Don't Miss!
- News Mukhtar Ansari's death: ಉತ್ತರಪ್ರದೇಶದಲ್ಲಿ ಕಿಚ್ಚು ಹಚ್ಚಿದ ಗ್ಯಾಂಗ್ಸ್ಟಾರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ನಿಧನ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ಗುನ್ನ ನೀಡೋಕೆ ಎದ್ದು ನಿಂತ ರಾಗಿಣಿ
ನಟಿ ರಾಗಿಣಿ ದ್ವಿವೇದಿ ಫುಲ್ ಫಿಟ್ ಅಂಡ್ ಫೈನ್ ಆಗಿದ್ದಾರೆ. ತಲೆಗಾದ ಪಟ್ಟಿನಿಂದ ಬಹುಬೇಗ ಚೇತರಿಸಿಕೊಂಡಿರುವ ರಾಗಿಣಿ ಮತ್ತೆ ಶೂಟಿಂಗ್ ಗೆ ಹಾಜರಾಗಿದ್ದಾರೆ.
ಹೌದು, ನಿನ್ನೆಯಷ್ಟೆ ತಲೆಗೆ ಪೆಟ್ಟು ಮಾಡಿಕೊಂಡು ಮೈಸೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ನಟಿ ರಾಗಿಣಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಡಿಸ್ಚಾರ್ಜ್ ಅಗಿದ್ದಾರೆ.
ಏನು ಪ್ರಾಬ್ಲಂ ಇಲ್ಲ ಅಂತ ವೈದ್ಯರು ಹೇಳಿರುವ ಕಾರಣ ಎಂದಿನಂತೆ ಶೂಟಿಂಗ್ ಸೆಟ್ ಗೆ ನಟಿ ರಾಗಿಣಿ ಹಾಜರಾಗಿದ್ದಾರೆ. ಮತ್ತದೇ ಹೊಡಿ ಬಡಿ ದೃಶ್ಯಗಳ ಚಿತ್ರೀಕರಣಕ್ಕೆ ತಾಲೀಮು ನಡೆಸುತ್ತಿದ್ದಾರೆ.
ಅಸಲಿಗೆ ಆಗಿದ್ದೇನು? ನಟಿ ರಾಗಿಣಿ 'ನಾನೇ...ನೆಕ್ಸ್ಟ್ ಸಿ.ಎಂ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಿದ್ದರು. ಚಿತ್ರದ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿತ್ತು. ಮೂರ್ನಾಲ್ಕು ದಾಂಡಿಗರೊಂದಿಗೆ ರಾಗಿಣಿ ಸೆಣಸಾಡಬೇಕಿತ್ತು. [ನಟಿ ರಾಗಿಣಿ ಮೈಸೂರಿನ ವಿಕ್ರಂ ಆಸ್ಪತ್ರೆಗೆ ದಾಖಲು]
ಆಗ ಅಚಾನಕ್ಕಾಗಿ ರಾಗಿಣಿ ತಲೆಗೆ ಪೆಟ್ಟು ಬಿತ್ತು. ತಕ್ಷಣ ಅವರನ್ನ ಸಮೀಪದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯ್ತು. ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ ಬಳಿಕ ರಾಗಿಣಿ ಗುಣಮುಖರಾಗಿದ್ದಾರೆ. ಈ ಬಗ್ಗೆ ರಾಗಿಣಿ ಟ್ವೀಟ್ ಕೂಡ ಮಾಡಿದ್ದಾರೆ.
Thnku
4
ur
wishes
...discharged
and
back
to
work
today
...
Nothing
would
happen
to
me
as
long
as
ur
love
remains
😘😘😘
pic.twitter.com/7cjezXPQ83
—
RAGINI
DWIVEDI
(@raginidwivedi24)
August
24,
2015
ಕೊಂಚ ರೆಸ್ಟ್ ಅಗತ್ಯವಿದ್ದರೂ, ನಿರ್ಮಾಪಕರಿಗೆ ನಷ್ಟ ಅಗಬಾರದು ಅನ್ನುವ ಕಾರಣಕ್ಕೆ ರಾಗಿಣಿ ಇಂದು ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಅನಾರೋಗ್ಯದಲ್ಲೂ ವೃತ್ತಿಪರತೆ ಮೆರೆದಿರುವ ರಾಗಿಣಿ ಬಗ್ಗೆ ನಿರ್ದೇಶಕ ಮುಸ್ಸಂಜೆ ಮಹೇಶ್ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.