Don't Miss!
- News Shivamogga: ದೇಶದಲ್ಲಿ ಕಾಂಗ್ರೆಸ್ನ ಸ್ಪರ್ಧೆಯ ಕ್ಷೇತ್ರ, ಟಾರ್ಗೆಟ್ ಕ್ಷೇತ್ರಗಳ ಲೆಕ್ಕ ಕೊಟ್ಟ ಮಾಜಿ ಸಿಎಂ
- Finance ನೆಸ್ಲೆಯ ಸೆರೆಲಾಕ್ ಶಿಶು ಹಾಲಿನಲ್ಲಿ ಸಕ್ಕರೆ ಅಂಶ ಪತ್ತೆ: ತನಿಖಾ ವರದಿಯಲ್ಲಿ ಬಹಿರಂಗ
- Technology ಬೋರಿಂಗ್ ಫೋನ್ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್?
- Lifestyle ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಂಭೆ ಊರ್ವಶಿ ಮೇನಕಾ ಜೊತೆ ಪ್ರಜ್ವಲ್ ಆಗಮನ!
ಗುಲಾಮ ಚಿತ್ರದ ನಂತರ ಕೋಟಿ ರಾಮು ನಿರ್ಮಾಣದ 'ಸಾಗರ್' ಚಿತ್ರದಲ್ಲಿ ಪ್ರಜ್ಡಲ್ ದೇವರಾಜ್ ಮತ್ತೆ ನಟಿಸಿದ್ದಾರೆ. ಈ ಚಿತ್ರ ಈ ಶುಕ್ರವಾರ, 10 ಆಗಸ್ಟ್ 2012 ರಂದು ತೆರೆಗೆ ಬರಲಿದೆ. ಕೆಜಿ ರಸ್ತೆಯ 'ಸಾಗರ್' ಚಿತ್ರಮಂದಿರಕ್ಕಾಗಿಯೇ ಕಾದಿದ್ದ 'ಸಾಗರ್' ಚಿತ್ರತಂಡ, ಅದ್ದೂರಿ ಚಿತ್ರ 50 ಯಶಸ್ವಿ ದಿನ ಪೂರೈಸಿಯೂ 'ಔಟ್' ಆಗದ ಹಿನ್ನೆಲೆಯಲ್ಲಿ 'ತ್ರಿವೇಣಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಈ ಬಾರಿಯಾದರೂ ಪ್ರಜ್ವಲ್ ಗೆಲ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.
ಇತ್ತೀಚಿಗೆ ಪ್ರಜ್ವಲ್ ದೇವರಾಜ್ ನಾಯಕತ್ವದ ಚಿತ್ರಗಳು ಘೋಷಣೆಯಾಗಿ ಮುಹೂರ್ತ ಕಂಡು ನಂತರ ಮಾಯವಾಗುವುದೇ ಹೆಚ್ಚು. ಕೆಲವು ಚಿತ್ರೀಕರಣ ಮುಗಿಸಿದರೂ ಅವು ಬಿಡುಗಡೆಯಾಗಿಲ್ಲ. ಬಿಡುಗಡೆಯಾಗಿದ್ದು ಸೋತಿದೆ. ಹೀಗಿರುವಾಗ ಈ ಸಾಗರ್ ಚಿತ್ರ ಬಿಡುಗಡೆಯಾಗುತ್ತಿರುವುದು ಪ್ರಜ್ವಲ್ ಅಭಿಮಾನಿಗಳಿಗೆ ಭಾರಿ ಸಂತಸ ತಂದಿದೆ. ಸ್ವತಃ ಪ್ರಜ್ವಲ್ ಕೂಡ ಖುಷಿಯಾಗಿದ್ದಾರೆ. ಆದರೆ ಗೆಲುವನ್ನು ಎಲ್ಲರೂ ನಿರೀಕ್ಷಿಸುವಂತಾಗಿದೆ.
