Don't Miss!
- News ಮಳೆ.. ಮಳೆ.. ಗುಡುಗು ಸಹಿತ ಭರ್ಜರಿ ಮಳೆಗೆ ತತ್ತರಿಸಿದ ಕರ್ನಾಟಕ!
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿಗೆ ವಂಚಿಸಿದ ರೌಡಿ ಕುಣಿಗಲ್ ಗಿರಿ ಸಹೋದರ: ದೂರು ದಾಖಲು
ಕುಖ್ಯಾತ ರೌಡಿ ಕುಣಿಗಲ್ ಗಿರಿಯ ಸಹೋದರ ಹರೀಶ ನಟಿಯೊಬ್ಬರಿಗೆ ವಂಚಿಸಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೆಗ್ಗನಹಳ್ಳಿ ನಿವಾಸಿಯಾದ ಯುವತಿಯೊಬ್ಬರು ಸಿನಿಮಾ, ಧಾರಾವಾಹಿಗಳಲ್ಲಿ ಸಹ ಕಲಾವಿದೆಯಾಗಿ ನಟಿಸುತ್ತಾ ನಗರದಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಇದನ್ನು ಅರಿತ ಹರೀಶ ಮಹಿಳೆಯನ್ನು ನಂಬಿಸಿ ಆಕೆಯೊಂದಿಗೆ ಪ್ರೀತಿ ನಾಟಕವಾಡಿದ್ದಾನೆ.
ಆಕೆಯನ್ನು ಮಾತಿನಲ್ಲೇ ಮರುಳು ಮಾಡಿ ಯಾರ ಹಾಜರಿಯೂ ಇಲ್ಲದೆ ಮನೆಯಲ್ಲಿಯೇ ಮದುವೆಯಾಗಿ ತಾಳಿ ಸಹ ಕಟ್ಟಿದ್ದಾನೆ. ಮದುವೆಯಾದ ಬಳಿಕ ಆಕೆಯ ಬಳಿ ಇದ್ದ ಚಿನ್ನಾಭರಣ ಹಾಗೂ 2.50 ಲಕ್ಷ ಹಣ ದೋಚಿ ಪರಾರಿಯಾಗಿದ್ದಾನೆ.
ಹಣ, ಚಿನ್ನಾಭರಣ ತೆಗೆದುಕೊಂಡು ಹೋದ ಬಳಿಕ ಹರೀಶ್, ಸಹ ಕಲಾವಿದೆಯೊಂದಿಗೆ ಸಂಪರ್ಕ ಕಡಿದುಕೊಂಡಿದ್ದ. ಹರೀಶ್ ಕುರಿತಾಗಿ ಮಹಿಳೆ ವಿಚಾರಿಸಿದಾಗ ತಿಳಿದು ಬಂದಿದೆ ಹರೀಶ್ಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆಂದು.
ಇದಾದ ಬಳಿಕ ನ್ಯಾಯ ಕೇಳಲೆಂದು ಸಹ ಕಲಾವಿದೆಯು ಹರೀಶ್ ಪತ್ನಿ ಹಾಗೂ ಅತ್ತೆಯ ಬಳಿ ಹೋದಾಗ ಇಬ್ಬರೂ ಈ ಯುವತಿಯನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿ ಕಳಿಸಿದ್ದಾರೆ. ನಂತರ ಯುವತಿಯು ರಾಜಗೋಪಾಲನಗರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಹರೀಶ್ನನ್ನು ಠಾಣೆಗೆ ಕರೆಸಿದ ಪೊಲೀಸರು ಆತನಿಂದ ಒಂದು ಲಕ್ಷ ಹಣದ ಚೆಕ್ ಅನ್ನು ಯುವತಿಗೆ ಕೊಡಿಸಿದ್ದಾರೆ.
ಆ ಚೆಕ್ ಅನ್ನು ಬ್ಯಾಂಕ್ಗೆ ಹಾಕಿದಾಗ ಖಾತೆಯಲ್ಲಿ ಹಣವಿಲ್ಲ ಎಂಬುದು ಗೊತ್ತಾಗಿದೆ. ಈ ಬಗ್ಗೆ ಹರೀಶ್ನನ್ನು ಪ್ರಶ್ನೆ ಮಾಡಿದಾಗ ಹರೀಶ್ ಗಲಾಟೆ ಮಾಡಿ ಯುವತಿಯ ಮೊಬೈಲ್ಗಳನ್ನು ಒಡೆದು ಹಾಕಿದ್ದಾನೆ. ಪತ್ನಿಯಿಂದ ಸಹ ಕಲಾವಿದೆಗೆ ಕರೆ ಮಾಡಿಸಿ, ಕುಣಿಗಲ್ ಗಿರಿ ನನ್ನ ಮೈದುನ ಅವನಿಗೆ ಹೇಳಿ ನಿನ್ನ ಕೊಲೆ ಮಾಡಿಸುವೆ ಎಂದು ಬೆದರಿಕೆ ಹಾಕಿಸಿದ್ದಾನೆ. ಅದಾದ ಕೆಲವೇ ಹೊತ್ತಿಗೆ ಬೇರೆ ಸಂಖ್ಯೆಯಿಂದ ಸಹ ಕಲಾವಿದೆಗೆ ಕರೆ ಬಂದಿದ್ದು ತಾನು ಕುಣೀಗಲ್ ಗಿರಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಯುವತಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದೆಲ್ಲವನ್ನೂ ಸಹ ಕಲಾವಿದೆಯೂ ದೂರಿನಲ್ಲಿ ದಾಖಲಿಸಿದ್ದಾಳೆ.