Don't Miss!
- News ಹಾಸನದಲ್ಲಿ ಬಿಜೆಪಿಯ ಸಹಕಾರವಿಲ್ಲ, ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ: ಮತ್ತೆ ಸಂಕಷ್ಟದಲ್ಲಿ ದಳಪತಿ
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ಹುಬ್ಬಳ್ಳಿ’ಮಾಡಿ ಓಂಪ್ರಕಾಶ್ ಗೆದ್ದ! ‘ಕೆಂಪೇಗೌಡ’ಗೆ ಸೈ ಅಂದ!
‘ತುಂಟ’ ಚಿತ್ರದಿಂದಾಗಿದ್ದ ನಷ್ಟ ‘ಹುಬ್ಬಳ್ಳಿ’ ಮೂಲಕ ಭರ್ತಿ... ಪ್ರತಿ ಚಿತ್ರದಲ್ಲೂ ಓಂಪ್ರಕಾಶ್ ನಂಬುವ ರಕ್ಷಿತಾ ಮತ್ತು ಮಚ್ಚು-ಲಾಂಗ್ಗಳು ಅವರಿಗೆ ಮೋಸ ಮಾಡಿಲ್ಲ!
‘ಹುಬ್ಬಳ್ಳಿ’ ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟ, ನಿರ್ದೇಶಕ-ನಿರ್ಮಾಪಕ ಎನ್.ಓಂಪ್ರಕಾಶ್ರಾವ್, ಮತ್ತೊಂದು ಸಲ ಸುದೀಪ್ ಅವರನ್ನೇ ಹಾಕಿಕೊಂಡು ‘ಕೆಂಪೇಗೌಡ’ ಎಂಬ ಚಿತ್ರ ನಿರ್ಮಿಸಲು ಸಜ್ಜಾಗಿದ್ದಾರೆ.
ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ. ಈ ಮೊದಲು ಇದೇ ಹೆಸರನ್ನು ನಿರ್ಮಾಪಕ ಸೂರಪ್ಪ ಬಾಬು ನೋಂದಾಯಿಸಿಕೊಂಡಿದ್ದರು. ಉಪೇಂದ್ರ ಅವರನ್ನು ಹಾಕಿಕೊಂಡು ಸೂರಪ್ಪ ಚಿತ್ರ ಮಾಡಲು ಹೊರಟಿದ್ದು ಹಳೆಯ ಕಥೆ. ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಮುಠಾಮೇಸ್ತ್ರಿ’ ಚಿತ್ರದ ರೀಮೇಕ್ಗೆ ಈ ಹೆಸರನ್ನು ಪಡೆಯಲಾಗಿತ್ತು.
ಆದರೆ ಓಂಪ್ರಕಾಶ್ ಸದ್ಯಕ್ಕೆ ‘ಕೆಂಪೇಗೌಡ’ ಎಂಬ ಹೆಸರನ್ನು ಮಾತ್ರ ತೆಗೆದುಕೊಂಡಿದ್ದಾರೆ. ಈ ಚಿತ್ರ ‘ಮುಠಾಮೇಸ್ತ್ರಿ’ಯ ರೀಮೇಕ್ ಅಲ್ವಂತೆ. ಚಿತ್ರದ ಮುಹೂರ್ತ 2007ನೇ ವರ್ಷದ ಜನವರಿ 14ರಂದು, ಬೆಂಗಳೂರಿನಲ್ಲಿ ನಡೆಯಲಿದೆ.
ಚಿತ್ರಕ್ಕಾಗಿ ಓಂಪ್ರಕಾಶ್ ಸಾಕಷ್ಟು ಸಂಶೋಧನೆ ಕೂಡ ಮಾಡಿದ್ದಾರೆ. ಅಂದಹಾಗೆ, ಸುದೀಪ್ ಒಂದು ವರ್ಷದ ಹಿಂದೆಯೇ ಈ ಕಥೆಯನ್ನು ಕೇಳಿಸಿಕೊಂಡಿದ್ದಾರಂತೆ.
ಎರಡು ವಾರಗಳ ಹಿಂದೆ ತೆರೆಕಂಡಿರುವ ‘ಹುಬ್ಬಳ್ಳಿ’ ಈಗಾಗಲೇ 3ಕೋಟಿ ರೂಪಾಯಿ ಗಳಿಸಿದೆ. ಒಟ್ಟು 49ಪ್ರಿಂಟ್ ಹಾಕಿಸಲಾಗಿದ್ದು, ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ‘ತುಂಟ’ ಚಿತ್ರದಿಂದ ಆಗಿದ್ದ ನಷ್ಟವನ್ನು ತುಂಬಿಕೊಂಡಿದ್ದೇನೆ ಎಂದು ಹೇಳಲು ಓಂಪ್ರಕಾಶ್ರಾವ್ ಮರೆಯುವುದಿಲ್ಲ.