Don't Miss!
- News Rain Alert: ಮಳೆ.. ಮಳೆ.. ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಗ್ಯಾರಂಟಿ!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದೊಡ್ಮನೆ ಹುಡ್ಗ' ರಿಲೀಸ್ ಗೆ ಮಂಡ್ಯದಲ್ಲಿ ಹ್ಯಾಂಡ್ ಬ್ರೇಕ್
ನೀವು ನಂಬಿದ್ರೂ, ಬಿಟ್ರೂ ಸದ್ಯಕ್ಕೆ ಬ್ರೇಕ್ ಆಗಿರುವ ಬಿಗ್ ನ್ಯೂಸ್ ಅಂದ್ರೆ ಇದೇ. ಮಂಡ್ಯದಲ್ಲಿ ಬಹು ನಿರೀಕ್ಷಿತ ಕನ್ನಡ ಸಿನಿಮಾ ದುನಿಯಾ ಸೂರಿ ನಿರ್ದೇಶನದ ಪುನೀತ್ ರಾಜ್ ಕುಮಾರ್, ಅಂಬರೀಶ್ ಅಭಿನಯದ 'ದೊಡ್ಮನೆ ಹುಡ್ಗ' ಬಿಡುಗಡೆ ಆಗುವುದು ಡೌಟು.
ಕಾವೇರಿ ಹೋರಾಟ ಭುಗಿಲೆದ್ದಿದ್ದರೂ, ಸ್ಥಳೀಯ ಕಾಂಗ್ರೆಸ್ ಶಾಸಕ ಅಂಬರೀಶ್ ಇಲ್ಲಿಯವರೆಗೂ ಮಂಡ್ಯಗೆ ಬಂದಿಲ್ಲ. ಸೆಪ್ಟೆಂಬರ್ ಮೊದಲ ವಾರದಲ್ಲಿ ವಿಶ್ವ ಕನ್ನಡ 'ಅಕ್ಕ' ಸಮ್ಮೇಳನದಲ್ಲಿ ಭಾಗವಹಿಸಲು ಅಂಬರೀಶ್ ಅಮೇರಿಕಾಗೆ ತೆರಳಿದ್ದರು. ಬಳಿಕ ಅವರು ಈವರೆಗೂ ಪತ್ತೆ ಆಗಿಲ್ಲ. [ಅಂಬರೀಶ್ ವಿರುದ್ಧ ಆಕ್ರೋಶ: 'ದೊಡ್ಮನೆ ಹುಡ್ಗ' ಚಿತ್ರಕ್ಕೆ ಕಂಟಕ]
ಕಾವೇರಿ ಚಳುವಳಿಯಲ್ಲಿ ಭಾಗಿಯಾಗದ ಅಂಬರೀಶ್ ಮೇಲೆ ಮಂಡ್ಯದ ಜನತೆ ಕುಪಿತಗೊಂಡಿದ್ದಾರೆ. ಅವರ ಕೋಪಕ್ಕೆ ಈಗ 'ದೊಡ್ಮನೆ ಹುಡ್ಗ' ಚಿತ್ರ ಗುರಿಯಾಗಿದೆ. ಮುಂದೆ ಓದಿ....
'ದೊಡ್ಮನೆ ಹುಡ್ಗ' ಚಿತ್ರಕ್ಕೆ ತಟ್ಟಿದ ಕಾವೇರಿ ಬಿಸಿ
'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಮಂಡ್ಯ ಶಾಸಕ, ರೆಬೆಲ್ ಸ್ಟಾರ್ ಅಂಬರೀಶ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹೀಗಾಗಿ ಮಂಡ್ಯದಲ್ಲಿ 'ದೊಡ್ಮನೆ ಹುಡ್ಗ' ಚಿತ್ರವನ್ನ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡದಂತೆ ಕಾವೇರಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಒಂದ್ವೇಳೆ ಬಿಡುಗಡೆ ಮಾಡಿದ್ರೆ?
ಈ ಶುಕ್ರವಾರ ಅಪ್ಪಿ-ತಪ್ಪಿ ಮಂಡ್ಯದಲ್ಲಿ 'ದೊಡ್ಮನೆ ಹುಡ್ಗ' ಬಿಡುಗಡೆ ಆದ್ರೆ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಲು ಕಾವೇರಿ ಹೋರಾಟಗಾರರು ನಿರ್ಧರಿಸಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳಲಿ...
ಮಂಡ್ಯ ಜಿಲ್ಲೆಯಲ್ಲಿ 'ದೊಡ್ಮನೆ ಹುಡ್ಗ' ಚಿತ್ರ ಬಿಡುಗಡೆ ಆಗದ ಹಾಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳಬೇಕು.
ತಪ್ಪಿದರೆ ಅನಾಹುತ..
ಒಂದ್ವೇಳೆ ಮಂಡ್ಯದಲ್ಲಿ 'ದೊಡ್ಮನೆ ಹುಡ್ಗ' ಚಿತ್ರ ಬಿಡುಗಡೆ ಆಗಿ, ಅದರಿಂದ ಮುಂದಾಗುವ ಅನಾಹುತಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ನೇರ ಹೊಣೆ ಎಂದಿದ್ದಾರೆ ಕಾವೇರಿ ಹೋರಾಟಗಾರರು.
ಸಂಜಯ್ ಥಿಯೇಟರ್ ನಲ್ಲಿ ಇಲ್ಲ ಅಂಬರೀಶ್ ಕಟೌಟ್
'ದೊಡ್ಮನೆ ಹುಡ್ಗ' ಪ್ರದರ್ಶನಗೊಳ್ಳಲಿರುವ ಮಂಡ್ಯದ ಸಂಜಯ್ ಥಿಯೇಟರ್ ನಲ್ಲಿ ಪುನೀತ್ ರಾಜ್ ಕುಮಾರ್ ಕಟೌಟ್ ಹಾಕಲಾಗಿದೆ ಹೊರತು, ಅಂಬರೀಶ್ ಕಟೌಟ್ ನಿಲ್ಲಿಸಿಲ್ಲ. ಯಾಕಂದ್ರೆ, ಅಂಬಿ ಕಟೌಟ್ ಗಳು ಬೆಂಕಿಗೆ ಆಹುತಿ ಆಗುವ ಭಯ ಚಿತ್ರತಂಡಕ್ಕಿದೆ.
ಸದ್ಯದ ಪರಿಸ್ಥಿತಿಯಲ್ಲಿ ಡೌಟೇ.!
ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ವಿರುದ್ಧ ಸದ್ಯ ಮಂಡ್ಯದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಹೀಗಾಗಿ, ಸೆಪ್ಟೆಂಬರ್ 30 ರಂದು ಮಂಡ್ಯದಲ್ಲಿ 'ದೊಡ್ಮನೆ ಹುಡ್ಗ' ಬಿಡುಗಡೆ ಆಗುವುದು ಡೌಟೇ.