ಮುಯೆ ಥಾಯ್ನಲ್ಲಿ ಭಾರತಕ್ಕೆ ಹೆಮ್ಮೆ ತಂದ ಅರುಣ್ ಸಾಗರ್ ಪುತ್ರ
ಕನ್ನಡ ನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್ ಅಂತರರಾಷ್ಟ್ರೀಯ ಮಟ್ಟದ ಬಾಕ್ಸರ್ ಎನ್ನುವುದು ತಿಳಿದಿದೆ. ಈಗಾಗಲೇ ಬಾಕ್ಸಿಂಗ್ ಕಲೆಯಲ್ಲಿ ಹಲವು ಚಾಂಪಿಯನ್ ಷಿಪ್ ಗೆದ್ದಿದ್ದಾರೆ.
ಇದೀಗ, ಭಾರತಕ್ಕೆ ಮತ್ತೊಮ್ಮೆ ಹೆಮ್ಮೆ ತಂದಿದ್ದಾರೆ. ಥೈಲ್ಯಾಂಡ್ ನ ಪಟ್ಟಾಯದಲ್ಲಿ ನಡೆದ ಮ್ಯಾಕ್ಸ್ ಮುಯೆಥಾಯ್ ಚಾಂಪಿಯನ್ ಷಿಪ್ ನಲ್ಲಿ ಎದುರಾಳಿ ರೋಬೋಕಾಪ್ ಸೋರ್ ಹೊಡೆದುರುಳಿಸಿ ಗೆಲುವು ಕಂಡಿದ್ದಾರೆ.
ಈ ವಿಷಯವನ್ನು ಖುದ್ದು ಅರುಣ್ ಸಾಗರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಗನ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅರುಣ್ ಸಾಗರ್ ಪುತ್ರನ ಸಾಧನೆಗೆ ನೆಟ್ಟಿಗರು ಶುಭಾಶಯ ತಿಳಿಸಿದ್ದಾರೆ.

ಕಳೆದ ವರ್ಷವೂ ಥೈಲ್ಯಾಂಡ್ನ ಪಟ್ಟಾಯ ನಗರದಲ್ಲಿ ನಡೆದಿದ್ದ ಮುಯೆಥಾಯ್ ಚಾಂಪಿಯಿನ್ ಷಿಪ್ ನಲ್ಲಿ ಅರುಣ್ ಸಾಗರ್ ಮಗ ಭಾಗವಹಿಸಿದ್ದರು.
ಸೂರ್ಯ ಸತತ ನಾಲ್ಕು ವರ್ಷಗಳಿಂದ ಮೈಸೂರಿನ ವಿಕ್ರಮ್ ನಾಗರಾಜ್ ಬಳಿ ಮೌಥಾಯ್ ನಲ್ಲಿ ತರಬೇತಿ ಪಡೆದಿದ್ದಾರೆ. ಥಾಯ್ಲಂಡ್ ನಲ್ಲಿ ನಡೆದ ಸ್ಪರ್ಧೆ ಗೆದ್ದಿರುವ ಸೂರ್ಯನಿಗೆ ಒಲಂಪಿಕ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆಯಿದ್ದು, ಅದಕ್ಕಾಗಿ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರಂತೆ.


Click it and Unblock the Notifications











