Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತುಳಸಿಯಂತೆ ಗಾಂಜಾ ಸಹ ಶ್ರೇಷ್ಠ: ನಟಿ ನಿವೇದಿತಾ
ಗಾಂಜಾ ದಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಆಯುರ್ವೇದದಲ್ಲಿಯೂ ಗಾಂಜಾಕ್ಕೆ ಉತ್ತಮ ಸ್ಥಾನ ಮಾನಗಳಿವೆ. ತುಳಸಿಯಷ್ಟೆ ಗಾಂಜಾ ಸಹ ಶ್ರೇಷ್ಠ ಎಂದಿದ್ದಾರೆ ನಟಿ ನಿವೇದಿತಾ.
Recommended Video
ಕನ್ನಡದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ನಿವೇದಿತಾ, ಗಾಂಜಾ ಗಿಡವನ್ನು ತುಳಸಿಗೆ ಹೋಲಿಸಿದ್ದಾರೆ. ಅಷ್ಟೇ ಅಲ್ಲದೆ ಗಾಂಜಾ 'ಮಹಿಮೆ'ಯನ್ನು ಕೊಂಡಾಗಿದ್ದಾರೆ.
ಸನಾತನ ಧರ್ಮದಲ್ಲಿ ಗಾಂಜಾ ಗೆ ವಿಶೇಷ ಸ್ಥಾನವಿದೆ. ಆಯುರ್ವೇಧ ಮಾತ್ರವಲ್ಲದೆ ಅಲೋಪತಿಯಲ್ಲೂ ಸಹ ಗಾಂಜಾವನ್ನು ಬಳಸಲಾಗುತ್ತದೆ ಎಂದು ನಟಿ ನಿವೇದಿತಾ ಹೇಳಿದ್ದಾರೆ.
ಜಗತ್ತಿನ ಹಲವು ದೇಶಗಳಲ್ಲಿ ಗಾಂಜಾ ಮಾರಾಟ, ಬಳಕೆ ಕಾನೂನುಬದ್ಧವಾಗಿದೆ. ಗಾಂಜಾದಿಂದ ಅಪರಾಧ ಪ್ರಮಾಣ ಸಹ ಕಡಿಮೆ ಆಗುತ್ತದೆ. ನಮ್ಮ ದೇಶದಲ್ಲಿಯೂ ಗಾಂಜಾವನ್ನು ಕಾನೂನುಬದ್ಧಗೊಳಿಸಲು ಸರ್ಕಾರ ಮುಂದಾಗಬೇಕು ಎಂದಿದ್ದಾರೆ ನಿವೇದಿತಾ.
'ಸಿಂಥೆಟಿಕ್ ಮಾದಕ ವಸ್ತು, ಕುಡಿತದಿಂದ ಅಪಾಯ'
ನಮ್ಮಲ್ಲಿ ಸಿಂಥೆಟಿಕ್ ಮಾದಕ ವಸ್ತುಗಳು ಹಾಗೂ ಕುಡಿತದಿಂದಾಗಿ ಅಪರಾಧ ಪ್ರಮಾಣ ಅತಿಯಾಗಿದೆ. ಗಾಂಜಾ ಕಾನೂನುಬದ್ಧವಾಗಿರುವ ಎಷ್ಟೋ ದೇಶಗಳಲ್ಲಿ ಅಪರಾಧ ಪ್ರಮಾಣ ಕಡಿಮೆ ಇದೆ ಎಂದರು ನಿವೇದಿತಾ.
'ಗಾಂಜಾದಲ್ಲಿನ ಔಷಧೀಯ ಗುಣವನ್ನು ಪರಿಗಣಿಸಿ'
ಗಾಂಜಾದಲ್ಲಿರುವ ಔಷಧೀಯ ಗುಣ ಹಾಗೂ ಇನ್ನಿತರೆ ವಿಷಯಗಳನ್ನು ಪರಿಗಣಿಸಿ ಅದನ್ನು ಕಾನೂಬದ್ಧಗೊಳಿಸಬೇಕು ಎಂದು ನಟಿ ನಿವೇದಿತಾ ಹೇಳಿದ್ದಾರೆ. ಈ ಹಿಂದೆಯಿಂದ ಒಂದು ಬಗೆಯ ಗುಂಪು ಗಾಂಜಾವನ್ನು ಕಾನೂನುಬದ್ಧಗೊಳಿಸಬೇಕು ಎಂದು ಒತ್ತಾಯಿಸುತ್ತಲೇ ಬಂದಿದೆ.
ಗಟ್ಟಿ ಪಾತ್ರಗಳಿಗೆ ಖ್ಯಾತರು ನಿವೇದಿತಾ
ನಟಿ ನಿವೇದಿತಾ ತಮ್ಮ ಗಟ್ಟಿ ನುಡಿಗಳಿಗೆ, ಗಟ್ಟಿ ಪಾತ್ರಗಳಿಗೆ ಖ್ಯಾತರು. ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಿವೇದಿತಾ ಅಭಿನಯ ಗಮನ ಸೆಳೆದಿತ್ತು. ಕನ್ನಡದ ಹೊರತಾಗಿ ಕೆಲವು ತಮಿಳು ಸಿನಿಮಾಗಳಲ್ಲಿಯೂ ನಿವೇದಿತಾ ನಟಿಸಿದ್ದಾರೆ.
ಸ್ಯಾಂಡಲ್ವುಡ್ಗೆ ಮಾದಕ ವಸ್ತು ನಂಟು?
ಚಂದನವನಕ್ಕೆ ಡ್ರಗ್ಸ್ ಮಾಫಿಯಾದ ನಂಟಿದೆ ಎಂಬ ಕುರಿತಾಗಿ ಚರ್ಚೆ ಪ್ರಸ್ತುತ ತಾರಕ್ಕೇರಿದೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಇಂದ್ರಜಿತ್ ಲಂಕೇಶ್, ಆದಿ ಲೋಕೇಶ್, ರಕ್ಷತ್ ಇನ್ನೂ ಕೆಲವರು ಚಂದನವನದ ಕೆಲವು ನಟ-ನಟಿಯರು ಮಾದಕ ವ್ಯಸನಿಗಳಾಗಿದ್ದಾರೆ ಎಂದು ಹೇಳಿದ್ದಾರೆ.