Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಸ್ ನಾರಾಯಣ್ ಫಿಲಂ ಇನ್ಸ್ ಟಿಟ್ಯೂಟ್ ಪ್ರಿನ್ಸಿಪಾಲ್
ಕಳೆದ
20
ವರ್ಷಗಳಿಂದ
ಪ್ರಾಂಶುಪಾಲರಾಗಿ
ಸಂಸ್ಥೆಯ
ಸರ್ವತೋಮುಖ
ಏಳಿಗೆಗಾಗಿ
ಹಗಲಿರುಳು
ಶ್ರಮಿಸಿದ್ದರು
ನಿರ್ಮಾಪಕ
ನಿರ್ದೇಶಕ
ದೊರೆ
ಭಗವಾನ್.
ಈಗವರು
ನಿವೃತ್ತರಾಗಿದ್ದು,
ನೂತನ
ಪ್ರಾಂಶುಪಾಲರಾಗಿ
ಎಸ್
ನಾರಾಯಣ್
ಅವರು
ಪದಗ್ರಹಣ
ಮಾಡುತ್ತಿದ್ದಾರೆ.
ಆದರ್ಶ ಫಿಲಂ ಇನ್ಸ್ ಟಿಟ್ಯೂಟ್ ಸರ್ಕಾರದಿಂದ ಅಂಗೀಕೃತವಾದ ಹಾಗೂ ಅನುದಾನಿತ ಸಂಸ್ಥೆ. ಶೀಘ್ರದಲ್ಲೇ ನಾರಾಯಣ್ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇಂದಿನ ಯುವ ಪೀಳಿಗೆಗೆ ಅತ್ಯುತ್ತಮ ಚಿತ್ರಗಳನ್ನು ನೀಡಿದ ಅನುಭವಿ ನಿರ್ದೇಶಕರು.
ಆದರ್ಶ ಫಿಲಂ ಇನ್ಸ್ ಟಿಟ್ಯೂಟ್ ನಿಂದ ಕನ್ನಡ ಚಿತ್ರರಂಗಕ್ಕೆ ಹಲವಾರು ಪ್ರತಿಭಾವಂತ ಕಲಾವಿದರು ಹೊರಬಂದಿದ್ದಾರೆ. ಅವರಲ್ಲಿ ಮುಖ್ಯವಾಗಿ ಜಗ್ಗೇಶ್, ಡಿ.ರಾಜೇಂದ್ರ ಬಾಬು, ಗಣೇಶ್, ಪ್ರಿಯಾ ಹಾಸನ್ ಇಲ್ಲಿ ತರಬೇತಿ ಪಡೆದಂತವರು.
ಇತ್ತ ಪ್ರಿನ್ಸಿಪಾಲ್ ಜವಾಬ್ದಾರಿ ಹೊತ್ತಿರುವ ನಾರಾಯಣ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಇಬ್ಬರೂ ಮತ್ತೊಂದು ಪ್ರಯೋಗಕ್ಕೆ ಸಿದ್ಧವಾಗುತ್ತಿದ್ದಾರೆ. ಅಂದಹಾಗೆ ನಾರಾಯಣ್ ಜೊತೆಗಿನ ಉಪೇಂದ್ರ ಚಿತ್ರಕ್ಕೆ 'ಬೃಹಸ್ಪತಿ' ಎಂದು ಹೆಸರಿಡಲಾಗಿದೆ. (ಒನ್ಇಂಡಿಯಾ ಕನ್ನಡ)