Don't Miss!
- News DK Shivakumar: ಕಾಂಗ್ರೆಸ್ ಭವಿಷ್ಯದಲ್ಲಿ ನನ್ನನ್ನು ಸಿಎಂ ಮಾಡಲಿದೆ
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡಕ್ಕೆ ಸಿಕ್ಕಾಪಟ್ಟೆ ಹೊಡೆತ ಕೊಟ್ಟ ತೆಲುಗು ಚಿತ್ರ 'ರಚ್ಚ'
ತೆಲುಗು ಚಿತ್ರಗಳಿಗೆ ಭಾರಿ ಮಾರ್ಕೆಟ್ ಇರೋದು ಆಂಧ್ರ ಬಿಟ್ಟರೆ ನಮ್ಮ ಬೆಂಗಳೂರೇ ಅನ್ನಿಸುತ್ತದೆ. ಪರಭಾಷಾ ಚಿತ್ರಗಳ ಹೊಡೆತಕ್ಕೆ ಕನ್ನಡ ಚಿತ್ರಗಳು ತತ್ತರಿಸುತ್ತಿವೆ. ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅಭಿನಯದ 'ರಚ್ಚ' ಚಿತ್ರ ಗುರುವಾರವೇ (ಏ.5) ತೆರೆಕಂಡಿದೆ.
ಇದರಿಂದ ಶುಕ್ರವಾರ (ಏ.6) ತೆರೆಕಂಡಿರುವ 'ದೇವ್' ಹಾಗೂ 'ಭೀಮಾ ತೀರದಲ್ಲಿ' ಎರಡು ಕನ್ನಡ ಚಿತ್ರಗಳಿಗೆ ಭಾರಿ ಹೊಡೆತ ಬಿದ್ದಂತಾಗಿದೆ. ಬೆಂಗಳೂರು ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ತೆರೆಕಂಡಿರುವ 'ದೇವ್ ಸನ್ ಆಫ್ ಮುದ್ದೇಗೌಡ'ನಿಗೆ ಜನಸಂದಣಿ ಇಲ್ಲ. ಅದೇ ಪಕ್ಕದ ಅಪರ್ಣ ಚಿತ್ರಮಂದಿರದಲ್ಲಿ ತೆರೆಕಂಡಿರುವ 'ರಚ್ಚ' ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಮೂಲಗಳ ಪ್ರಕಾರ 'ರಚ್ಚ' ಚಿತ್ರದ ಬ್ಲಾಕ್ ಟಿಕೆಟ್ ರು.800ಕ್ಕೆ ಮಾರಾಟವಾಗಿದೆಯಂತೆ. ಗುರುವಾರ ತೆರೆಕಂಡ 'ರಚ್ಚ' ಚಿತ್ರದ ಟಿಕೆಟ್ಗಾಗಿ ಜನ ಬೆಳಗ್ಗೆ 5 ಗಂಟೆಯಿಂದಲೇ ಕಾದಿದ್ದಾರೆ. ಕೆ ಆರ್ ಪುರಂನ ವೆಂಕಟೇಶ್ವರ ಚಿತ್ರಮಂದಿರದಲ್ಲಿ 11.30ಕ್ಕೆ ಆರಂಭವಾಗಬೇಕಿದ್ದ ಶೋ 7.30ಕ್ಕೆ ಆರಂಭವಾಗಿದೆ. ಕರ್ನಾಟಕದಲ್ಲಿ ತೆಲುಗು ಚಿತ್ರಗಳ ಹವಾ ಹೇಗಿದೆ ನೋಡಿ.
ಈ ಹಿಂದೆಯೂ ರಾಮ್ ಚರಣ್ ತೇಜ ಅಭಿನಯದ ಮಗಧೀರ ಚಿತ್ರ ಅಗತ್ಯಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆಗಲೂ ಅಷ್ಟೇ ಕನ್ನಡ ಚಿತ್ರಗಳಿಗೆ ಭಾರಿ ಹೊಡೆತ ನೀಡಿತ್ತು. ಈಗ ರಚ್ಚ ಮೂಲಕ ಮತ್ತೆ ಅದೇ ರೀತಿಯ ಸಮಸ್ಯೆ ಎದುರಾಗಿದೆ. (ಏಜೆನ್ಸೀಸ್)