Don't Miss!
- News ಕಾಂಗ್ರೆಸ್ ಜನರಿಗೆ ಹೋಲ್ಸೆಲ್ ಮೋಸ ಮಾಡುತ್ತಿದೆ: ಮಾಜಿ ಸಿಎಂ
- Sports ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ನಲ್ಲಿ ವಿರಾಟ್ ಕೊಹ್ಲಿಯ 50ನೇ ಏಕದಿನ ಶತಕ!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಿತ್ರಮಂದಿರಗಳಲ್ಲಿ ಇಂದು ಹರಿಯಲಿದೆ ರಕ್ತದ ಕೋಡಿ
ಗಜೇಂದ್ರ ನಿರ್ಮಿಸುತ್ತಿರುವ 'ಅಗ್ರಹಾರ' ಮತ್ತು ಎರ್ರಾಸ್ವಾಮಿ ನಿರ್ಮಿಸುತ್ತಿರುವ 'ಗುಣ' ಅಪ್ಪಟ ರೌಡಿಸಂ ಚಿತ್ರಗಳು. ಅಗ್ರಹಾರ ಚಿತ್ರದ ನಾಯಕ ಆರ್ಯ ಮತ್ತು ಗುಣ ಚಿತ್ರದಲ್ಲಿ ವೆಂಕಟೇಶ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಒತ್ತಲು ಕಾತರರಾಗಿದ್ದಾರೆ. ವಿಶೇಷವೆಂದರೆ ಈ ಮೂವರೂ ನಾಯಕರಾಗಿ ಪ್ರಥಮ ಬಾರಿಗೆ ನಟಿಸುತ್ತಿರುವುದು. ಗುಣ ಚಿತ್ರದಲ್ಲಿ ವಿಶೇಷ ಭೂಮಿಕೆಯಲ್ಲಿ ದುನಿಯಾ ಖ್ಯಾತಿಯ ವಿಜಯ್ ಬಂದುಹೋಗಲಿದ್ದಾರೆ.
ಮನಸಿಗೆ ತಟ್ಟುವ ನವಿರಾದ ಕಥೆಯಿರುವ ಹೊಸ ನಾಯಕರಿರುವ ಹೊಸ ಚಿತ್ರಗಳನ್ನು ಚಿತ್ರಪ್ರೇಮಿಗಳು ಬರಸೆಳೆದು ಅಪ್ಪಿಕೊಳ್ಳುತ್ತಿದ್ದಾರೆ. ಆದರೆ ಈ ಮೂರೂ ಚಿತ್ರಗಳು ಹೃದಯ ಬಗೆಯುವ ಚಿತ್ರಗಳು. ಇವುಗಳನ್ನೂ ಕನ್ನಡಿಗರು ಕೈಬಿಡುವುದಿಲ್ಲ ಎಂಬ ನಂಬಿಕೆಯಿದೆ ಈ ನಟರಿಗೆ. ಆಲ್ ದಿ ಬೆಸ್ಟ್.
ಕನ್ನಡ ಚಿತ್ರರಂಗ ಪ್ರಕಾಶಿಸುತ್ತಿದೆ!
