Don't Miss!
- News ಲೋಕಸಭಾ ಚುನಾವಣೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ಮೇಕೆದಾಟು ಅಸ್ತ್ರ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
29 ವರ್ಷಗಳ ನಂತರ ಶಿವಣ್ಣ ಅವರ ದಾಖಲೆ ಮುರಿದ 'ರಂಗಿ' ನಟ ನಿರುಪ್ ಭಂಡಾರಿ.!
ಇದು ಸುಮಾರು 29 ವರ್ಷಗಳ ಹಿಂದಿನ ಕಥೆ ಆ ಕಾಲದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 1986 ರಲ್ಲಿ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡಿದ್ದ 'ಆನಂದ್' ಚಿತ್ರ ಬಿಡುಗಡೆಯಾಗಿ ಕೇವಲ 25 ವಾರಗಳ ಕಾಲ ಪ್ರದರ್ಶನ ಕಂಡು ದಾಖಲೆ ಸೃಷ್ಟಿಸಿತ್ತು.
ಈ ದಾಖಲೆಯನ್ನು ಮುರಿಯುವುದಾಗಲಿ ಅಥವಾ ಸರಿಗಟ್ಟುವುದಾಗಲಿ ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೆ ಈಗ 29 ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ 'ರಂಗಿತರಂಗ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ನಟ ನಿರುಪ್ ಭಂಡಾರಿ ಅವರು ಈ ದಾಖಲೆಯನ್ನು ಮುರಿಯುವತ್ತ ದಾಪುಗಾಲು ಹಾಕಿದ್ದಾರೆ.[ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ ]
ಬರೋಬ್ಬರಿ 25 ವಾರಗಳ ಪ್ರದರ್ಶನ ಕಂಡು ಇನ್ನು ಸಶಕ್ತವಾಗಿ ಮುಂದುವರಿಯುತ್ತಿರುವ 'ರಂಗಿತರಂಗ' ಸಿನಿಮಾದ ಎಲ್ಲಾ ಕ್ರೆಡಿಟ್ ಗಳು ಸಿನಿಮಾದ ಸ್ಕ್ರಿಪ್ಟ್ ಗೆ ಸಲ್ಲಬೇಕು ಎಂದು ನಟ ನಿರುಪ್ ಭಂಡಾರಿ ಅಭಿಪ್ರಾಯ ಪಟ್ಟಿದ್ದಾರೆ.
'ನಾನು ಸಹನಿರ್ದೇಶಕನಾಗಿ ಸಿನಿಮಾದಲ್ಲಿ ಭಾಗಿಯಾಗಿದ್ದು, ನಾಯಕ ನಟನಾಗುವ ಯಾವುದೇ ಯೋಜನೆ ಇರಲಿಲ್ಲ. ಆದರೆ ಕೊನೆಗೆ ಹೊಸಬನನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದಾಗ ನನ್ನನ್ನೂ ಆಡಿಶನ್ ಗೆ ಕರೆಯಲಾಯಿತು. ಎಂದು ನಟ ನಿರುಪ್ ಅವರು ಹೀರೋ ಆಗಿ ಆಯ್ಕೆ ಆದದ್ದನ್ನು ನೆನಪಿಸಿಕೊಳ್ಳುತ್ತಾರೆ.[ನೀವು 'ರಂಗಿತರಂಗ' ತಂಡದೊಂದಿಗೆ ಕೆಲಸ ಮಾಡಬೇಕೆ? ಇಲ್ಲಿದೆ ಅವಕಾಶ! ]
ಇಲ್ಲಿ ಎಲ್ಲರೂ ಹೊಸಬರೇ ಆಗಿದ್ದರಿಂದ ನನ್ನ ಮೇಲೆ ಯಾವುದೇ ಒತ್ತಡ ಇರಲಿಲ್ಲ, ನಾನು ಈಗಲೂ ಮೊದಲಿನಂತೆಯೇ ಇದ್ದೇನೆ. ಆದರೆ ಜನ ನನ್ನನ್ನು ಗುರುತಿಸುವ ರೀತಿ ಬದಲಾಗಿದೆ. ನನ್ನ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದೆ. ನನ್ನ ಫೋನ್ ನಂಬರ್ ತಿಳಿದುಕೊಳ್ಳಲು ಜನ ಪ್ರಯತ್ನಿಸುತ್ತಿದ್ದಾರೆ' ಎಂದು ನಿರುಪ್ ನುಡಿಯುತ್ತಾರೆ.
