Don't Miss!
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೋಧಿ ಹಿಟ್ಟಿನ ಪಾಕೆಟ್ನಲ್ಲಿ 15,000 ಹಣ ಇಟ್ಟು ಕೊಟ್ಟರೇ ಅಮೀರ್ ಖಾನ್? ಸತ್ಯವೇನು?
ಕೊರೊನಾ ಸಂಕಷ್ಟದ ಸಮಯದಲ್ಲಿ ಸ್ಟಾರ್ ನಟರು ಬಹುಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ. ಬಾಲಿವುಡ್ನಲ್ಲಿಯಂತೂ ಟಾಪ್ ನಟರುಗಳು ಪೈಪೋಟಿಗೆ ಬಿದ್ದಂತೆ ದೇಣಿಗೆಗಳನ್ನು ಘೋಷಿಸುತ್ತಿದ್ದಾರೆ.
Recommended Video
ನಟ ಅಕ್ಷಯ್ ಕುಮಾರ್ 25 ಕೋಟಿ ಘೋಷಿಸಿದರೆ. ಶಾರುಖ್ ಖಾನ್ ಮೂರು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ದೇಣಿಗೆ ನೀಡುವ ಜೊತೆಗೆ ದಿನಸಿ, ಆಹಾರ, ವೈದ್ಯರಿಗೆ ಜೀವರಕ್ಷಕ ಕಿಟ್ಗಳು ನೀಡಿದ್ದಾರೆ. ಇದಕ್ಕೆಲ್ಲಾ ಕಳಶವಿಟ್ಟಂತೆ ತನ್ನ ನಾಲ್ಕಂತಸ್ತಿನ ಕಚೇರಿಯನ್ನು ಕೊರೊನಾ ರೋಗಿಗಳ ಉಪಚಾರಕ್ಕೆ ಕೊಟ್ಟುಬಿಟ್ಟಿದ್ದಾರೆ.
ಇವೆಲ್ಲವುದರ ನಡುವೆ ಹೆಚ್ಚು ಸುದ್ದಿ ಮಾಡುತ್ತಿರುವುದೆಂದರೆ ಅಮೀರ್ ಖಾನ್ ಮಾಡಿದ್ದಾರೆ ಎನ್ನಲಾದ ಸಹಾಯ. ಹೌದು, ಅಮೀರ್ ಖಾನ್ ಬಡವರ ಮನೆಗೆ ಬುದ್ಧಿವಂತಿಕೆಯಿಂದ 15,000 ನಗದು ತಲುಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಬಹಳ ವೈರಲ್ ಆಗಿದೆ.
ಅಮೀರ್ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ
ಕೊಲ್ಯಾಜ್ ಮಾಡಿದ, ಗೋದಿ ಹಿಟ್ಟಿನ ಸಣ್ಣ-ಸಣ್ಣ ಪ್ಯಾಕೆಟ್ಗಳಲ್ಲಿ ಕಂತೆ ಹಣ ಇರುವ ಚಿತ್ರ, ಅಮೀರ್ ಖಾನ್ ಕೈ ಬೀಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಗೋಧಿ ಹಿಟ್ಟಿನ ಸಣ್ಣ ಪ್ಯಾಕೆಟ್ನಲ್ಲಿ ಹದಿನೈದು ಸಾವಿರ ಹಣ ಇಟ್ಟುಕೊಟ್ಟಿದ್ದಾರೆ ಅಮೀರ್ ಖಾನ್ ಎಂಬ ಸಂದೇಶ ಚಿತ್ರದೊಂದಿಗೆ ಹರಿರಾಡುತ್ತಿದೆ.
