Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್, ಸುದೀಪ್, ಉಪೇಂದ್ರ 'ರೈ' ಸಿನಿಮಾ ಮಾಡಲು ಒಪ್ಪಲಿಲ್ಲ-ರವಿ ಶ್ರೀವತ್ಸ
ಮುತ್ತಪ್ಪ ರೈ ಬಯೋಪಿಕ್ ಸಿನಿಮಾ ಮಾತುಗಳು ಈ ಹಿಂದಿನಿಂದಲೇ ಕೇಳಿ ಬರುತ್ತಿದೆ. ಹಲವು ಭಾರಿ ಈ ಸಿನಿಮಾ ಮಾಡಲು ಮುಂದಾಗುತ್ತಿದ್ದ ನಿರ್ದೇಶಕರು ಕೈ ಬಿಡುತ್ತಿದ್ದರು. ಮೊದಲು ಮುತ್ತಪ್ಪ ರೈ ಸಿನಿಮಾ ಮಾಡಬೇಕು ಎಂದುಕೊಂಡವರು ಖ್ಯಾತ ನಿರ್ದೇಶಕ ರವಿ ಶ್ರೀವತ್ಸ ಮತ್ತು ರವಿ ಬೆಳಗೆರೆ. 'ರೈ' ಎಂಬ ಹೆಸರಲ್ಲಿ ಸಿನಿಮಾ ಸೆಟ್ಟೇರಿತ್ತಾದರೂ ಆದು ಕಾರ್ಯರೂಪಕ್ಕೆ ಬರಲಿಲ್ಲ. ಅದು ಯಾಕೆ ಎಂಬ ಬಗ್ಗೆ ಸ್ವತಃ ರವಿ ಶ್ರೀವತ್ಸ ಫಿಲ್ಮಿ ಬೀಟ್ ಕನ್ನಡ ಜೊತೆ ಎಕ್ಸಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಹೌದು, ರೈ ಸಿನಿಮಾದ ಕೆಲಸ 2002ರಲ್ಲಿ ಆರಂಭ ಆಗುತ್ತೆ. ಮೊದಲು ನಾವು ಉಪೇಂದ್ರ ಅವರನ್ನು ಸೆಲೆಕ್ಟ್ ಮಾಡಿದ್ವಿ. ಆದರೆ ಕಥೆಯಲ್ಲಿ ಬದಲಾವಣೆ ಬಯಸಿದ್ರು ಉಪೇಂದ್ರ. ಆದರೆ ಅದು ರವಿಬೆಳಗೆರೆಯವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಉಪೇಂದ್ರ ಅವರನ್ನು ಕೈ ಬಿಟ್ಟೆವು. ಬಳಿಕ ಸುದೀಪ್ ಅವರನ್ನು ಈ ಸಿನಿಮಾಗೆ ಕೇಳಲಾಗಿತ್ತು. ಹಾಗೇ ದರ್ಶನ್ ಬಳಿಯೂ ಈ ಸಿನಿಮಾ ಮಾಡುವ ಆಯ್ಕೆ ಇತ್ತು. ಕಾರಣಾಂತರಗಳಿಂದ ಈ ಮೂವರು ಸಿನಿಮಾ ಮಾಡಲು ಆಗಿಲ್ಲ. ಎಷ್ಟು ಬಾರಿ ಈ ಸಿನಿಮಾ ಮಾಡಲು ಸ್ಟಾರ್ಟ್ ಮಾಡಿದಾಗಲೂ ನಿಂತು ಹೋಗುತ್ತಿತ್ತು ಎಂದಿದ್ದಾರೆ.
ಅಲ್ಲದೆ 'ರೈ' ಸಿನಿಮಾದಲ್ಲಿ ಸಾಕಷ್ಟು ಕಹಿ ಘಟನೆಗಳು, ನಿಜ ಸತ್ಯಾಂಶಗಳನ್ನು ರವಿ ಬೆಳಗೆರೆ ಬಿಚ್ಚಿಡುವ ಪ್ರಯತ್ನ ಮಾಡಿದ್ರು. ಆದರೆ ಈ ಕಥೆ ಸಿನಿಮಾ ಆಗಲಿಲ್ಲಾ ಎನ್ನುವ ಬಗ್ಗೆ ರವಿ ಶ್ರೀವತ್ಸ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಇನ್ನಷ್ಟು ಮಾತುಗಳನ್ನು ಈ ವೀಡಿಯೋದಲ್ಲಿ ನೀವು ನೋಡಬಹುದಾಗಿದೆ.