Don't Miss!
- News ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಪ್ರಮುಖ ಆರೋಪಿಯನ್ನು ಬಂಧಿಸಿದ ಎನ್ಐಎ
- Lifestyle ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬರೀಶ್ ನೆನೆದು ಭಾವುಕರಾದ ನಟ ಬಾಲಯ್ಯ
ನಟ ಬಾಲಕೃಷ್ಣ ಕನ್ನಡ ನಟರ ಜೊತೆಗೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ. ರಾಜ್ ಕುಮಾರ್ ಕುಟುಂಬ ಮಾತ್ರವಲ್ಲದೆ ಅಂಬರೀಶ್ ಸಹ ಅವರ ಒಳ್ಳೆಯ ಗೆಳೆಯರಾಗಿದ್ದರು.
'NTR' ಬಯೋಪಿಕ್ ನಲ್ಲಿ ಇರುತ್ತಾ ರಾಜ್ ಕುಮಾರ್ ಪಾತ್ರ?
ಅಂಬರೀಶ್ ಅವರ ಅಗಲಿಕೆ ಬಾಲಕೃಷ್ಣ ಅವರಿಗೆ ನೋವುಂಟು ಮಾಡಿದೆ. ನಿನ್ನೆ 'ಎನ್ ಟಿ ಆರ್' ಚಿತ್ರದ ಪತ್ರಿಕಾಗೋಷ್ಠಿ ಬೆಂಗಳೂರಿನಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ಬಾಲಯ್ಯ ಅಂಬರೀಶ್ ಅವರನ್ನು ನೆನೆದರು.
ಅಂಬರೀಶ್ ಅವರ ನಿಧನದ ಕಾರಣ ಮೌನಾಚರಣೆ ಮಾಡಿದರು. ಕಾರ್ಯಕ್ರಮದ ನಡುವೆ ಎಲ್ಲರಿಗೂ ಮೌನಾಚರಣೆ ಮಾಡೋಣ ಎಂದು ಅವರೇ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ''ಅಂಬರೀಶ್ ಅವರು ನನಗೆ ಒಳ್ಳೆಯ ಸ್ನೇಹಿತ ಅವರ ನಿಧನದಿಂದ ನನಗೆ ತೀವ್ರ ನೋವಾಗಿದೆ. ನಮ್ಮ ಅಣ್ಣ ಹರಿಕೃಷ್ಣ ಮೃತರಾದ ದುಃಖವನ್ನು ಮರೆಯುವ ಮುನ್ನವೇ ಅಂಬರೀಶ್ ಅವರು ಕೂಡ ಹೋದರು.'' ಎಂದು ಒಂದು ಕ್ಷಣ ಭಾವುಕವಾದರು ಬಾಲಯ್ಯ.
ರಾಜ್ ಕುಮಾರ್ ಬಗ್ಗೆ ಬಾಲಯ್ಯನ ಈ ಆಸೆ ಈಡೇರುತ್ತಾ?
ಅಂದಹಾಗೆ, ಬಾಲಯ್ಯ ನಿನ್ನೆ ಬೆಂಗಳೂರಿಗೆ ತಮ್ಮ 'ಎನ್ ಟಿ ಆರ್' ಚಿತ್ರದ ಪ್ರಮೋಷನ್ ಗಾಗಿ ಬಂದಿದ್ದರು. ಈ ಸಿನಿಮಾ ನಾಳೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ.