Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಾರ ತೆರೆಗೆ ಬರುತ್ತಿರುವ ಕನ್ನಡ ಚಲನಚಿತ್ರಗಳ ಪಟ್ಟಿ ಇಲ್ಲಿದೆ
ಯು.ಎಫ್.ಓ, ಕ್ಯೂಬ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದ್ದು, ಈ ಶುಕ್ರವಾರ ಅಂದ್ರೆ ಮಾರ್ಚ್ 16 ರಂದು ಕನ್ನಡ ಚಿತ್ರಗಳು ತೆರೆಗೆ ಬರಲಿವೆ.
ದಂಡುಪಾಳ್ಯ
-
3
'ದಂಡುಪಾಳ್ಯ
3'
(ಪಾರ್ಟ್
|||)
ಚಿತ್ರ
ಇದೇ
ವಾರ
ರಾಜ್ಯಾದ್ಯಂತ
ಬಿಡುಗಡೆಯಾಗಲಿದೆ.
ಈ
ಹಿಂದೆ
'ದಂಡುಪಾಳ್ಯ',
'ದಂಡುಪಾಳ್ಯ-2'
ಚಿತ್ರಗಳನ್ನು
ನಿರ್ದೇಶಿಸಿದ್ದ
ಶ್ರೀನಿವಾಸರಾಜು
ಅವರೇ
ಈ
ಚಿತ್ರಕ್ಕೆ
ಆಕ್ಷನ್-ಕಟ್
ಹೇಳಿದ್ದಾರೆ.
ನವೀನ್
ಕೃಷ್ಣ,
ಗುರುರಾಜ
ದೇಸಾಯಿ,
ರಮೇಶ್
ಹಾಗೂ
ತಬಲಾನಾಣಿ
ಸಂಭಾಷಣೆ
ರಚಿಸಿದ್ದಾರೆ.
'ದಂಡುಪಾಳ್ಯ-2' ಚಿತ್ರದ ಮುಂದುವರಿದ ಭಾಗವಾಗಿ ಈ ಚಿತ್ರ ಮೂಡಿಬರಲಿದ್ದು, ಆ ಚಿತ್ರದಲ್ಲಿ ಉಳಿಸಿಕೊಂಡಿದ್ದ ಒಂದಷ್ಟು ಕನ್ ಫ್ಯೂಷನ್ ಗಳಿಗೆ ಈ ಚಿತ್ರದ ಮೂಲಕ ಉತ್ತರ ಸಿಗಲಿದೆ.
ಮತ್ತೆ ಚಿತ್ರ ಪ್ರದರ್ಶನ ಶುರು : ಯು ಎಫ್ ಓ, ಕ್ಯೂಬ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ
ರಾಮ್ ತಳ್ಳೂರಿ ಅವರ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಶ್ರೀನಿವಾಸರಾಜು ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಪೂಜಾಗಾಂಧಿ, ರವಿಶಂಕರ್, ರವಿಕಾಳೆ, ನಕುಲ್ ದೇಶಪಾಂಡೆ, ಕರಿಸುಬ್ಬು, ಪೆಟ್ರೋಲ್ ಪ್ರಸನ್ನ ಸೇರಿದಂತೆ 'ದಂಡುಪಾಳ್ಯ 2' ಚಿತ್ರದಲ್ಲಿದ್ದ ಬಹುತೇಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವೆಂಕಟ್ ಪ್ರಸಾದ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಇದೆ.
'ನನಗಿಷ್ಟ'
ಶ್ರೀಲಕ್ಷ್ಮೀವೆಂಕಟೇಶ್ವರ
ವಿಷನ್ಸ್
ಲಾಂಛನದಲ್ಲಿ
ಯುವರಾಜ್
ನಿರ್ಮಿಸಿರುವ
'ನನಗಿಷ್ಟ'
ಚಿತ್ರ
ಈ
ವಾರ
ರಾಜ್ಯಾದ್ಯಂತ
ತೆರೆಗೆ
ಅಪ್ಪಳಿಸಲಿದೆ.
ರಾಧಾಕೃಷ್ಣ
ಕೆ.ವಿ
ಕಥೆ
ಬರೆದಿರುವ
ಈ
ಚಿತ್ರಕ್ಕೆ
ದಿನೇಶ್
ಬಾಬು
ಅವರು
ಚಿತ್ರಕಥೆ,
ಸಂಭಾಷಣೆ
ಬರೆದು
ಛಾಯಾಗ್ರಹಣದೊಂದಿಗೆ
ನಿರ್ದೇಶನವನ್ನು
ಮಾಡಿದ್ದಾರೆ.
ನಂದಿತ
ರಾಕೇಶ್
ಸಂಗೀತ
ನಿರ್ದೇಶನವಿರುವ
ಈ
ಚಿತ್ರಕ್ಕೆ
ವಿನಿಲ್
ಮೆನನ್
ಹಿನ್ನಲೆ
ಸಂಗೀತ
ನಿಡಿದ್ದಾರೆ.
ಹಂಸಲೇಖ
ಅವರು
ಗೀತರಚನೆ
ಮಾಡಿರುವ
ಈ
ಚಿತ್ರಕ್ಕೆ
ಕುಮಾರ್
ಕೋಟೆಕೊಪ್ಪ
ಅವರ
ಸಂಕಲನವಿದೆ.
ಅಶ್ವಿನ್ ದೇವಾಂಗ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿಯಾಗಿ ರಚನಗೌಡ (ದಿವಂಗತ) ನಟಿಸಿದ್ದಾರೆ. ರಾಜೇಶ್ ನಟರಂಗ, ಕರಿಸುಬ್ಬು, ತನುಜ, ಜಯಶ್ರೀ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
'ಇದಂ
ಪ್ರೇಮಂ
ಜೀವನಂ'
ಗೋಕುಲ್
ಎನ್.ಕೆ
ಹಾಗೂ
ನವೀನ್
ಕುಮಾರ್
ಜೆ.ಪಿ
ಅವರು
ನಿರ್ಮಿಸಿರುವ
'ಇದಂ
ಪ್ರೇಮಂ
ಜೀವನಂ'
ಚಿತ್ರ
ಈ
ವಾರ
ರಾಜ್ಯಾದ್ಯಂತ
ರಿಲೀಸ್
ಆಗಲಿದೆ.
ರಾಘವಾಂಕ ಪ್ರಭು ನಿರ್ದೇಶನದ ಈ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ನವೀನ್ ಪಂಚಾಕ್ಷರಿ ಛಾಯಾಗ್ರಹಣ ಹಾಗೂ ಕುಮಾರ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಸನತ್, ಶನಾಯ ಕಾಟ್ವೆ, ಅವಿನಾಶ್, ಮಾಳವಿಕ, ಬಾಲರಾಜ್, ವಿನಯ್, ಸಿರಿ, ನಿಶಾ ಮುಂತಾದವರಿದ್ದಾರೆ.
ಓ
ಪ್ರೇಮವೇ
ನವ
ನಿರ್ದೇಶಕ
ಮನೋಜ್
ನಿರ್ದೇಶನದ
ಸಿನಿಮಾ
'ಓ
ಪ್ರೇಮವೇ'
ಕೂಡ
ಇದೇ
ವಾರ
ನಿಮ್ಮೆಲ್ಲರ
ಮುಂದೆ
ಬರಲಿದೆ.
ಚಿತ್ರದಲ್ಲಿ
ಸಂಜನಾ
ಸಹೋದರಿ
ನಿಕ್ಕಿ
ಗಲ್ರಾನಿ,
ಅಪೂರ್ವ,
ಹುಚ್ಚ
ವೆಂಕಟ್
ಜೊತೆಗೆ
ಅನೇಕರು
ಅಭಿನಯಿಸಿದ್ದಾರೆ.