Don't Miss!
- News Neha Hiremath: ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಕಾರ್ಪೊರೇಟರ್ ನೇಹಾ ತಂದೆ ಆಕ್ರೋಶ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೊದಲು ವಿಷ್ಣು ಸ್ಮಾರಕ ಆಗಲಿ, ಆಮೇಲೆ ಅಂಬಿ ಸ್ಮಾರಕ ಮಾಡಲಿ: ಸುಮಲತಾ
Recommended Video
ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬ ಒಂದು ಕಡೆ, ಅಂಬರೀಶ್ ಅವರ 5ನೇ ತಿಂಗಳ ಪುಣ್ಯ ಸ್ಮರಣೆ ಇನ್ನೊಂದು ಕಡೆ. ಈ ದಿನ ಕಂಠೀರವ ಸ್ಟುಡಿಯೋದಲ್ಲಿರುವ ದಿಗ್ಗಜರ ಸಮಾಧಿ ಬಳಿ ಅಭಿಮಾನಿಗಳು ಭೇಟಿ ನೀಡಿ ನಮನ ಸಲ್ಲಿಸಿದರು.
ಈ ವೇಳೆ ಅಲ್ಲಿ ಬಂದಿದ್ದವರಲ್ಲಿ ಒಂದು ಆಸೆ ಎದ್ದು ಕಾಣುತ್ತಿತ್ತು. ರಾಜ್-ಅಂಬಿ ಸಮಾಧಿ ಒಂದೇ ಕಡೆ ಇದೆ. ಇದೇ ಜಾಗಕ್ಕೆ ವಿಷ್ಣುವರ್ಧನ್ ಅವರ ಸ್ಮಾರಕವನ್ನ ಶಿಫ್ಟ್ ಮಾಡಿದ್ರೆ ಎಷ್ಟು ಚೆಂದ ಎಂಬ ಭಾವನೆ. ಇದು ಆಗುತ್ತೋ ಇಲ್ವೋ ಬಟ್ ಇಂತಹದೊಂದು ಆಸೆ ಅಭಿಮಾನಿಗಳದ್ದು.
ಬಗೆಹರಿಯಿತು ವಿಷ್ಣು ಸ್ಮಾರಕ ಸಮಸ್ಯೆ: ಗೊತ್ತು ಪಡಿಸಿದ ಜಾಗದಲ್ಲೇ ಸ್ಮಾರಕ ನಿರ್ಮಾಣ.!
ಇದೇ ಸ್ಮಾರಕಗಳ ವಿಚಾರವಾಗಿ ಅಂಬರೀಶ್ ಅವರ ಪತ್ನಿ ಸುಮಲತಾ ಕೂಡ ಮಾತನಾಡಿದ್ದಾರೆ. ಮೊದಲು ವಿಷ್ಣುವರ್ಧನ್ ಸ್ಮಾರಕ ಆಗಲಿ, ಆಮೇಲೆ ಅಂಬರೀಶ್ ಸ್ಮಾರಕ ಮಾಡಲಿ ಅಂತಹ ಸುಮಲತಾ ಅಭಿಪ್ರಾಯ ಪಟ್ಟಿದ್ದಾರೆ. ಸುಮಲತಾ ಈ ಮಾತು ಹೇಳಿದ್ದೇಕೆ? ಮುಂದೆ ಓದಿ....
ಸಿಎಂ ಆಶ್ವಾಸನೆ ಕೊಟ್ಟಿರುವಂತೆ ನಡೆಯಲಿ
ಮಂಡ್ಯ ಪ್ರಚಾರದ ವೇಳೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ವಿಷ್ಣುವರ್ಧನ್ ಅಭಿಮಾನಿಗಳಿಗೆ ವಿಷ್ಣು ಸ್ಮಾರಕ ನಿರ್ಮಿಸುವುದಾಗಿ ಆಶ್ವಾಸನೆ ನೀಡಿದ್ದರು. ಚುನಾವಣೆ ಮುಗಿದ ಬಳಿಕ 'ನೀವು ಎಲ್ಲಿ ಹೇಳ್ತಿರೋ ಅಲ್ಲೆ ಸ್ಮಾರಕ ಮಾಡೋಣ' ಎಂದು ತಿಳಿಸಿದ್ದರು. ಅದರಂತೆ ವಿಷ್ಣು ಸ್ಮಾರಕ ನಿರ್ಮಿಸಿಲಿ ಎಂದು ಸುಮಲತಾ ಹೇಳಿದ್ದಾರೆ.
