twitter
    For Quick Alerts
    ALLOW NOTIFICATIONS  
    For Daily Alerts

    ಕಾವೇರಿ ಹೋರಾಟಕ್ಕೆ ಧುಮುಕಿದ ನಟ ದರ್ಶನ್

    By Rajendra
    |

    ಕರ್ನಾಟಕದಲ್ಲಿ ಕಾವೇರಿ ವಿವಾದ ಮತ್ತೆ ತಲೆಯೆತ್ತಿದ್ದು ಪರಿಸ್ಥಿತಿ ಬಿಗಡಾಯಿಸುತ್ತಿದೆ. ತಮಿಳುನಾಡಿಗೆ ಐದು ದಿನಗಳ ಕಾಲ ಪ್ರತಿದಿನ 10,000 ಕ್ಯುಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಈ ಬಗ್ಗೆ ಮೈಸೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುರುವಾರ (ಡಿ.6) ತಮ್ಮ ನಿಲುವನ್ನು ಪ್ರಕಟಿಸಿದರು.

    ಸದ್ಯಕ್ಕೆ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ವಿಜಯೋತ್ಸವದಲ್ಲಿದ್ದಾರೆ. ಈಗ ಕಾವೇರಿ ಜಲವಿವಾದ ಮತ್ತೆ ಭುಗಿಲೆದ್ದಿರುವ ಕಾರಣ ಅವರು ತಮ್ಮ ವಿಜಯಯಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಿ ಕಾವೇರಿ ಹೋರಾಟಕ್ಕೆ ಧುಮುಕಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, "ಮೊದಲು ನಮ್ಮ ರೈತರಿಗೆ ನೀರು ಸಿಗಲಿ. ಆಮೇಲೆ ಬೇರೆಯವರ ಬಗ್ಗೆ ಯೋಚಿಸೋಣ. ನಮಗೇ ನೀರಿಲ್ಲ ಎಂದ ಮೇಲೆ ಅವರಿಗೆ ಎಲ್ಲಿಂದ ತರುವುದು. ಮೊದಲು ನಮ್ಮ ಪರಿಸ್ಥಿತಿಯನ್ನು ಅವರು ಅರ್ಥಮಾಡಿಕೊಳ್ಳಬೇಕು" ಎಂದರು.

    ಕಾನೂನಿಗೆ ಗೌರವ ಕೊಡಬೇಕಾಗುತ್ತದೆ. ಆದರೆ ಅವರು ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಕಾವೇರಿ ಹೋರಾಟಕ್ಕೆ ತಮ್ಮ ರಾಯಣ್ಣ ಚಿತ್ರತಂಡ ಸಂಪೂರ್ಣ ಬೆಂಬಲ ಸೂಚಿಸುತ್ತಿದೆ. ಹಾಗಾಗಿ ರಾಯಣ್ಣ ವಿಜಯಯಾತ್ರೆಯನ್ನು ತಾವು ತಾತ್ಕಾಲಿಕವಾಗಿ ಕೈಬಿಟ್ಟಿದ್ದೇವೆ ಎಂದಿದ್ದಾರೆ.

    ಡಿಸೆಂಬರ್ 2ರಂದು ಬೆಂಗಳೂರಿನಿಂದ ಹೊರಟ ರಾಯಣ್ಣ ವಿಜಯಯಾತ್ರೆ ಶಿವಮೊಗ್ಗ, ಮೈಸೂರು ಜಿಲ್ಲೆಗಳನ್ನು ತಲುಪಿದೆ. ಅಲ್ಲಿಂದ ಚಾಮರಾಜನಗರ, ಮೈಸೂರು, ಮಂಡ್ಯ, ಮದ್ದೂರು, ರಾಮನಗರ, ಬೆಂಗಳೂರಿಗೆ ವಾಪಸಾಗಬೇಕಿತ್ತು. (ಒನ್ಇಂಡಿಯಾ ಕನ್ನಡ)

    English summary
    Challenging star Darshan supports Cauvery protest. The actor also cancels Kranthiveera Sangolli Rayanna Vijaya Yaathre in Mysore. The road show suppose to end on 7th December in Mandya. 
    Saturday, December 8, 2012, 13:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X