Don't Miss!
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- News Hubballi: ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ: ನೇಹಾ ನಿವಾಸಕ್ಕೆ ಶ್ರೀಗಳು, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಪೊಲೀಸ್ ಅಭಯ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭೂಗತ ದೊರೆಗಳ ಮನ ಪರಿವರ್ತನೆಗೆ ರವಿ ಬೆಳಗೆರೆ
ಭೂಗತ ದೊರೆ ಚಿತ್ರದಲ್ಲಿ ಮೊದಲ ಬಾರಿ ಪತ್ರಕರ್ತರೊಬ್ಬರು ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರೇ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ. ಚಿತ್ರದಲ್ಲೂ ಅವರು ನಟಿಸುತ್ತಿರುವುದು ರವಿ ಬೆಳಗೆರೆಯಾಗಿಯೇ. ಭೂಗತಲೋಕದ ದೊರೆಗಳ ಮನಃ ಪರಿವರ್ತನೆಗೊಳಿಸುವ ಪತ್ರಿಕಾ ಸಂಪಾದಕನೇ ಈ ಚಿತ್ರದ ಹೈ ಲೈಟಂತೆ.
ನಿರ್ದೇಶಕ ಶಿವಮಣಿ ಅವರು ರವಿ ಬೆಳಗೆರೆ ಲೇಖನಗಳ ಖಾಯಂ ಓದುಗ. ಡೆಡ್ಲಿ ಸೋಮ ಎಂಬ ರೌಡಿಯನ್ನು ಸರಿಹಾದಿಗೆ ತರಲು ರವಿ ಪಟ್ಟ ಪರಿಶ್ರಮವೇ ಶಿವಮಣಿಗೆ ಸ್ಫೂರ್ತಿಯಾಯಿತು. ಭೂಗತ ದೊರೆ ಚಿತ್ರದ ಕಥೆಯೂ ಇದೇ ಧಾಟಿಯಲ್ಲಿ ಸಾಗುತ್ತದೆ. ಸೋಮನೇ ಹೀರೋ ಅಂದುಕೊಳ್ಳುವುದಾದರೆ ಆತನ ಪತ್ನಿ ಪಾತ್ರವನ್ನು ನಟಿ ಸುಧಾರಾಣಿ ಮಾಡುತ್ತಿದ್ದಾರೆ.
ಹಾಗೆ ನೋಡಿದರೆ, ಪತ್ರಕರ್ತ ರವಿ ಬೆಳಗೆರೆಯವರಿಗೆ ಚಿತ್ರರಂಗದ ನಂಟು ಇಂದು ನಿನ್ನೆಯದಲ್ಲ. ಗೋಕಾಕ್ ಚಳವಳಿ ಸಂದರ್ಭದಲ್ಲಿ ಅವರು ಇತರ ಪತ್ರಕರ್ತರೊಡನೆ ಚಳವಳಿಯಲ್ಲಿ ಧುಮುಕಿದ್ದರು ಮತ್ತು ವರದಿಗಾರಿಕೆ ಮಾಡಿದ್ದರು. ನಟನೆ ಕೂಡ ಅವರಿಗೆ ಅತ್ಯಂತ ಸ್ವಾಭಾವಿಕವಾಗಿಯೆ ಬಂದಿದೆ. ಪತ್ರಿಕಾ ಲೋಕದಲ್ಲಿ ಮಿಂಚಿದಂತೆ ಅಭಿನಯದಲ್ಲಿಯೂ ರವಿ ಬೆಳಗೆರೆ ಅವರು ಮಿಂಚಲೆಂದು ಅವರ ಅಭಿಮಾನಿಗಳ ಕೋರಿಕೆಯಾಗಿದೆ.