ತುಳಸಿಗೆ ಗಾಂಜಾ ಹೋಲಿಕೆ: ನಟಿ ನಿವೇದಿತಾ ವಿರುದ್ಧ ದೂರು
ಗಾಂಜಾ ಗಿಡವನ್ನು ತುಳಸಿಗೆ ಹೋಲಿಕೆ ಮಾಡಿ ಹೇಳಿಕೆ ನೀಡಿದ್ದ ನಟಿ ನಿವೇದಿತಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recommended Video
ಗಾಂಜಾ ಗಿಡವು ವೈದ್ಯಕೀಯ ಗುಣಗಳನ್ನು ಹೊಂದಿದೆ. ಆಯುರ್ವೇಧದಲ್ಲಿ ಅದರ ಬಳಕೆ ಹೆಚ್ಚಿದೆ. ಅದೂ ಸಹ ತುಳಸಿಯಂತೆಯೇ ಪವಿತ್ರವಾದ ಗಿಡ ಎಂದು ನಟಿ ನಿವೇದಿತಾ ಹೇಳಿದ್ದರು.
ನಿವೇದಿತಾ ಹೇಳಿಕೆ ವಿರೋಧಿಸಿ, ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಎ.ದೀಪಕ್ ಎಂಬುವರು ದೂರು ನೀಡಿದ್ದು, ಎಫ್ಐಆರ್ ಸಹ ದಾಖಲಾಗಿದೆ.

'ಪವಿತ್ರ ತುಳಸಿ ಗಿಡವನ್ನು ಗಾಂಜಾ ಗಿಡಕ್ಕೆ ಹೋಲಿಕೆ ಮಾಡಿರುವ ನಿವೇದಿತಾ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ' ಎಂದು ಎ.ದೀಪಕ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಗಾಂಜಾವು ಆಯುರ್ವೇಧದ ಪ್ರಮುಖ ಭಾಗ, ಅದರಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಜನಪದ, ವೇದಗಳಲ್ಲೂ ಗಾಂಜಾದ ಮಹತ್ವದ ಉಲ್ಲೇಖವಿದೆ ಎಂದು ನಟಿ ನಿವೇದಿತ ಹೇಳಿದ್ದರು.
ನಟಿ ನಿವೇದಿತಾ ಮಾತ್ರವಲ್ಲದೆ, ಯುವ ನಟ, ನಿರ್ದೇಶಕ ರಾಕೇಶ್ ಸಹ ಗಾಂಜಾ ಔಷಧೀಯ ಗುಣ ಹೊಂದಿದೆ. ಅದರ ಬಳಕೆಯನ್ನು ಕಾನೂನುಬದ್ಧಗೊಳಿಸಬೇಕು ಎಂದಿದ್ದರು.
ಕನ್ನಡ ಚಿತ್ರರಂಗದ ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಾದಕ ವಸ್ತು ಬಳಕೆ, ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಗಿಣಿಯನ್ನು ಇಂದು ಸಂಜೆ ಬಂಧಿಸಲಾಗಿದೆ.


Click it and Unblock the Notifications