ತಮ್ಮ ಸಹೋದರ ಅನುಪ್ ಭಂಡಾರಿ ಅವರು ನಿರ್ದೇಶನ ಮಾಡಿರುವ 'ರಂಗಿತರಂಗ' ಸಿನಿಮಾಗೆ ಟಿವಿ ವಾಹಿನಿಗಳ ಬೇಡಿಕೆ ಹೆಚ್ಚಿದೆಯಂತೆ. 'ಕರ್ನಾಟಕದಾದ್ಯಂತ ಹಲವಾರು ಮಲ್ಟಿಪ್ಲೆಕ್ಸ್ ಗಳನ್ನೂ ಒಳಗೊಂಡಂತೆ 30ಕ್ಕೂ ಹೆಚ್ಚು ಕಡೆ ಪ್ರದರ್ಶನ ಕಾಣುತ್ತಿರುವುದರಿಂದ ಟಿವಿ ಹಕ್ಕುಗಳ ಮಾರಾಟ ಮಾಡುವ ಅವಶ್ಯಕತೆ ಕಂಡುಬಂದಿಲ್ಲ ಎನ್ನುತ್ತಾರೆ ನಟ ನಿರುಪ್.[ಭಂಡಾರಿ ಬ್ರದರ್ಸ್ 'ರಂಗಿತರಂಗ'ಕ್ಕೆ ಭಾರಿ ಕಂಟಕ]
ಅಂದಹಾಗೆ ಸ್ಯಾಂಡಲ್ ವುಡ್ ನ ಹಲವಾರು ನಿರ್ದೇಶಕರು ಅವಕಾಶಗಳ ಸುರಿಮಳೆಯನ್ನೇ ಸುರಿಸಿದ್ದಾರಂತೆ. ಆದರೆ ತಮ್ಮ ಮುಂದಿನ ಯೋಜನೆಗೆ ಸಹೋದರನ ಜೊತೆಗೆ ಸೇರಿಕೊಂಡಿರುವ ನಿರುಪ್ ಭಂಡಾರಿ 'ಸದ್ಯಕ್ಕೆ ಅಣ್ಣ ಅನುಪ್ ಜೊತೆ ಕೆಲಸ ಮಾಡುವ ಬಾಂಧವ್ಯ ಚೆನ್ನಾಗಿದೆ. ಮುಂದೆ ಬೇರೆ ನಿರ್ದೇಶಕರ ಜೊತೆ ಕೆಲಸ ಮಾಡುವ ಯೋಜನೆ ಹಾಕಿಕೊಂಡಿದ್ದೇನೆ ಎಂದು ನಿರುಪ್ ಭಂಡಾರಿ ಹೇಳಿದ್ದಾರೆ.[ಚಂದನವನದ ಕೋಲ್ಮಿಂಚು 'ರಂಗಿತರಂಗ'ಕ್ಕೆ, ನೂರರ ಸಂಭ್ರಮ]
ವಿಶೇಷ ಏನಪ್ಪಾ ಅಂದ್ರೆ ಡಿಸೆಂಬರ್ 20 ರಂದು ಸ್ಯಾಂಡಲ್ ವುಡ್ ನ ಕೋಲ್ಮಿಂಚು 'ರಂಗಿತರಂಗ' ಸಿನಿಮಾ ತಂಡ ಬೆಳ್ಳಿಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳಲಿದೆ.