2017ನೇ ಸಾಲಿನ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಪ್ರಕಟ
ಈ ವರ್ಷದ 'ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ' ಪ್ರಕಟವಾಗಿದೆ. 'ಜೀವಮಾನದ ಗೌರವ ಪ್ರಶಸ್ತಿ'ಕ್ಕೆ ಹಿರಿಯ ರಂಗಕರ್ಮಿ ಪ್ರಸನ್ನ ಭಾಜನರಾಗಿದ್ದಾರೆ.
ರಂಗಭೂಮಿಯಲ್ಲಿ ಸಾಧನೆ ಮಾಡಿದ 25 ಮಹಾನೀಯರುಗಳು ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ನಟ ಮಂಡ್ಯ ರಮೇಶ್, ನಾಗಿಣಿ ಭರಣ, ನಾಗೇಶ್ ಕಶ್ಯಪ್, ಕೃಷ್ಣಮೂರ್ತಿ ಕವತ್ತಾರು, ಕೆ.ರಾಮಕೃಷ್ಣಯ್ಯ ಪ್ರಶಸ್ತಿ ಪಡೆಯುವವರ ಪಟ್ಟಿಯಲ್ಲಿ ಪ್ರಮುಖರಾಗಿದ್ದಾರೆ. ಇವರಿಗೆ ತಲಾ 25 ಸಾವಿರ ರೂಪಾಯಿ ನೀಡಿ ಗೌರವಿಸಲಾಗುತ್ತದೆ.

'ಜೀವಮಾನದ ಗೌರವ ಪ್ರಶಸ್ತಿ' ಪಡೆಯುವ ಹಿರಿಯ ರಂಗಕರ್ಮಿ ಪ್ರಸನ್ನ ಅವರಿಗೆ 50 ಸಾವಿರ ನಗದು ಪುರಸ್ಕಾರ ನೀಡಲಾಗುತ್ತದೆ. ಇನ್ನು ಈ ಮಾಹಿತಿಯನ್ನು ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷ ಜೆ. ಲೋಕೇಶ್ ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ತಿಳಿಸಿದ್ದಾರೆ.
More from Filmibeat
English summary
Karnataka Nataka Academy Awards 2017 announced. And theater artist Prasanna got lifetime achievement award.


Click it and Unblock the Notifications











