Don't Miss!
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಇಂದ್ರಜಿತ್ ದೊಡ್ಡ ತನಿಖೆಗಾರರು, ಏನೋ ಮಾಡಲಿ': ದರ್ಶನ್ ಪ್ರತಿಕ್ರಿಯೆ
ಮೈಸೂರಿನ ಸಂದೇಶ್ ಹೋಟೆಲ್ನಲ್ಲಿ ಸಪ್ಲೈಯರ್ ಮೇಲೆ ನಟ ದರ್ಶನ್ ಮತ್ತು ಸ್ನೇಹಿತರು ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು. ಇಂದ್ರಜಿತ್ ಆರೋಪಕ್ಕೆ ನಟ ದರ್ಶನ್ ಪ್ರತಿಕ್ರಿಯೆ ಕೊಟ್ಟಿದ್ದು, ''ಹಲ್ಲೆ ಮಾಡಿಲ್ಲ, ರೇಗಾಡಿರಬಹುದು ಅಷ್ಟೇ'' ಎಂದರು.
Recommended Video
''ಇಂದ್ರಜಿತ್ ಲಂಕೇಶ್ ಅವರು ದೊಡ್ಡ ತನಿಖೆಗಾರರು, ಅವರು ಮಾಡಲಿ ಬಿಡಿ, ಊಟ ಲೇಟ್ ಆಗಿರುತ್ತೆ ಅಂತಾ ಗಟ್ಟಿ ಧ್ವನಿಯಲ್ಲಿ ರೇಗಾಡಿರಬಹುದು ಅಷ್ಟೇ. ಇನ್ನು ಈ ವಿಷಯಗಳು ಎಲ್ಲೆಲ್ಲಿ ಹೋಗುತ್ತೆ ನೋಡೋಣ'' ಎಂದರು.
ದಲಿತನ
ಮೇಲೆ
ದರ್ಶನ್
ಹಲ್ಲೆ
ಆರೋಪ:
ಇಂದ್ರಜಿತ್
ಸುಳ್ಳು
ಹೇಳುತ್ತಿದ್ದಾರೆಂದ
ಸಂದೇಶ್
ನಾಗರಾಜ್
''ಹಲ್ಲೆ ಮಾಡಿದ್ದು ಆದರೆ ಸಂದೇಶ್ ಸುಮ್ಮನೆ ಇರ್ತಿದ್ರಾ? ಅವರು ಕೇಳ್ತಿರಲಿಲ್ಲ. ಸಂದೇಶ್ ಮತ್ತು ನನ್ನದು ಸಾವಿರ ಗಲಾಟೆ ಇರುತ್ತೆ, ಎಲ್ಲೊಲ್ಲೊ ವಿಷಯ ತಿರುಗಾಡುತ್ತಿದೆ. ಇಂದ್ರಜಿತ್ ಮೇಲೆ ನನಗೆ ಬೇಜಾರಿಲ್ಲ, ಅವರ ಜೊತೆಯೂ ಒಂದು ಸಿನಿಮಾ ಮಾಡಿದ್ದೇನೆ'' ಎಂದು ದರ್ಶನ್ ತಿಳಿಸಿದರು.
'ಅರುಣಾ ಕುಮಾರಿ ಅವರ ಪರವಾಗಿ ನಾನು ನಿಲ್ಲುತ್ತೇನೆ ಎಂದು ಇಂದ್ರಜಿತ್ ಹೇಳ್ತಿದ್ದಾರೆ. ಆದರೆ ನಾನು ಜೂನ್ 16 ರಂದೇ ಆಕೆಗೆ ಹೇಳಿದ್ದೇನೆ, ನಿಮ್ಮದು ತಪ್ಪು ಇಲ್ಲ ಅಂದ್ರೆ ಇಡೀ ಪ್ರಪಂಚ ಒಂದು ಕಡೆ ಇದ್ರು, ನಾನು ನಿಮ್ಮ ಹಿಂದೆ ಇರ್ತೀನಿ ಎಂದು ಹೇಳಿದ್ದೆ' ಲಂಕೇಶ್ಗೆ ತಿರುಗೇಟು ಕೊಟ್ಟಿದ್ದಾರೆ.
''ಅರುಣಾ ಕುಮಾರಿ ವಿಷಯವನ್ನು ಇಲ್ಲಿಗೆ ಬಿಡಲು ಹೇಳಿದ್ದೇನೆ, ಪೊಲೀಸರು ತನಿಖೆ ಮಾಡ್ತಾರೆ, ಸುಮ್ಮನೆ ನಾವು ಮಾತಾಡಿಕೊಂಡು ಕೂರುವುದು ಬೇಡ. ಈ ನಡುವೆ ಇದರ ಸುತ್ತಮುತ್ತ ಏನೆಲ್ಲಾ ವಿಚಾರಗಳು ಬರುತ್ತೋ ಕಾದು ನೋಡ್ತೇನೆ'' ಎಂದು ಮಾಧ್ಯಮಗಳಿಗೆ ರಿಯಾಕ್ಟ್ ಮಾಡಿದರು.
ಇದಕ್ಕೂ ಮುಂಚೆ ಗೃಹ ಸಚಿವರನ್ನು ಭೇಟಿ ಮಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಅರುಣಾಕುಮಾರಿಯನ್ನು ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ, ಹೋಟೆಲ್ನಲ್ಲಿ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.