Don't Miss!
- News 'ಚೆಂಬು' ಜಾಹೀರಾತಿನ ಮೂಲಕ ಮೋದಿ ಸರ್ಕಾರದ ವಿರುದ್ದ ನೇರ ದಾಳಿಗಿಳಿದ ಕಾಂಗ್ರೆಸ್
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜನಾರ್ದನ ರೆಡ್ಡಿ ಪುತ್ರನ ಸಿನಿಮಾ ಕಥೆ ಏನಾಯ್ತು?
Recommended Video
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಗ ಸಿನಿಮಾರಂಗಕ್ಕೆ ಪ್ರವೇಶ ಮಾಡ್ತಾರೆ ಎಂಬ ಸುದ್ದಿ ಬಹಳ ವರ್ಷದಿಂದ ಕೇಳಿಬರುತ್ತಿದೆ. ಅದಕ್ಕಾಗಿ ಎಲ್ಲ ತಯಾರಿ ನಡೆಯುತ್ತಿದ್ದು, ಚೊಚ್ಚಲ ಸಿನಿಮಾಗೆ ಕಥೆ, ನಿರ್ದೇಶಕ ಎಲ್ಲವೂ ಸಜ್ಜಾಗಿದೆ ಎಂಬ ಮಾತಿದೆ. ಸದ್ಯಕ್ಕೆ ಆ ಸಿನಿಮಾದ ಬಗ್ಗೆ ಎಲ್ಲಿಯೂ ಯಾವುದೇ ಮಾಹಿತಿ ಸಿಕ್ಕಿಲ್ಲ.
ಇದೀಗ ಸ್ವತಃ ಜನಾರ್ದನ ರೆಡ್ಡಿ ಅವರ ಪುತ್ರ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಬಳ್ಳಾರಿಯಲ್ಲಿ ಮತದಾನ ಮಾಡಲು ಆಗಮಿಸಿದ್ದ ಕೀರಿಟಿ ರೆಡ್ಡಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ರೆಡ್ಡಿ ಪುತ್ರ ಕೀರಿಟಿ ವೋಟ್ ಮಾಡುವುದಕ್ಕಾಗಿ ನಾಲ್ಕು ದಿನ ಮುಂಚಿತವಾಗಿ ಬಂದಿದ್ದಾರಂತೆ.
ಮಗ ಕಿರೀಟಿಗಾಗಿ ಜನಾರ್ದನ ರೆಡ್ಡಿ ಸಿನಿಮಾ ನಿರ್ಮಾಣ!
ಪೊಲಿಟಿಕಲ್ ಸೈನ್ಸ್ ಓದುತ್ತಿರುವ ಕೀರಿಟಿಗೆ ವೈಯಕ್ತಿಕವಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಗುರಿ ಹೊಂದಿದ್ದಾರೆ. 'ಜನರಿಗೆ ಸೇವೆ ಮಾಡ್ಬೇಕು ಎಂಬ ಬಯಕೆಯೂ ಇದೆ. ಆದ್ರೆ, ಸಿನಿಮಾ ಹೀರೋ ಆಗಿ ಜನರಿಗೆ ಮನರಂಜನೆ ನೀಡಬೇಕು ಎಂಬುದು ಮೊದಲ ಆಧ್ಯತೆ' ಎಂದು ತಿಳಿಸಿದ್ದಾರೆ. ಹಾಗಿದ್ರೆ, ಕೀರಿಟಿ ರೆಡ್ಡು ಮೊದಲ ಸಿನಿಮಾ ಯಾವುದು ಮತ್ತು ಹೇಗಿರಲಿದೆ? ಮುಂದೆ ಓದಿ....
ಸಜ್ಜಾಗುತ್ತಿರುವ ರೆಡ್ಡಿ ಪುತ್ರ
ಜನಾರ್ದನ ರೆಡ್ಡಿ ಅವರ ಮಗನನ್ನ ಸಿನಿಮಾದಲ್ಲಿ ಪರಿಚಯಿಸಲು ಎಲ್ಲ ಪೂರ್ವ ತಯಾರಿ ನಡೆಯುತ್ತಿದೆ. ಇದಕ್ಕಾಗಿ ಡ್ಯಾನ್ಸ್, ಫೈಟ್ ಹೀಗೆ ಅಭಿನಯ ಕೂಡ ಕಲಿಯುತ್ತಿದ್ದಾರಂತೆ ರೆಡ್ಡಿ ಪುತ್ರ. ಶಿಕ್ಷಣ ಮುಗಿಸಿ ಬಂದಮೇಲೆ ಅಧಿಕೃತವಾಗಿ ಬೆಳ್ಳಿತೆರೆಗೆ ಬರಲಿದ್ದಾರೆ.