ಸುದ್ದಿ ಪ್ರಾರಂಭವಾಗಿದ್ದು ಟಿಕ್ಟಾಕ್ ನಿಂದ
ಈ ಸುದ್ದಿ ಪ್ರಾರಂಭವಾಗಿದ್ದು ಟಿಕ್ಟಾಕ್ ನಿಂದ. ಅಲ್ಲಿ ಒಬ್ಬಾತ, ಅಮೀರ್ ಖಾನ್ ಗೋಧಿ ಹಿಟ್ಟಿನ ಸಣ್ಣ ಪ್ಯಾಕೆಟ್ಗಳ ಟ್ರಕ್ ಅನ್ನು ದೆಹಲಿಗೆ ಕಳುಹಿಸಿದ್ದರು. ಸಣ್ಣ ಪ್ಯಾಕೆಟ್ಗಳಾದ್ದರಿಂದ ಕೇವಲ ಬಡವರಷ್ಟೆ ಆ ಪ್ಯಾಕೆಟ್ಗಳನ್ನು ತೆಗೆದುಕೊಂಡು ಹೋದರು, ಪ್ಯಾಕೆಟ್ಗಳನ್ನು ತೆಗೆದಾಗ ಅದರಲ್ಲಿ ಹಣ ಇತ್ತು. ಪ್ರತಿ ಪ್ಯಾಕೆಟ್ನಲ್ಲಿ ಹದಿನೈದು ಸಾವಿರ ಹಣ ಇಟ್ಟಿದ್ದರು ಅಮೀರ್ ಖಾನ್ ಎಂದು ಒಬ್ಬಾತ ವಿಡಿಯೋ ಮಾಡಿ ಹಾಕಿದ್ದ.
|
ಕೆಲವೇ ಗಂಟೆಗಳಲ್ಲಿ ವೈರಲ್ ಆದ ವಿಡಿಯೋ
ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಯಿತು. ಚಿತ್ರಗಳೂ ಸಹ ಕೆಲವೇ ನಿಮಿಷದಲ್ಲಿ ವೈರಲ್ ಆದವು. ಅಮೀರ್ ಖಾನ್ ಮಾಡಿರುವ ಸಹಾಯ ನೇರವಾಗಿ ಬಡವರಿಗೆ ತಲುಪಿದೆ. ಬಡವರು ಮಾತ್ರವೇ ಎತ್ತಿಕೊಳ್ಳಲೆಂದು ಹಿಟ್ಟಿನ ಸಣ್ಣ ಪ್ಯಾಕೆಟ್ಗಳನ್ನೇ ಮಾಡಿ ಹಂಚಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗಿದೆ.
ಮಾಡಿದ ಸಹಾಯ ಹೇಳಿಕೊಳ್ಳುವುದಿಲ್ಲ ಅಮೀರ್ ಖಾನ್
ಬೇರೆ ನಟರ ರೀತಿಯಲ್ಲಿ ತಾವು ಮಾಡಿದ ಸಹಾಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುವ ಕಾರ್ಯವನ್ನು ಅಮೀರ್ ಖಾನ್ ಈ ವರೆಗೆ ಮಾಡಿಲ್ಲ. ಹಾಗಾಗಿಯೇ ಈ ಗೋಧಿ ಹಿಟ್ಟಿನಲ್ಲಿ ಹಣ ಇಟ್ಟಿರುವ ಕಾರ್ಯ ಅಮೀರ್ ಮಾಡಿರಬಹುದು ಎಂಬ ಅನುಮಾನ ಮತ್ತಷ್ಟು ಬಲವಾಗಿದೆ. ಅಮೀರ್ ಖಾನ್ ನಡೆಸುವ 'ವಾಟರ್ ಕಪ್' ನಿಂದಾಗಿ ನೂರಾರು ಹಳ್ಳಿಗಳು ನೀರಿನ ಸ್ವಾವಂಬಿಗಳಾಗಿವೆ ಆದರೆ ಅವರೆಂದೂ ಅದರಿಂದ ಪ್ರಚಾರ ಪಡೆದುಕೊಂಡವರಲ್ಲ.
ಸ್ಪಷ್ಟ ಮಾಹಿತಿ ಲಭ್ಯವಿಲ್ಲ
ಹಿಟ್ಟಿನ ಪ್ಯಾಕೆಟ್ನಲ್ಲಿ ಹಣ ಇಟ್ಟು ಹಂಚಿರುವ ಬಗ್ಗೆ ಮಾಹಿತಿ ಪಡೆಯಲೆಂದು ಕೆಲವು ಮಾಧ್ಯಮಗಳು ಅಮೀರ್ ಖಾನ್ ಅವರನ್ನು ಸಂಪರ್ಕ ಮಾಡಿವೆಯಾದರೂ ಸ್ಪಷ್ಟತೆ ಲಭ್ಯವಾಗಿಲ್ಲ. ಇದು ಸುಳ್ಳು ಸುದ್ದಿಯಾಗಿರುವ ಸಾಧ್ಯತೆಯೇ ಹೆಚ್ಚಾಗಿದೆ.