ಮಂಡ್ಯ ಪ್ರಚಾರದಲ್ಲಿ ವಿಷ್ಣು ಸ್ಮಾರಕ ಕೂಗು: ಅಭಿಮಾನಕ್ಕೆ ತಲೆಬಾಗಿದ ಸಿಎಂ
ಅಂಬಿ ಸ್ಮಾರಕ ಆಮೇಲೆ ಮಾಡಲಿ
'ವಿಷ್ಣುವರ್ಧನ್ ಅವರ ಸ್ಮಾರಕ ಮೊದಲು ನಿರ್ಮಾಣವಾಗಲಿ, ಆಮೇಲೆ ಬೇಕಾದರೇ ಅಂಬರೀಶ್ ಸ್ಮಾರಕ ಸ್ಥಾಪನೆ ಮಾಡಲಿ. ಸದ್ಯಕ್ಕೆ, ಅಂಬಿ ಸ್ಮಾರಕಕ್ಕಾಗಿ ಬಜೆಟ್ ನಲ್ಲೂ ಏನೂ ಘೋಷಣೆ ಮಾಡಿರಲಿಲ್ಲ. ಸಮಯ ಬಂದಾಗ ಚಿತ್ರರಂಗದ ಪರವಾಗಿ ಎಲ್ಲರೂ ನಿರ್ಧಾರ ತೆಗೆದುಕೊಂಡು ಅದನ್ನ ಟೇಕ್ ಆನ್ ಮಾಡ್ತೀವಿ'' ಎಂದು ಸುಮಲತಾ ಹೇಳಿದರು.
ಒಂದೇ ಕಡೆ ಇದ್ದರೇ ಒಳ್ಳೆಯದು
ರಾಜ್ ಕುಮಾರ್ ಮತ್ತು ಅಂಬರೀಶ್ ಒಂದು ಕಡೆಯಾದರು. ವಿಷ್ಣುವರ್ಧನ್ ಬೇರೊಂದು ಕಡೆ ಆದರೆ, ಅದು ಸೂಕ್ತವಲ್ಲ. ವಿಷ್ಣುವರ್ಧನ್ ಅವರ ಸ್ಮಾರಕವನ್ನ ಕೂಡ ಕಂಠೀರವ ಸ್ಟುಡಿಯೋದಲ್ಲೇ ನಿರ್ಮಾಣ ಮಾಡೋಣ ಎಂಬ ಕೂಗು ಜೋರಾಗಿದೆ. ಚಿತ್ರರಂಗದಲ್ಲೇ ಹಲವರು ಈ ಅಭಿಪ್ರಾಯವನ್ನ ತಿಳಿಸಿದ್ದಾರೆ.
ಮಂಡ್ಯ ಪ್ರಚಾರದಲ್ಲಿ 'ವಿಷ್ಣು ಸ್ಮಾರಕ' ವಿಷ್ಯ ಬೇಕಿತ್ತಾ? ಅಭಿಮಾನಿಗಳು ಗರಂ
ಅಭಿಮಾನಿಗಳ ಆಸೆಯೇ ಬೇರೆ ಇದೆ
ಆದ್ರೆ, ಅಭಿಮಾನಿಗಳ ಆಸೆಯೇ ಬೇರೆ ಇದೆ. ಎಲ್ಲಿ ಅಂತ್ಯಕ್ರಿಯೆ ಆಗಿದ್ಯೋ ಅಲ್ಲೇ ಸ್ಮಾರಕ ಮಾಡಬೇಕಾಗಿರುವುದು ಸಂಪ್ರದಾಯ ಮತ್ತು ಕರ್ತವ್ಯ. ಹಾಗಾಗಿ, ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ಆಗಲಿ ಎಂಬ ಒತ್ತಾಯ. ಮತ್ತೊಂದು ಕಡೆ ವಿಷ್ಣು ಕುಟುಂಬ ವರ್ಗದವರು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲು ಎಲ್ಲ ತಯಾರಿ ನಡೆಸಿದ್ದಾರೆ.