ಅವಕಾಶ ಕೊಡಿಸುವುದಾಗಿ 'ವಠಾರ' ಧಾರಾವಾಹಿ ನಟಿಗೆ ವಂಚನೆ

By Pavithra

Recommended Video

ಹಿರಿಯ ನಟಿಗೆ 15 ಲಕ್ಷ ಪಂಗನಾಮ ಹಾಕಿದ ಭೂಪ..! | Filmibeat Kannada

'ವಠಾರ', 'ಬದುಕು', 'ರಂಗೋಲಿ' ಧಾರಾವಾಹಿಗಳ ಮೂಲಕ ಮನೆ ಮಾತಾಗಿದ್ದ ನಟಿ ಮಂಜುಳಮ್ಮ ಅವರಿಗೆ ಪಾತ್ರ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನವೀನ್ ರೈ ಎನ್ನುವ ಧಾರಾವಾಹಿ ನಿರ್ದೇಶಕನಿಂದ ಹಿರಿಯ ನಟಿ ಮೋಸ ಹೋಗಿದ್ದಾರೆ.

ನವೀನ್ ರೈ ಹಿಂದಿನಿಂದಲೂ ಧಾರಾವಾಹಿಗಳಲ್ಲಿ ಮಂಜುಳಮ್ಮ ಅವರಿಗೆ ಸಣ್ಣ ಪುಟ್ಟ ಪಾತ್ರಗಳನ್ನು ಕೊಡಿಸುತ್ತಾ ಬಂದಿದ್ದ. ನಂತರ 'ಸಣ್ಣಮ್ಮನ ಅಜ್ಜಿ' ಎನ್ನುವ ಹೆಸರಿನಲ್ಲಿ ಕಿರುಚಿತ್ರ ಮಾಡಲು ಮುಂದಾಗಿದ್ದ.

Actor Manjulamma loges complaint against accused Naveen Rai

ಇದೇ ವೇಳೆಯಲ್ಲಿ ಕಿರುಚಿತ್ರ ನಿರ್ಮಾಣಕ್ಕೆ ಹಣ ಬೇಕಿದ್ದ ಕಾರಣ ಮಂಜುಳಮ್ಮ ಅವರ ಬಳಿ ದೊಡ್ಡ ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ 15 ಲಕ್ಷ ಹಣ ಪಡೆದಿದ್ದ. ಹಣ ಪಡೆದು ಎಷ್ಟು ದಿನವಾದರೂ ಪತ್ತೆ ಇಲ್ಲದ ನವೀನ್ ರೈ ಅವರನ್ನು ಹುಡುಕಿಕೊಂಡು ಮಂಜುಳಮ್ಮ, ನವೀನ್ ಮನೆಯ ಬಳಿ ಹೋಗಿದ್ದಾರೆ.

Actor Manjulamma loges complaint against accused Naveen Rai

ನವೀನ್ ರೈ ಯಾರಿಗೂ ಗೊತ್ತಾಗದಂತೆ ಮನೆ ಖಾಲಿ ಮಾಡಿಕೊಂಡು ಪರಾರಿ ಆಗಿರುವ ವಿಚಾರ ತಿಳಿದ ನಂತರ ಕೂಡಲೇ ಈ ಕುರಿತು ಚೆನ್ನಮ್ಮನ ಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸದ್ಯ ಪೊಲೀಸರು ನವೀನ್ ಗಾಗಿ ಹುಡುಕಾಟ ಶುರು ಮಾಡಿದ್ದಾರೆ.

More from Filmibeat

English summary
Actor Manjulamma loges complaint against accused Naveen Rai. Naveen had duped many actors by promising roles in films. Chenammanakere Achhukattu police launches manhunt to nab fraudster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X