ಅಶೋಕ್ ಕಶ್ಯಪ್ ನಿರ್ದೇಶನದಲ್ಲಿ ಜಗ್ಗೇಶ್ ಚಿತ್ರ
ನವರಸ ನಾಯಕ ಜಗ್ಗೇಶ್ ಅವರ ಹೊಸ ಚಿತ್ರಕ್ಕೆ ಮುಹೂರ್ತ ನಿಗದಿಯಾಗಿದೆ. ನವೆಂಬರ್ 23 ರಂದು ಜಗ್ಗೇಶ್ ಅವರ ಹೊಸ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಗುರುರಾಜ್ ಜಗ್ಗೇಶ್ ಅವರ 'ಗಿಲ್ಲಿ' ಚಿತ್ರದ ಬಳಿಕ ಜಗ್ಗೇಶ್ ಅಖಾಡಕ್ಕೆ ಇಳಿಯುತ್ತಿದ್ದಾರೆ.
ಶಂಕರ್ ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಚಿತ್ರದ ನಿರ್ದೇಶನ ಹಾಗೂ ಛಾಯಾಗ್ರಹಣ ಜವಾಬ್ದಾರಿಯನ್ನು ಅಶೋಕ್ ಕಶ್ಯಪ್ ಹೊತ್ತಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತ ಮಂಜು ಮಾಂಡವ್ಯ ಅವರ ಸಂಭಾಷಣೆ ಚಿತ್ರಕ್ಕಿರುತ್ತದೆ.
'ಚಿಕ್ಕಪೇಟೆ ಸಾಚಾಗಳು' ಚಿತ್ರದ ನಂತರ ಜಗ್ಗೇಶ್ ಅಭಿನಯಿಸುತ್ತಿರುವ ಚಿತ್ರ ಇದಾಗಿದೆ. 'ಎದ್ದೇಳು ಮಂಜುನಾಥ' ಚಿತ್ರದಲ್ಲಿ ಅಮೋಘವಾಗಿ ನಟಿಸಿ ಕುಡುಕರ ಕಣ್ಣ್ಣುತೆರೆಸಿದ ಜಗ್ಗೇಶ್, ಇದೀಗ ಯಾವ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂಬ ಕುತೂಹಲ ಉಂಟಾಗಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಜಗ್ಗೇಶ್ jaggesh ಗಿಲ್ಲಿ ಮಣಿಕಾಂತ್ ಕದ್ರಿ ಅಶೋಕ್ ಕಶ್ಯಪ್ ashok kashyap manikanth khadri manju mandavya ಮಂಜು ಮಾಂಡವ್ಯ shanker reddy ಶಂಕರ್ ರೆಡ್ಡಿ


Click it and Unblock the Notifications