ಈ ವೇಳೆಯಲ್ಲಿ ಮರಳುಗಾಡಲ್ಲಿ ಓಯಸಿಸ್ ಸಿಕ್ಕಂತೆ ತೆರೆಗೆ ಬರಲು ರೆಡಿಯಾಗಿರುವ ಚಿತ್ರವೇ 'ಸಾಗರ್'. ಇಲ್ಲಿ ಪ್ರಜ್ವಲ್ಗೆ ಮೂವರು ಹೀರೋಯಿನ್ಗಳು. ರಾಧಿಕಾ ಪಂಡಿತ್, ಹರಿಪ್ರಿಯಾ ಮತ್ತು ಸಂಜನಾ ಎಂಬ ಮೂವರು ದಂತದ ಬೊಂಬೆಗಳ ಜತೆ ರೊಮ್ಯಾನ್ಸ್ ಮಾಡಿದ್ದಾರೆ ಈ 'ಸಿಕ್ಸರ್' ಹುಡುಗ. ಈ ಚಿತ್ರದ ಮೇಲೆ ಅವರಿಗೆ ಅಪಾರ ಭರವಸೆಯಿದೆ.
ಈ ಹಿಂದೆ ಬಂದಿದ್ದ ಪ್ರಜ್ವಲ್ ಚಿತ್ರ 'ಗುಲಾಮ' ನಿರ್ಮಾಪಕ ಕೋಟಿ ರಾಮುಗೆ ಸಾಕಷ್ಟು ಲಾಸ್ ಮಾಡಿತ್ತು. ಈಗ ನಿರ್ದೇಶಕ ಎಂ.ಡಿ. ಶ್ರೀಧರ್ ನಂಬಿ ಮತ್ತೆ ಪ್ರಜ್ವಲ್ ಮೇಲೆ ಕೋಟಿ ಸುರಿದಿದ್ದಾರೆ. ಅದರಲ್ಲೂ ಆಶ್ಚರ್ಯದ ಸಂಗತಿ ಏನೆಂದರೆ ಸಾಮಾನ್ಯವಾಗಿ ರೀಮೇಕ್ ಚಿತ್ರ ಮಾಡುತ್ತಿದ್ದ ಶ್ರೀಧರ್, ಈ ಬಾರಿ ಅಪರೂಪವೆಂಬಂತೆ ಸ್ವಮೇಕ್ ಚಿತ್ರ ಸಾಗರ್ ಮಾಡಿದ್ದಾರೆ.
ಈ ಚಿತ್ರದ ಮೂಲಕ 'ಮಗಧೀರ' ಖ್ಯಾತಿಯ ದೇವಗಿಲ್ ಕನ್ನಡಕ್ಕೆ ಬಂದಿದ್ದಾರೆ. ಅವರ ಪಾತ್ರಕ್ಕೆ ಡಬ್ಬಿಂಗ್ ಮಾಡಿರುವವರು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್. ನಿರ್ಮಾಪಕ ರಾಮು ಈ ಮೊದಲು ತೆಲುಗಿನಲ್ಲಿ ನಿರ್ಮಿಸಲು ಮುಂದಾಗಿದ್ದ ಸಾಗರ್ ಚಿತ್ರವನ್ನು ಅವರ ನಿರ್ಧಾರವನ್ನು ಬದಲಿಸಿ ನಿರ್ದೇಶಿಸಿದ್ದು ನಿರ್ದೇಶಕ ಎಂಡಿ ಶ್ರೀಧರ್. ಕನ್ನಡದಲ್ಲಿ ಯಶಸ್ವಿಯಾದರೆ ಮುಂದೆ 'ಸಾಗರ್' ಚಿತ್ರ ತೆಲುಗಿಗೆ ರಿಮೇಕ್ ಅಥವಾ ಡಬ್ ಆಗಲಿದೆ.
ಅಂದಹಾಗೆ, ಈ ಚಿತ್ರದಲ್ಲಿ 'ಸಿಕ್ಸರ್' ಖ್ಯಾತಿಯ ನಟ ಪ್ರಜ್ವಲ್ ದೇವರಾಜ್, ಮೂರು ನಾಯಕಿಯರ ಜೊತೆ ರೊಮಾನ್ಸ್ ಮಾಡಲಿದ್ದಾರೆ. ಕನ್ನಡದ ಸುರಸುಂದರಿಯರಾದ ಹರಿಪ್ರಿಯಾ, ರಾಧಿಕಾ ಪಂಡಿತ್ ಹಾಗೂ ಸಂಜನಾ ಈ ಚಿತ್ರದಲ್ಲಿ ಪ್ರಜ್ವಲ್ ಜೋಡಿಯಾಗಿದ್ದಾರೆ. ಎಂಡಿ ಶ್ರೀಧರ್ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. (ಒನ್ ಇಂಡಿಯಾ ಕನ್ನಡ)