Don't Miss!
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕುತೂಹಲ, ತಾರ್ಕಿಕ ಅಂಶ ಇದ್ದರೆ ಫಿಲಂಗೆ ಬೆಲೆ: ಹಂಸಲೇಖ
ಕುತೂಹಲ ಹಾಗೂ ತಾರ್ಕಿಕ ಅಂಶಗಳು ಒಳಗೊಂಡಿದ್ದಾರೆ ಮಾತ್ರ ಒಂದು ಉತ್ತಮ ಚಲನಚಿತ್ರ ಮೂಡಿಬರಲು ಸಾಧ್ಯವಾಗುತ್ತದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಡಾ. ಹಂಸಲೇಖ ಅವರು ಅಭಿಪ್ರಾಯಪಟ್ಟಿದ್ದಾರೆ.
ಶ್ರೀರಂಗಪಟ್ಟಣ ಸಮೀಪ ಕಾವೇರಿ ಸನ್ನಿಧಿಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಆಯೋಜಿಸಿದ ಚಲನಚಿತ್ರಗಳಿಗೆ ಚಿತ್ರಕಥೆ ರಚಿಸುವ ಬಗ್ಗೆ ಮೂರು ದಿನಗಳ ಚಿತ್ರಕಥಾ ರಚನಾ ಕಮ್ಮಟವನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
'ಕಥೆಯಲ್ಲಿ ಕುತೂಹಲವಿರಬೇಕು ಹಾಗೂ ತಾರ್ಕಿಕ ಅಂಶಗಳು ಒಳಗೊಂಡಿರುಬೇಕು ಇದರಿಂದ ಸಿನಿಮಾ ನೋಡುಗರಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಹಾಗೂ ಚಿತ್ರ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದ ಅವರು ಕಥೆಗಾರನ್ನು ಉತ್ತಮ ಕಥೆಯನ್ನು ಬರೆಯುವುದು ಒಂದು ಕಲೆ ಹಾಗೂ ನಿರ್ದೇಶಕರಿಗೆ ಕಥೆ ಹೇಳುವುದು ಒಂದು ಕಲೆಯಾಗಿರುತ್ತದೆ ಎಂದರು.
ಕರ್ನಾಟಕದಲ್ಲಿ ಸಿನಿಮಾ ರಂಗದಲ್ಲಿ ಕಥೆಗಾರನ್ನು ತಮ್ಮ ಪ್ರತಿಭೆಯನ್ನು ಹೊರಹಾಕಬೇಕು. ಕಥೆಗಾರನು ಪ್ರತಿಯೊಂದು ಸಂಭಾಷಣೆಯನ್ನು ಹಾಗೂ ಘಟನೆಯನ್ನು ನಿರ್ದೇಶಕನಿಗೆ ಉತ್ತಮವಾಗಿ ಪ್ರಸ್ತುತ ಪಡಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಆಗ ಮಾತ್ರ ನಿರ್ದೆಶಕರು ಕಥೆಯನ್ನು ಒಪ್ಪುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದ
ಅಧ್ಯಕ್ಷತೆಯನ್ನು
ವಹಿಸಿ
ಮಾತನಾಡಿದ
ಕರ್ನಾಟಕ
ಚಲನಚಿತ್ರ
ಅಕಾಡೆಮಿಯ
ಅಧ್ಯಕ್ಷರಾದ
ಎಸ್.ವಿ.ರಾಜೇಂದ್ರಸಿಂಗ್
ಬಾಬು
ಅವರು
ಮಾತನಾಡಿ
ಯಾವುದೇ
ಸಿನಿಮಾ
ಯಶಸ್ವಿಯಾಗಲು
ಉತ್ತಮ
ಕಥೆ
ಮುಖ್ಯ
ಹಾಗೂ
ಕನ್ನಡ
ಸಿನಿಮಾದಲ್ಲಿ
ಒಳ್ಳೆಯ
ಚಿತ್ರಕಥೆ
ರಚಿಸುವವರು
ಬರಬೇಕು
ಎಂಬ
ಉದ್ದೇಶದಿಂದ
ಮೂರು
ದಿನಗಳ
ಚಿತ್ರಕಥಾ
ರಚನಾ
ಕಮ್ಮಟವನ್ನು
ಆಯೋಜಿಸಿದ್ದು
ಇದರ
ಸದುಪಯೋಗ
ಪಡೆದು
ಉತ್ತಮ
ಚಿತ್
ರಕಥಾಗಾರರಾಗಿ
ಕನ್ನಡ
ಚಲನಚಿತ್ರ
ರಂಗಕ್ಕೆ
ಬರಲಿ
ಎಂದು
ಅವರು
ಆಶಿಸಿದರು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕರಾದ ಎನ್.ಆರ್.ನಂಜುಂಡೇಗೌಡ, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ಬೀರಪ್ಪ, ಕಮ್ಮಟದ ನಿರ್ದೇಶಕರು ಹಾಗೂ ಚಲನಚಿತ್ರ ನಿರ್ದೇಶಕರಾದ ರಾಮದಾಸನಾಯ್ಡು, ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಹೆಚ್.ಬಿ. ದಿನೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಾಶ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.