Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನವೀನ್ ಕೃಷ್ಣರ ನಮಸ್ತೆ ಬೆಂಗಳೂರು
ಶ್ರೀಸಾಯಿರಾಘವೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಭಕ್ತವತ್ಸಲಂ ಅವರು ನಿರ್ಮಿಸುತ್ತಿರುವ ಚಿತ್ರ 'ನಮಸ್ತೆ ಬೆಂಗಳೂರು'. ವಿಭಿನ್ನ ಶೀರ್ಷಿಕೆಯ ಈ ಚಿತ್ರಕ್ಕೆ ಈಗ ಶೇಷಾದ್ರಿಪುರಂನಲ್ಲಿರುವ ಡಿಯಾ ಸ್ಟೂಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ನಡೆಯುತ್ತಿದೆ.
ಶ್ರೀದೇವಿ ಅವರು ಬರೆದಿರುವ 'ಡಿಂಗು ಮಜಾ ಡಿಂಗು ಮಜಾ - ನಂಗೂ ಮಜಾ ನಿಂಗೂ ಮಜಾ' ಹಾಗೂ ವೇದಾಂತ್ ರಚಿಸಿರುವ 'ಬಾರೇ ನೀ ಬಾರೆ ಮೈಡೊಂಕಿನ ವೈಯ್ಯಾರಿ' ಎಂಬ ಗೀತೆಗಳು ಚಿತ್ರಕ್ಕೆ ಸಂಗೀತ ನೀಡುತ್ತಿರುವ ರಾಜ್ಭಾಸ್ಕರ್ ಅವರ ಸಾರಥ್ಯದಲ್ಲಿ ಧ್ವನಿಮುದ್ರಣಗೊಂಡಿವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಪ್ರಸ್ತುತ ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ಈ ಕಥಾನಕವನ್ನು ವಿರೂಪಾಕ್ಷ ಅವರು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ಇವರು ನೃತ್ಯ ಸಂಯೋಜನೆಯನ್ನೂ ಮಾಡಿದ್ದಾರೆ. ಡಿ.ವಿ.ರಾಜು ಕ್ಯಾಮೆರಾ, ಎಸ್.ಮನೋಹರ್ ಸಂಕಲನ, ಜಾಲಿಬಾಸ್ಟಿನ್ ಸಾಹಸ, ರಮೇಶ್ ನಿರ್ಮಾಣ ನಿರ್ವಹಣೆ ಹಾಗೂ ಪ್ರಶಾಂತ್ ನಿರ್ಮಾಣ ಮೇಲ್ವಿಚಾರಣೆ ಈ ಚಿತ್ರಕ್ಕಿದೆ.
ತಮ್ಮ ಅಮೋಘ ಅಭಿನಯದಿಂದ ಖ್ಯಾತರಾಗಿರುವ ನವೀನ್ಕೃಷ್ಣ 'ನಮಸ್ತೆ ಬೆಂಗಳೂರು' ಚಿತ್ರದ ನಾಯಕ. ರಂಜಿತಾ ಚಿತ್ರದನಾಯಕಿ. ಶ್ರೀನಿವಾಸಮೂರ್ತಿ, ರವಿ, ಸಂಗೀತಾ, ಮನೋಜ್, ರೇಖಾದಾಸ್, ಬುಲೆಟ್ ಪ್ರಕಾಶ್, ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ, ಬ್ಯಾಂಕ್ ಜನಾರ್ದನ್, ಸ್ವಸ್ತಿಕ್ ಶಂಕರ್, ಡಿಂಗ್ರಿ ನಾಗರಾಜ್ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)