Don't Miss!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಶೀನಾಥ್ 'ಅನುಭವ'ದ ಮೇಲೆ ಬಿತ್ತು ಟಾಪ್ ನಟ-ನಟಿಯರ ಕಣ್ಣು.!
1984ರಲ್ಲಿ ಕಾಶೀನಾಥ್ ನಟಿಸಿ, ನಿರ್ದೇಶನ ಮಾಡಿದ್ದ ಸೂಪರ್ ಹಿಟ್ ಚಿತ್ರ 'ಅನುಭವ'. ಈಗ ಈ ಚಿತ್ರದ ಟೈಟಲ್ ಗಾಗಿ ಕನ್ನಡ ಚಿತ್ರರಂಗದಲ್ಲಿ ಬಾರಿ ಪೈಪೋಟಿ ನಡೆಯುತ್ತಿದೆ. ಇತ್ತೀಚೆಗಷ್ಟೇ ನಟ ನೀನಾಸಂ ಸತೀಶ್ 'ಅನುಭವ-2' ಸಿನಿಮಾ ಮಾಡಲು ಚಿಂತಿಸಿರುವುದಾಗಿ ಸುದ್ದಿಯಾಗಿತ್ತು. ಹೀಗಿರುವಾಗ, 'ಅನುಭವ' ಟೈಟಲ್ ಗೆ ವಿಘ್ನ ಎದುರಾಗಿದೆ.
ಯಾಕಂದ್ರೆ, ಕನ್ನಡ ಮತ್ತೊಬ್ಬ ನಿರ್ದೇಶಕ ಈಗಾಗಲೇ 'ಅನುಭವ-2' ಟೈಟಲ್ ನೋಂದಣಿ ಮಾಡಿದ್ದಾರೆ. ಈ ಚಿತ್ರ ಖ್ಯಾತ ನಟಿಯ ಬಯೋಗ್ರಫಿ ಆಗಿದ್ದು, ದಕ್ಷಿಣ ಭಾರತದ ಸ್ಟಾರ್ ನಟ ಹಾಗೂ ನಟಿ ಅಭಿನಯಿಸುವ ಸಾಧ್ಯತೆ ಇದೆಯಂತೆ.
ಈ ಇಬ್ಬರ ಮಧ್ಯೆ ಮತ್ತೋರ್ವ ನಿರ್ದೇಶಕನೂ ಕೂಡ 'ಅನುಭವ' ಟೈಟಲ್ ಹಿಂದೆ ಬಿದ್ದಿದ್ದಾರಂತೆ. ಹಾಗಿದ್ರೆ, ಅನುಭವ ಟೈಟಲ್ ಯಾರಿಗೆ ಸಿಗುತ್ತೆ? ಎಂದು ತಿಳಿದುಕೊಳ್ಳಲು ಮುಂದೆ ಓದಿ.....
ಸತೀಶ್ ಗೆ ಸಿಗುತ್ತಾ 'ಅನುಭವ-2'?
ನೀನಾಸಂ ಸತೀಶ್ ಅವರ 'ಅನುಭವ-2' ಕಾಶೀನಾಥ್ 'ಅನುಭವ' ಚಿತ್ರದ ಮುಂದುವರೆದ ಭಾಗವಾಗಿದ್ದು, ಈ ಚಿತ್ರದಲ್ಲಿ ಸಿಂಧು ಲೋಕನಾಥ್ ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಉದಯ್ ಮೆಹ್ತಾ ನಿರ್ಮಾಣ ಮಾಡಲಿದ್ದು, ಅರಸು ಅಂತಾರೆ ನಿರ್ದೇಶನವಿದೆಯಂತೆ.
ನಿರ್ಭಯ್ ಚಕ್ರವರ್ತಿಯ 'ಅನುಭವ'
'ವಿಜಯಾಧಿತ್ಯ' ಚಿತ್ರದ ನಿರ್ದೇಶಕ ನಿರ್ಭಯ್ ಚಕ್ರವರ್ತಿ ಅವರ ಬಳಿ 'ಅನುಭವ-2' ಚಿತ್ರದ ಟೈಟಲ್ ಇದೆ. 'ವಿಜಯಾಧಿತ್ಯ' ಚಿತ್ರದ ನಂತರ ನಿರ್ಭಯ್ ಚಕ್ರವರ್ತಿ 'ಅನುಭವ-2' ಸಿನಿಮಾ ಮಾಡಲಿದ್ದಾರಂತೆ. ಇವರ ಚಿತ್ರಕ್ಕೂ, ಕಾಶೀನಾಥ್ ಅವರ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಬದಲಾಗಿ ಇದು ಖ್ಯಾತ ನಟಿಯ ಜೀವನಕಥೆಯಾಗಿರಲಿದೆಯಂತೆ.
ಜಗಪತಿ ಬಾಬು ಮತ್ತು ನಯನತಾರ
ನಿರ್ಭಯ್ ಚಕ್ರವರ್ತಿ ನಿರ್ದೇಶನ ಮಾಡಲಿರುವ 'ಅನುಭವ-2' ಚಿತ್ರ ಖ್ಯಾತ ನಟಿಯ ಜೀವನ ಕಥೆಯಾಗಿದ್ದು, ಈ ಚಿತ್ರಕ್ಕಾಗಿ ಬಹುಭಾಷಾ ನಟಿ ನಯನತಾರ ಅಥವಾ ವಿದ್ಯಾಬಾಲನ್ ಅವರನ್ನ ಆಯ್ಕೆ ಮಾಡಿಕೊಳ್ಳಲು ಚಿಂತಿಸಲಾಗಿದೆಯಂತೆ. ಮತ್ತೊಂದೆಡೆ ತೆಲುಗು ನಟ ಜಗಪತಿ ಬಾಬು ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
'ಎರಡನೇ ಅನುಭವ' ಬೇರೆ ಇದೆ
'ಅನುಭವ-2' ಟೈಟಲ್ ಗಾಗಿ ಈಗಾಗಲೇ ಪೈಪೋಟಿ ನಡೆಯುತ್ತಿದ್ದರೇ, ಮತ್ತೊಬ್ಬ ನಿರ್ದೇಶಕನೂ ಕೂಡ ಅನುಭವದ ಮೇಲೆ ಕಣ್ಣಾಕಿದ್ದಾರಂತೆ. 'ತರ್ಲೆ ನನ್ ಮಕ್ಳು' ಚಿತ್ರ ಮಾಡಿದ್ದ ನಿರ್ದೇಶಕ ರಾಕಿ 'ಎರಡನೇ ಅನುಭವ' ಎನ್ನುವ ಹೆಸರಿನಲ್ಲಿ ಸಿನಿಮಾ ಮಾಡಲು ಸಿದ್ದವಾಗುತ್ತಿದ್ದಾರಂತೆ. ಈ ಚಿತ್ರಕ್ಕೆ ಶುಭಾ ಪೂಂಜಾ ನಾಯಕಿಯಂತೆ.