ್ಜಿ ಕರೆಯಲಾಗಿತ್ತು. ಅವಕಾಶ ಕೋರಿ ಬಂದಿರುವ ಪತ್ರಗಳಲ್ಲಿ ಸೂಕ್ತ ನಾಯಕಿಗಾಗಿ ಹುಡುಕಾಟ ಮುಂದುವರಿದಿದೆ. ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಎಸ್ ನಾರಾಯಣ್ ಅವರೇ ವಹಿಸಿಕೊಂಡಿದ್ದಾರೆ. 'ಚೆಲುವಿನ ಚಿಲಿಪಿಲಿ' ಚಿತ್ರಕ್ಕೆ ಕೆಲಸ ಮಾಡಿದ್ದ ಜಗದೀಶ್ ವಾಲಿ ಛಾಯಾಗ್ರಹಣ ಚಿತ್ರಕ್ಕಿರುತ್ತದೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: sudeep ಸುದೀಪ್ ಕೋಮಲ್ komal ಎಸ್ ನಾರಾಯಣ್ s narayan ವೀರ ಪರಂಪರೆ ಶ್ರೀನಿವಾಸಮೂರ್ತಿ veera parampare srinivasa murthy
Friday, February 26, 2010, 14:47 Story first published: Friday, February 26, 2010, 14:47 [IST]
Other articles published on Feb 26, 2010