twitter
    For Quick Alerts
    ALLOW NOTIFICATIONS  
    For Daily Alerts

    ನಾಡಪ್ರಭು ಕೆಂಪೇಗೌಡರ ನೆನೆದ ಚಾಲೆಂಜಿಂಗ್ ಸ್ಟಾರ್ ದರ್ಶನ್

    |

    Recommended Video

    ಬೆಂಗಳೂರು ನಿರ್ಮಾತೃನಿಗೆ ಚಾಲೇಂಜಿಂಗ್ ಸ್ಟಾರ್ ನಮನ | FILMIBEAT KANNADA

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬೆಂಗಳೂರು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡ ಅವರನ್ನ ನೆನಪಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಜೂನ್ 27 ಇಂದು ಕೆಂಪೇಗೌಡ ಜಯಂತಿ. ಈ ವಿಶೇದ ದಿನದಂದು ಕೆಂಪೇಗೌಡರ ಕುರಿತು ಟ್ವೀಟ್ ಮಾಡಿರುವ ದರ್ಶನ್, ನಾಡದೊರೆಯನ್ನ ಸ್ಮರಿಸಿದ್ದಾರೆ.

    ''ನಾಡಪ್ರಭು ಕೆಂಪೇಗೌಡರು ಹಾಗೂ ಅವರ ಕುಟುಂಬ ಸಾಕಷ್ಟು ವರ್ಷಗಳು ಶ್ರಮಿಸಿ ತಮ್ಮ ಕನಸಿನ ರಾಜಧಾನಿ ಬೆಂಗಳೂರು ಸಾಮಾನ್ಯ ಜನರಿಗೆ ಆಸರೆಯಾಗಿರಲೆಂದು ಅಚ್ಚುಕಟ್ಟಾಗಿ ಎಲ್ಲಾ ವ್ಯವಸ್ಥೆಗಳೊಂದಿಗೆ ಕಟ್ಟಿಕೊಟ್ಟವರು. ಹಲವಾರು ದೇವಾಲಯಗಳು, ಕೆರೆಗಳು, ಮಹಾದ್ವಾರಗಳು, ಶಾಲೆಗಳನ್ನು ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ'' ಎಂದು ಅವರ ಸಾಧನೆ ನೆನೆದಿದ್ದಾರೆ.

    ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದ ದರ್ಶನ್ 'ಯಜಮಾನ' ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದ ದರ್ಶನ್ 'ಯಜಮಾನ'

    ''ಈ ಕನಸಿನ ನಗರಿಯನ್ನು ಗೌಡರ ಆಸೆ-ಆದರ್ಶಗಳೊಂದಿಗೆ ಶುದ್ಧವಾಗಿ, ಪರಿಸರ ಬದ್ಧವಾಗಿ ಕಾಪಾಡಿಕೊಂಡು ಬೆಳೆಸಿಕೊಂಡು ಹೋಗುವುದು ಇಲ್ಲಿ ವಾಸವಾಗಿರುವ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವೂ ಹೌದು'' ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿದ್ದಾರೆ.

    Darshan remembers nadaprabhu kempegowda

    ಅಂದ್ಹಾಗೆ, ದರ್ಶನ್ ಅಭಿನಯಿಸಿದ್ದ 'ಅಂಬರೀಶ' ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಕೆಂಪೇಗೌಡರ ಪಾತ್ರ ಮಾಡಿದ್ದರು. ಇದೇ ಚಿತ್ರದಲ್ಲಿ ದರ್ಶನ್ ಪಾತ್ರದ ಹೆಸರು ಕೂಡ ಕೆಂಪೇಗೌಡ ಎಂದೇ ಇತ್ತು.

    English summary
    Kannada actor, challenging star Darshan remembers nadaprabhu kempegowda. today (june 27th) kempegowda jayanathi.
    Thursday, June 27, 2019, 13:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X