Don't Miss!
- Sports
ಫಿಟ್ನೆಸ್ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್ ತೇರ್ಗಡೆ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಬುಮ್ರಾ ವಾಪಸ್?
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಹೃದಯವಂತ' ರಘುವೀರ್ ರನ್ನ ನೆನೆದು ಸಂಕಟ ಪಟ್ಟ ಜಗ್ಗೇಶ್
Recommended Video
ಒಂದ್ಕಾಲದಲ್ಲಿ ನವರಸ ನಾಯಕ ಜಗ್ಗೇಶ್ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾಗ, ನಟ ರಘುವೀರ್ ರವರ ಮನೆಗೆ ತೆರಳಿ 2 ಸಾವಿರ ರೂಪಾಯಿಗಳನ್ನು ಪಡೆದಿದ್ದರಂತೆ. ಹೃದಯವಂತ ಆಗಿದ್ದ ರಘುವೀರ್ ಅಂದು ಜಗ್ಗೇಶ್ ಗೆ ಸಹಾಯ ಮಾಡಿದ್ದರು.
ಕಷ್ಟದ ದಿನಗಳಲ್ಲಿ ತಮ್ಮ ಕೈ ಹಿಡಿದಿದ್ದ ನಟ ರಘುವೀರ್ ರನ್ನ ನೆನೆದು ಜಗ್ಗೇಶ್ ಸಂಕಟ ಪಟ್ಟಿದ್ದಾರೆ. ನಿನ್ನೆಯಷ್ಟೇ ನಿಮ್ಮ ಫಿಲ್ಮಿಬೀಟ್ ಕನ್ನಡ ನಟ ರಘುವೀರ್ ರವರ ಬದುಕಿನ ಕುರಿತು 'ಯಾರಿಗೂ ಗೊತ್ತಿಲ್ಲದ ರಘುವೀರ್ ಜೀವನದ ಕರಾಳ ಅಧ್ಯಾಯ' ಶೀರ್ಷಿಕೆ ಅಡಿ ಲೇಖನ ಪ್ರಕಟ ಮಾಡಿತ್ತು.
ಯಾರಿಗೂ
ಗೊತ್ತಿಲ್ಲದ
ರಘುವೀರ್
ಜೀವನದ
ಕರಾಳ
ಅಧ್ಯಾಯ
ಟ್ವೀಟ್ ಮೂಲಕ ಆ ಲೇಖನವನ್ನ ಓದಿ, ಟ್ವಿಟ್ಟರ್ ನಲ್ಲಿ ತಮ್ಮ ಹಾಗೂ ರಘುವೀರ್ ನಡುವಿನ ಒಡನಾಟದ ಕುರಿತು ಜಗ್ಗೇಶ್ ಬರೆದುಕೊಂಡಿದ್ದಾರೆ.
''ನಾನು ಪರಿಮಳ ಕಷ್ಟದ ದಿನದಲ್ಲಿ ಇವರ ಮನೆಗೆ ಹೋಗಿ 2000 ಪಡೆದಿದ್ದೆ. ತುಂಬಾ ಹೃದಯವಂತ. ಇವರ ತಂದೆ ಮುನಿಯಲ್ಲಪ್ಪ ನನ್ನ ಆತ್ಮೀಯರು. ತನ್ನ ಇಷ್ಟದ ವಿರುದ್ಧ ಆದ ಮದುವೆಯನ್ನ ಕ್ಷಮಿಸಲಿಲ್ಲ. ಅಷ್ಟು ಹಠ. ಶೋಭರಾಜ್ ರನ್ನ ಸಿನಿಮಾಗೆ ಪರಿಚಯಿಸಿದ್ದು ಇವನೇ. ಎಸ್.ನಾರಾಯಣ್ ನಿರ್ದೇಶಕ ಆದದ್ದು ಇವನಿಂದ. ಇವನ ಸಂಸ್ಥೆಯಲ್ಲಿ ನಾನು ಸಂಬಳ ಪಡೆದಿರುವೆ. ಸಂಕಟವಾಯಿತು ನೆನೆದು'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ನಟ ರಘುವೀರ್ ಕೊನೆಯುಸಿರೆಳೆದಾಗ, ಅಂತಿಮ ದರ್ಶನ ಪಡೆಯಲು ಭೇಟಿ ಕೊಟ್ಟ ಕನ್ನಡದ ಕೆಲವೇ ಕೆಲವು ನಟರ ಪೈಕಿ ಜಗ್ಗೇಶ್ ಕೂಡ ಒಬ್ಬರು.
'ಅಜಯ್ ವಿಜಯ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಘುವೀರ್, 'ಚೈತ್ರ ಪ್ರೇಮಾಂಜಲಿ' ಮತ್ತು 'ಶೃಂಗಾರ ಕಾವ್ಯ' ಅಂತಹ ಹಿಟ್ ಸಿನಿಮಾಗಳನ್ನು ನೀಡಿದ್ದರು. ವೈಯುಕ್ತಿಕ ಬದುಕಿನಲ್ಲಿ ಆದ ಕೆಲ ಘಟನೆಗಳಿಂದ ರಘುವೀರ್ ಮನಸ್ಸು ಘಾಸಿಗೊಂಡಿತ್ತು. ಮೇ 8, 2014 ರಂದು ಹೃದಯಾಘಾತದಿಂದ ರಘುವೀರ್ ನಿಧನರಾದರು.