twitter
    For Quick Alerts
    ALLOW NOTIFICATIONS  
    For Daily Alerts

    ಭೂಗತ ದೊರೆಗಳ ಮನ ಪರಿವರ್ತನೆಗೆ ರವಿ ಬೆಳಗೆರೆ

    By Super
    |

    Ravi Belagere
    ಪತ್ರಕರ್ತರು ಸಿನಿಮಾ ನಿರ್ಮಿಸಿದ ಇತಿಹಾಸವಿದೆ. ಆದರೆ ಪತ್ರಕರ್ತರು ನಟರಾಗಿ ಮಿಂಚಿದ್ದು ಕಡಿಮೆಯೇ. ಫಣಿ ರಾಮಚಂದ್ರ ತಮ್ಮ ಚಿತ್ರಗಳಲ್ಲಿ ಸಿನಿಮಾ ಪತ್ರಕರ್ತರ ಸಮೂಹವನ್ನು ದೃಶ್ಯವೊಂದಕ್ಕೆ ಬಳಸಿಕೊಳ್ಳುತ್ತಿದ್ದರು. ಅದರ ಹೊರತಾಗಿ ಒಂದಿಬ್ಬರು ಪತ್ರಕರ್ತರು ಸ್ವಯಂ ಉತ್ಸಾಹದಿಂದ ಪೋಷಕ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದುಂಟು.

    ಭೂಗತ ದೊರೆ ಚಿತ್ರದಲ್ಲಿ ಮೊದಲ ಬಾರಿ ಪತ್ರಕರ್ತರೊಬ್ಬರು ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರೇ ಹಾಯ್‌ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ. ಚಿತ್ರದಲ್ಲೂ ಅವರು ನಟಿಸುತ್ತಿರುವುದು ರವಿ ಬೆಳಗೆರೆಯಾಗಿಯೇ. ಭೂಗತಲೋಕದ ದೊರೆಗಳ ಮನಃ ಪರಿವರ್ತನೆಗೊಳಿಸುವ ಪತ್ರಿಕಾ ಸಂಪಾದಕನೇ ಈ ಚಿತ್ರದ ಹೈ ಲೈಟಂತೆ.

    ನಿರ್ದೇಶಕ ಶಿವಮಣಿ ಅವರು ರವಿ ಬೆಳಗೆರೆ ಲೇಖನಗಳ ಖಾಯಂ ಓದುಗ. ಡೆಡ್ಲಿ ಸೋಮ ಎಂಬ ರೌಡಿಯನ್ನು ಸರಿಹಾದಿಗೆ ತರಲು ರವಿ ಪಟ್ಟ ಪರಿಶ್ರಮವೇ ಶಿವಮಣಿಗೆ ಸ್ಫೂರ್ತಿಯಾಯಿತು. ಭೂಗತ ದೊರೆ ಚಿತ್ರದ ಕಥೆಯೂ ಇದೇ ಧಾಟಿಯಲ್ಲಿ ಸಾಗುತ್ತದೆ. ಸೋಮನೇ ಹೀರೋ ಅಂದುಕೊಳ್ಳುವುದಾದರೆ ಆತನ ಪತ್ನಿ ಪಾತ್ರವನ್ನು ನಟಿ ಸುಧಾರಾಣಿ ಮಾಡುತ್ತಿದ್ದಾರೆ.

    ಹಾಗೆ ನೋಡಿದರೆ, ಪತ್ರಕರ್ತ ರವಿ ಬೆಳಗೆರೆಯವರಿಗೆ ಚಿತ್ರರಂಗದ ನಂಟು ಇಂದು ನಿನ್ನೆಯದಲ್ಲ. ಗೋಕಾಕ್ ಚಳವಳಿ ಸಂದರ್ಭದಲ್ಲಿ ಅವರು ಇತರ ಪತ್ರಕರ್ತರೊಡನೆ ಚಳವಳಿಯಲ್ಲಿ ಧುಮುಕಿದ್ದರು ಮತ್ತು ವರದಿಗಾರಿಕೆ ಮಾಡಿದ್ದರು. ನಟನೆ ಕೂಡ ಅವರಿಗೆ ಅತ್ಯಂತ ಸ್ವಾಭಾವಿಕವಾಗಿಯೆ ಬಂದಿದೆ. ಪತ್ರಿಕಾ ಲೋಕದಲ್ಲಿ ಮಿಂಚಿದಂತೆ ಅಭಿನಯದಲ್ಲಿಯೂ ರವಿ ಬೆಳಗೆರೆ ಅವರು ಮಿಂಚಲೆಂದು ಅವರ ಅಭಿಮಾನಿಗಳ ಕೋರಿಕೆಯಾಗಿದೆ.

    English summary
    Jounalist Hi Bangalore editor Ravi Belagere to act in a new Kannada film by Shivamani.
    Tuesday, June 5, 2012, 14:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X