***
ಸವಿಸವಿ ನೆನಪು, ನಿನ್ನದೆ ನೆನಪುಗಳಂಥ ಸ್ವಮೇಕ್ ಚಿತ್ರಗಳು ಹೇಳಹೆಸರಿಲ್ಲದಂತೆ ನೆಲಕಚ್ಚುತ್ತಿರುವಾಗ ತಮಿಳು ಕಾದಲ್ ಚಿತ್ರದ ಪಡಿಯಚ್ಚಾಗಿರುವ 'ಚೆಲುವಿನ ಚಿತ್ತಾರ' ಬಿಡುಗಡೆಯಾಗ ಎಲ್ಲಾ ಚಿತ್ರಮಂದಿರಗಳಲ್ಲೂ ಸೆಂಚುರಿ ಬಾರಿಸಿ ಸ್ವಮೇಕು ಸ್ವಮೇಕು ಎಂದು ಕೂಗುವವರ ಬಾಯಿಯನ್ನು ಮುಚ್ಚಿಸಿಬಿಟ್ಟಿದೆ. ಸದ್ಯಕ್ಕೆ ಕಲಾಸಾಮ್ರಾಟ್ ಎಸ್.ನಾರಾಯಣ್ ಚಾಲ್ತಿಯಲ್ಲಿರುವ ಅತ್ಯಂತ ಬೇಡಿಕೆಯ ನಿರ್ದೇಶಕ. ಹೊಗಳಿಕೆ ತೆಗಳಿಕೆ ಎರಡನ್ನೂ ಸಮಾನವಾಗಿ ಸ್ವೀಕರಿಸಿರುವ ಚಿತ್ತಾರದ ಶತದಿನೋತ್ಸವ ಸಮಾರಂಭ ಅಕ್ಟೋಬರ್ 8ರಂದು ಅರಮನೆ ಮೈದಾನದಲ್ಲಿರುವ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ. ಪಾಸ್ ಬೇಕೆಂದರೆ ಕ್ಯಾಸೆಟ್ ಅಥವ ಆಡಿಯೋ ಸಿಡಿ ಕೊಳ್ಳುವುದು ಕಡ್ಡಾಯ.
***
ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ಪ್ರಥಮ ಚಿತ್ರ ಚೆಲ್ಲಾಟ, ಮುಂಗಾರು ಮಳೆ, ಹುಡುಗಾಟ ಮತ್ತು ಚೆಲುವಿನ ಚಿತ್ತಾರ ಎಲ್ಲವೂ ಶತದಿನೋತ್ಸವ ಆಚರಿಸಿಕೊಂಡಿವೆ. ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಬಿಟ್ಟರೆ ಯಾವ ನಾಯಕನ ಚಿತ್ರಗಳೂ ಹ್ಯಾಟ್ರಿಕ್ ಆಚರಿಸಿರಲಿಲ್ಲ. ಪುನೀತ್ರ ಅಭಿನಯದ ಮೂರನೇ ಚಿತ್ರ 'ವೀರ ಕನ್ನಡಿಗ' ಚಿತ್ರ ತೊಂಬತ್ತೊಂಬತ್ತಕ್ಕೆ ಔಟಾಗಿ ಅವರು ಹ್ಯಾಟ್ರಿಕ್ ಹೀರೊ ಆಗುವುದನ್ನು ತಪ್ಪಿಸಿತ್ತು. ಪ್ರೇಮ್ಕುಮಾರ್ ಕೂಡ 'ಪಲ್ಲಕ್ಕಿ' ಸೋಲಿನಿಂದ ಹ್ಯಾಟ್ರಿಕ್ ಹೀರೊ ಆಗಲಿಲ್ಲ ನೆನಪಿರಲಿ.
***
ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ ಚಿತ್ರಮಂದಿರ ಸಿಕ್ಕಿಲ್ಲವೆಂದು ಗೋಳಿಡುತ್ತಿದ್ದ ಪ್ರಿಯಾ ಹಾಸನ್ ಅಭಿನಯಿಸಿ ನಿರ್ದೇಶಿಸಿರುವ ಜಂಬದ ಹುಡುಗಿ ಚಿತ್ರ ಕೈಬಿಟ್ಟ ಚಿತ್ರಗಳ ಡಾರ್ಲಿಂಗ್ ಸಪ್ನ ಚಿತ್ರಮಂದಿರದಲ್ಲಿ ಶತದಿನೋತ್ಸವ ಆಚರಿಸಿದೆ. ಅದೇ ಚಿತ್ರಮಂದಿರದಲ್ಲಿ ಮತ್ತೆರಡು ಚಿತ್ರಗಳಾದ ಜಗ್ಗೇಶ್ ಅವರ 'ಮನ್ಮಥ' ಮತ್ತು ಮಯೂರ್ ಅಭಿನಯದ 'ನಿನ್ನದೇ ನೆನಪು' ಎರಡೆರಡು ಆಟಗಳನ್ನು ಆಡುತ್ತಿವೆ. ಅವೂ ಶತದಿನೋತ್ಸವ ಆಚರಿಸಬಹುದು. ಸ್ವಲ್ಪ ದಿನ ಕಾಯಿರಿ.