Don't Miss!
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪವನ್ ಕಲ್ಯಾಣ್ ಗೆ ಸಿಕ್ಕ ಅತ್ಯಮೂಲ್ಯ ಗಿಫ್ಟ್ ಯಾವ್ದು?
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಂದ್ರೇನೇ ಹಾಗೆ, ಟಾಲಿವುಡ್ ನ ಹೈವೋಲ್ಟೇಜ್ ಕರೆಂಟ್ ಇದ್ಹಾಗೆ. ರೀಲ್ ನಲ್ಲಿ ಪವನ್ ಕಲ್ಯಾಣ್ ಹೇಗೆ ಪವರ್ ಫುಲ್ಲೋ, ರಿಯಲ್ ನಲ್ಲೂ ಅಷ್ಟೇ ಡೇರಿಂಗ್ ಅಂಡ್ ಡ್ಯಾಶಿಂಗ್.
ಇದೇ ಕಾರಣಕ್ಕೆ ಟಾಲಿವುಡ್ ನ ಪವರ್ ಸ್ಟಾರ್ ಗೆ ಅತಿ ಹೆಚ್ಚು ಫ್ಯಾನ್ ಫಾಲೋವಿಂಗ್ ಇರುವುದು. ಆಡುವ ಒಂದೊಂದು ಮಾತಲ್ಲೂ ಪವರ್ ಪಂಚ್ ಕೊಡುವ ಪವನ್ ಕಂಡ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಅಕ್ಕರೆ. ಎಲ್ಲೇ ಹೋದರೂ ಅವರನ್ನ ಜಪಿಸುವ ಆಭಿಮಾನಿಗಳಿಗೆ ಆರಾಧ್ಯಧೈವ ಈ ತೆಲುಗಿನ ಗಬ್ಬರ್ ಸಿಂಗ್. [ಪವರ್ ಸ್ಟಾರ್ ಪವನ್ ಕಲ್ಯಾಣ್ ಆಸ್ತಿಪಾಸ್ತಿ ಅಷ್ಟೇನಾ?]
ಮಾಸ್
ಅಭಿಮಾನಿಗಳ
ಪಾಲಿಗೆ
ಅಕ್ಷರಶಃ
ದೇವರಾಗಿರುವ
ಪವರ್
ಸ್ಟಾರ್
ಗೆ
ಅಭಿಮಾನಿಯೊಬ್ಬರಿಂದ
ಬೆಲಕಟ್ಟಲಾಗದ
ಅತ್ಯಮೂಲ್ಯ
ಉಡುಗೊರೆಯೊಂದು
ಸಿಕ್ಕಿದೆ.
ಆ
ಉಡುಗೊರೆಯೇ
ಈ
ಏಳುವರೆ
ಅಡಿ
ಎತ್ತರದ
ಕಂಚಿನ
ಪ್ರತಿಮೆ.
ಪವನ್ ಕಲ್ಯಾಣ್ ರವರ ಕಟ್ಟಾ ಅಭಿಮಾನಿಯಾಗಿರುವ ಚಂದು ಮೋಹನ್ ಎಂಬುವರು ಪವರ್ ಸ್ಟಾರ್ ಗಾಗಿ ಈ ಪ್ರತಿಮೆ ರೂಪಿಸಿದ್ದಾರೆ. 'ಜನಸೇನ' ಪಕ್ಷದ ಉದ್ಘಾಟನಾ ಸಮಾರಂಭದಲ್ಲಿ ಪವನ್ ಕಲ್ಯಾಣ್ ಆಡಿದ ಮಾತುಗಳಿಂದ ಪ್ರೇರಣೆ ಪಡೆದಿರುವ ಚಂದು ಮೋಹನ್, ಅಂದು ಪವನ್ ಭಾಷಣ ಮಾಡಿದ ಸ್ಟೈಲ್ ನಲ್ಲೇ ಪ್ರತಿಮೆ ನಿರ್ಮಿಸಿದ್ದಾರೆ.
'ಅನ್ಯಾಯವನ್ನ ಪ್ರಶ್ನಿಸಿ, ನ್ಯಾಯಕ್ಕಾಗಿ ಹೋರಾಡುವ' ಪವನ್ ಕಲ್ಯಾಣ್, ಚಂದು ಮೋಹನ್ ಪಾಲಿಗೆ ಕಲಿಯುಗದ ದೇವರಂತೆ. ಹೀಗಾಗಿ ಅವರ ಪ್ರತಿಮೆಯನ್ನು ನಿರ್ಮಿಸಿ, ಅವರ ಸಂದೇಶವನ್ನು ಇಡೀ ಜಗತ್ತಿಗೆ ಸಾರಲು ಮುಂದಾಗಿದ್ದಾರೆ. ಈಗಾಗ್ಲೇ ಮಣ್ಣಿನಿಂದ ರೂಪ ಪಡೆದುಕೊಂಡುಕೊಂಡಿರುವ ಪ್ರತಿಮೆಗೆ ಇನ್ನು ಕೆಲವೇ ದಿನಗಳಲ್ಲಿ ಕಂಚಿನ ಲೇಪನವನ್ನು ನೀಡ್ತಾರಂತೆ. [ಪವನ್ ಚಿತ್ರದ 'ಪವರ್ ಫುಲ್'ಗಳಿಕೆ ಕುಸಿತ]
ಪ್ರತಿಮೆ ಸಂಪೂರ್ಣವಾಗಿ ರೆಡಿಯಾದ ನಂತರ ಪಶ್ಚಿಮ ಗೋದಾವರಿಯ ತಡೆಪಲ್ಲಿಗುಡೆಮ್ ನಲ್ಲಿರುವ ಹೈವೇ ರೋಡ್ ನಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು ಅಂತ ಚಂದು ಮೋಹನ್ ತಿಳಿಸಿದ್ದಾರೆ. ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಾಗಿರುವ ಈ ಪ್ರತಿಮೆಯ ಅನಾವರಣ, ಪವನ್ ಕಲ್ಯಾಣ್ ಕೈಯಿಂದಲೇ ಆಗಬೇಕು ಅನ್ನುವ ಆಸೆ ಅಭಿಮಾನಿಗಳದ್ದು. ಇದಕ್ಕೆ 'ಗೋಪಾಲ ಗೋಪಾಲ' ಅಸ್ತು ಅನ್ನುತ್ತಾರಾ..?? (ಏಜೆನ್ಸೀಸ್)