Don't Miss!
- News Rain Alert: ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ: ಈ ಜಿಲ್ಲೆಗಳಲ್ಲಿ ಭಾರಿ ಬಿಸಿಲು
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆಲುಗು ಚಾರ್ ಮಿನಾರ್ ಗೆ ನಾಗಾರ್ಜುನ ಪುತ್ರ
ಆದರೆ ಚಂದ್ರು ಅವರು ಹಲವರೊಂದಿಗೆ ಚರ್ಚಿಸಿ ಕಡೆಗೆ ನಾಗಾರ್ಜುನ ಪಡಿಯಚ್ಚಿನಂತಿರುವ ಅವರ ಪುತ್ರ ನಾಗಚೈತನ್ಯ ಅವರನ್ನು ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡಲು ಮುಂದಾಗಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಪೋಷಿಸಿದ್ದ ಪಾತ್ರವನ್ನು ನಾಗಚೈತನ್ಯ ತೆಲುಗಿನಲ್ಲಿ ಪೋಷಿಸಲಿದ್ದಾರೆ.
ನಟ ನಾಗಾರ್ಜುನ ಅವರಿಗಿಂತಲೂ ನಾಗಚೈತನ್ಯ ಅವರಿಗೆ ಚಿತ್ರದ ಕಥೆ ಹೆಚ್ಚಾಗಿ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಂದ್ರು ಅವರಿಗೆ ಮಣೆಹಾಕಲು ತೀರ್ಮಾನಿಸಿದ್ದಾರೆ. ಇನ್ನು ನಾಗಚೈತನ್ಯ ಬಗ್ಗೆ ಹೇಳಬೇಕೆಂದರೆ, ಅವರ ಅಭಿನಯದ '100% ಲವ್', 'ಬೆಜವಾಡ', 'ಆಟೋನಗರ್ ಸೂರ್ಯ' ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.
ಚಾರ್ ಮಿನಾರ್ ತೆಲುಗು ರೀಮೇಕ್ ಚಿತ್ರವನ್ನು ಲಗಡಪತಿ ಶ್ರೀಧರ್ ಎಂಬುವವರು ನಿರ್ಮಿಸುತ್ತಿದ್ದಾರೆ. ಆದರೆ ಆಕ್ಷನ್ ಕಟ್ ಆರ್ ಚಂದ್ರು ಅವರೇ ಹೇಳುತ್ತಾರೋ ಅಥವಾ ಬೇರೆ ನಿರ್ದೇಶಕನ ಕೈಗೆ ಕೊಡುತ್ತಾರೋ ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ.
ಬಾಕ್ಸ್ ಆಫೀಸಲ್ಲಿ 'ಚಾರ್ ಮಿನಾರ್' (ಚಿತ್ರ ವಿಮರ್ಶೆ ಓದಿ) ಚಿತ್ರ ಸುಮಾರಾಗಿ ಸದ್ದು ಮಾಡಿದೆ. ಚಿತ್ರದ ಡೈಲಾಗ್ಸ್, ಒಂದೆರಡು ಹಾಡುಗಳು ಚೆನ್ನಾಗಿದ್ದು ಚಂದ್ರು ಪ್ರಯತ್ನಕ್ಕೆ ಪ್ರಶಂಸೆಯ ಮಾತುಗಳು ಕೇಳಿಬಂದಿವೆ. ಕನ್ನಡ ಚಿತ್ರವೊಂದು ತೆಲುಗಿಗೆ ರೀಮೇಕ್ ಆಗುತ್ತಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿ. (ಏಜೆನ್ಸೀಸ್)