Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿ.ಸಿ.ಪಾಟೀಲ್ ಪತ್ನಿಗೆ ಕೊರೊನಾ: ಕೌರವನಿಗೆ ಕೊರೊನಾ ಭೀತಿ
ಮಾಜಿ ನಟ, ಹಾಲಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಕೊರೊನಾ ಭೀತಿ ಕಾಡುತ್ತಿದೆ. ಸಚಿವ ಬಿ.ಸಿ.ಪಾಟೀಲ್ ಪತ್ನಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಸಚಿವರಿಗೂ ಆತಂಕ ಎದುರಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿ.ಸಿ.ಪಾಟೀಲ್, 'ನನ್ನ ಶ್ರೀಮತಿ, ಅಳಿಯ ಹಾಗೂ ಹಿರೇಕೆರೂರಿನ ನಿವಾಸದ ಸಿಬ್ಬಂದಿ ವರ್ಗದವರು ಸೇರಿದಂತೆ ಒಟ್ಟು ಐವರಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಕೊರೊನಾದಿಂದ ಗುಣವಾಗಲು ತೆಗೆದುಕೊಂಡ ಆಯುರ್ವೇದ ಔಷಧದ ಚಿತ್ರ ಹಂಚಿಕೊಂಡ ನಟ ವಿಶಾಲ್
ಕೆಲವು ದಿನಗಳ ಹಿಂದೆ ಸಹ ಇದೇ ಬಿ.ಸಿ.ಪಾಟೀಲ್ ಅವರಿಗೆ ಕೊರೊನಾ ಆತಂಕ ಎದುರಾಗಿದ್ದು, ಮಿನಿಸ್ಟರ್ ಕ್ವಾಟ್ರಸ್ನಲ್ಲಿನ ಪಾಟೀಲ್ ಸಂಬಂಧಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಆಗಿತ್ತು, ಬಿಸಿ.ಪಾಟೀಲ್ ಅವರ ಸಂಪರ್ಕದಲ್ಲಿದ್ದರು. ಆಗ ಬಿ.ಸಿ.ಪಾಟೀಲ್ಗೆ ಕೊರೊನಾ ಭೀತಿ ಉಂಟಾಗಿತ್ತಾದರೂ ಅವರಿಗೆ ಸೋಂಕು ತಗುಲಿರಲಿಲ್ಲ.
ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ
ಆದರೆ ಈಗ ಪರಿಸ್ಥಿತಿ ಭಿನ್ನವಾಗಿದ್ದು, ಸ್ವತಃ ಬಿ.ಸಿ.ಪಾಟೀಲ್ ಪತ್ನಿಗೆ ಕೊರೊನಾ ಬಂದಿದೆ. ಅಷ್ಟೇ ಅಲ್ಲದೆ ಪಾಟೀಲ್ ನಿವಾಸದಲ್ಲಿದ್ದ ಐದು ಮಂದಿ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಬಂದಿದೆ. ಹಾಗಾಗಿ ಈ ಬಾರಿ ಕೊರೊನಾ ಸೋಂಕಿನ ದಿಗಿಲು ಪಾಟೀಲ್ಗೆ ತುಸು ಹೆಚ್ಚಿಗೆ ಇದೆ.
ಪತ್ನಿ ಮತ್ತು ಅಳಿಯನಿಗೆ ಕೊರೊನಾ
ಪಾಟೀಲ್ ಅವರ ಪತ್ನಿ, ಅಳಿಯ ಸೇರಿ ಇನ್ನುಳಿದ ಸೋಂಕಿತ ಸಿಬ್ಬಂದಿಯನ್ನು ಸಂಬಂಧಿತ ಕೊರೊನಾ ಕೇರ್ ಸೆಂಟರ್ಗೆ ಸೇರಿಸಲಾಗಿದೆ ಎಂದು ಬಿ.ಸಿ.ಪಾಟೀಲ್ ಟ್ವೀಟ್ನಲ್ಲಿ ಹೇಳಿದ್ದಾರೆ. ಅವರೆಲ್ಲರೂ ಬೇಗ ಗುಣಮುಖವಾಗಲಿ ಎಂದು ಹಾರೈಸಿರೆಂದು ಪಾಟೀಲ್ ಮನವಿ ಮಾಡಿದ್ದಾರೆ.
'ನಾನಿರುವುದೇ ಹೀಗೆ': ನಿಮಗೆ ಗೊತ್ತಿರದ ಸುಧಾರಾಣಿ ಬದುಕು...
ಕ್ವಾರಂಟೈನ್ ಆಗಬೇಕಿದೆ
ನಿಯಮಗಳನ್ವಯ ಬಿ.ಸಿ.ಪಾಟೀಲ್ ಅವರು ಕ್ವಾರಂಟೈನ್ಗೆ ಒಳಪಡಬೇಕಾಗಿದೆ. ಈಗ ಪಾಸಿಟಿವ್ ಬಂದಿರುವ ಎಲ್ಲರೂ ಹಿರೇಕೆರೂರಿನ ನಿವಾಸದಲ್ಲಿದ್ದರು. ಬಿ.ಸಿ.ಪಾಟೀಲ್ ಹಿರೇಕೆರೂರು ನಿವಾಸಕ್ಕೆ ಭೇಟಿ ಕೊಟ್ಟಿದ್ದರೇ ಇಲ್ಲವೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ನಟನೆಯಿಂದ ದೂರ ಉಳಿದಿರುವ ಬಿ.ಸಿ.ಪಾಟೀಲ್
ನಟರಾಗಿ ನಿಷ್ಕರ್ಷ, ಮಹಾಕ್ಷತ್ರಿಯ, ಕೌರವ, ಜಾಣ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಬಿ.ಸಿ.ಪಾಟೀಲ್. ಇದೀಗ ನಟನೆ ಬಿಟ್ಟು ಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಕೃಷಿ ಸಚಿವರಾಗಿರುವ ಅವರು ನಟಿಸಿದ ಕೊನೆಯ ಸಿನಿಮಾ 2017 ರಲ್ಲಿ ಬಿಡುಗಡೆಯಾದ ಕಾಫಿತೋಟ.