ಜನಾರ್ದನ ರೆಡ್ಡಿ ಮಗನ ಚೊಚ್ಚಲ ಚಿತ್ರಕ್ಕೆ ತೆಲುಗಿನ ಸ್ಟಾರ್ ನಿರ್ದೇಶಕ.!
ಪೊಲಿಟಿಕಲ್ ಸೈನ್ಸ್ ಓದುತ್ತಿರುವುದು ಯಾಕೆ?
ಸಿನಿಮಾ ಮಾಡಬೇಕು ಎಂಬ ಗುರಿ ಇದ್ದರೂ ರಾಜಕೀಯ ಬಿಡಲ್ಲ ಎಂಬುದಕ್ಕೆ ಅವರು ಆಯ್ಕೆ ಮಾಡಿಕೊಂಡಿರುವ ಕೋರ್ಸ್ ಚರ್ಚೆಗೆ ಕಾರಣವಾಗಿದೆ. ಸಿನಿಮಾ ನನ್ನ ಮೊದಲ ಆಧ್ಯತೆ ಎಂದಿರುವ ಕೀರಿಟಿ ರಾಜಕೀಯ ಶಾಸ್ತ್ರದ ಬಗ್ಗೆ ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಇಲ್ಲೇ ಗೊತ್ತಾಗುತ್ತೆ ರೆಡ್ಡಿ ಪುತ್ರ ರಾಜಕೀಯಕ್ಕೂ ಬರ್ತಾರೆ ಅಂತ.
ಪೂರಿ ಜಗನ್ನಾಥ್ ಡೈರೆಕ್ಷನ್
ರೆಡ್ಡಿ ಪುತ್ರನ ಸಿನಿಮಾ ನಿರ್ದೇಶನ ಮಾಡಲು ಇಬ್ಬರು ಖ್ಯಾತ ನಿರ್ದೇಶಕರನ್ನ ಸಂಪರ್ಕ ಮಾಡಲಾಗಿದೆಯಂತೆ. ತೆಲುಗಿನ ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ್ ಮತ್ತು ವಿವಿ ವಿನಾಯಕ್ ಅವರ ಹೆಸರು ಈ ಹಿಂದೆ ಕೇಳಿಬಂದಿತ್ತು. ಇವರಿಬ್ಬರಲ್ಲಿ ಒಬ್ಬರು ಕೀರಿಟಿಯನ್ನ ಪರಿಚಯಿಸಲಿದ್ದಾರಂತೆ. ಆದ್ರೆ, ಅಧಿಕೃತವಾಗಿ ಪ್ರಕಟವಾಗಿಲ್ಲ.
ಎರಡು ಭಾಷೆಯಲ್ಲಿ ಸಿನಿಮಾ?
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ರೆಡ್ಡಿ ಮಗನ ಮೊದಲ ಸಿನಿಮಾ ಎರಡು ಭಾಷೆಯಲ್ಲಿ ಬರಲಿದೆಯಂತೆ. ಕನ್ನಡ ಮತ್ತು ತೆಲುಗಿನಲ್ಲಿ ಮಗನನ್ನು ಪರಿಚಯಿಸಲು ಮಾಜಿ ಸಚಿವರು ಪ್ಲಾನ್ ಮಾಡಿದ್ದಾರೆ. ಸದ್ಯ, ವಿದೇಶದಲ್ಲಿ ಓದುತ್ತಿರುವ ಮಗ ಎಜಿಕೇಶನ್ ಮುಗಿಸಿ ವಾಪಸ್ ಬರುವವರೆಗೂ ಇದೆಲ್ಲವೂ ಅಂತೆ-ಕಂತೆಗಳಾಗಿ ಉಳಿಯಲಿದೆ.