ಬಾಕ್ಸಾಫೀಸ್ ಗಳಿಕೆ ಮುಖ್ಯ; ಶತದಿನೋತ್ಸವ ಅಲ್ಲ

ರವಿಚಂದ್ರನ್ 75ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಾನು ಕೇವಲ ನಾಲ್ಕು ಚಿತ್ರಗಳಲ್ಲಿ ಮಾತ್ರ ಅಭಿನಯಿಸಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆರಂಭದ ಐದು ವರ್ಷಗಳಲ್ಲಿ ರವಿಚಂದ್ರನ್ ಸಹ ಬಹಳಷ್ಟು ಹೆಣಗಾಡಬೇಕಾಯಿತು. 'ಪ್ರೇಮ ಲೋಕ' ಚಿತ್ರದ ನಂತರವೇ ಅವರ ಅದೃಷ್ಟ ಬದಲಾಗಿದ್ದು ಎಂಬ ಕಾರಣಗಳನ್ನು ಕೊಡುತ್ತಾರೆ ಬಾಲಾಜಿ.
ಚಿತ್ರವೊಂದು ಶತದಿನೋತ್ಸವ ಆಚರಿಸಿಕೊಂಡಿದೆ ಎಂಬುದು ಮುಖ್ಯವಲ್ಲ. ಬಾಕ್ಸಾಫೀಸ್ ನಲ್ಲಿ ಎಷ್ಟು ಲಾಭ ಮಾಡಿದೆ ಎಂಬುದು ಮುಖ್ಯ. ಅಹಂ ಪ್ರೇಮಾಸ್ಮಿ ಚಿತ್ರವನ್ನು ರವಿಚಂದ್ರನ್ ಮತ್ತೊಂದು ಪ್ರೇಮಲೋಕ ಎಂದೇ ತಿಳಿದಿದ್ದರು. ಆದರೆ ಆ ಚಿತ್ರ ಶತದಿನ ಆಚರಿಸಿಕೊಳ್ಳಲಿಲ್ಲ ಎಂಬುದು ನಿಜ, ಬಾಕ್ಸಾಫೀಸ್ ನಲ್ಲಿ ಗೆದ್ದಿದೆ ಎಂಬುದೂ ಅಷ್ಟೇ ನಿಜ. ರಾಜ್ ಕುಮಾರಿ ಚಿತ್ರ ಪರೀಕ್ಷೆಗಳ ಸಮಯದಲ್ಲಿ ಬಿಡುಗಡೆಯಾದ ಕಾರಣ ಪ್ರೇಕ್ಷಕರನ್ನ್ನು ಸೆಳೆಯಲಿಲ್ಲ ಎನ್ನುತ್ತಾರೆ ಬಾಲಾಜಿ.
'ಇನಿಯಾ' ಚಿತ್ರ ಪ್ರೇಮಿಸುವವರಿಗೆ, ಪ್ರೇಮಿಗಳಿಗೆ ಮತ್ತು ಪ್ರೇಮದಲ್ಲಿ ಬಿದ್ದವರಿಗಾಗಿ. ಪೂಜಾಗಾಂಧಿ ಅವರೊಂದಿಗೆ ಕೆಲಸ ಮಾಡಿದ್ದು ನಿಜಕ್ಕೂ ಅದ್ಭುತ ಅನುಭವ. ಕನ್ನಡ ಕಲಿಯಬೇಕೆಂಬ ಅವರ ಆಸಕ್ತಿ ನಿಜಕ್ಕೂ ಮೆಚ್ಚುವಂತಹದ್ದು. ಪ್ರಸ್ತುತ ರವಿಚಂದ್ರನ್ ಅವರು ಮಂಜಿನ ಹನಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅದರ ನಂತರ ಅವರ ಮುಂದಿನ ಚಿತ್ರ 'ಚಂದಮಾಮ' ದಲ್ಲಿ ನನಗೆ ಅವಕಾಶ ಕೊಡುವ ಸಾಧ್ಯತೆಗಳಿವೆ ಎನ್ನುತ್ತಾರೆ ಬಾಲಾಜಿ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











