Don't Miss!
- News ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ನಾಯಕನೇ ಇಲ್ಲ: ಪ್ರಧಾನಿ ಮೋದಿ!
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇನ್ನೂರು ಚಿತ್ರಮಂದಿರಗಳಿಗೆ ಪ್ರೇಮ್ ಅಡ್ಡ ಲಗ್ಗೆ
ತಮಿಳಿನ ಯಶಸ್ವಿ ಸುಬ್ರಹ್ಮಣ್ಯಪುರಂ ರೀಮೇಕ್ ಚಿತ್ರವಿದು. ಬೇರೆಯವರ ನಿರ್ದೇಶನದಲ್ಲಿ ಪ್ರೇಮ್ ಅಭಿನಯಿಸುತ್ತಿರುವ ಮೊಟ್ಟ ಮೊದಲ ಚಿತ್ರ. ಕೃತಿ ಖರಬಂಧ ಚಿತ್ರದ ನಾಯಕಿ. ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿರುವ ಬಂಗಾರದ ಜಿಂಕೆ ಐಂದ್ರಿತಾ ರೇ ತಮ್ಮ ಸೊಂಟ ಕುಣಿಸಿದ್ದಾರೆ.
"ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ.." ಎಂಬ ಹಾಡು ಈಗಾಗಲೆ ಮೊಬೈಲ್ ಗಳಲ್ಲಿ, ಎಫ್ಎಂ ರೇಡಿಯೋಗಳಲ್ಲಿ ಎಲ್ಲೆಂದರಲ್ಲಿ ಸದ್ದು ಮಾಡುತ್ತಿದೆ. ಈ ಹಾಡನಲ್ಲಿನ ಮೇಲುಕೋಟೆ ಬದಲಾಗಿ ಏಳುಕೋಟೆ ಬಳಸುವುದಾಗಿ ಪ್ರೇಮ್ ಹೇಳಿದ್ದಾರೆ.
ಪ್ರೇಮ್ ನಟನೆಯ 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರ ಸೋತಮೇಲೆ ಪ್ರೇಮ್ ನಟನಾಗುವುದಕ್ಕೆ ಲಾಯಕ್ಕೇ ಎಂಬ ಪ್ರಶ್ನೆ ಉದ್ಯಮದಲ್ಲಿ ಹಾಗೂ ಕನ್ನಡ ಸಿನಿಪ್ರೇಕ್ಷಕ ವಲಯದಲ್ಲಿ ಕೇಳಿಬಂದಿತ್ತು. ನಂತರ ಶಿವರಾಜ್ ಕುಮಾರ್ ಅಭಿನಯ ಹಾಗೂ ಪ್ರೇಮ್ ನಿರ್ದೇಶನದ 'ಜೋಗಯ್ಯ' ಚಿತ್ರ ಸೋತ ಮೇಲೆ ಪ್ರೇಮ್ ನಿರ್ದೇಶನದ ಬಗ್ಗೆಯೂ ಅಪಸ್ವರ ಕೇಳಿಬಂತು. ಆದರೆ ಇದೀಗ ಬಿಡುಗಡೆಯಾಗುತ್ತಿರುವ 'ಪ್ರೇಮ್ ಅಡ್ಡ' ಎಲ್ಲ ಪ್ರಶ್ನೆ, ಅಪಸ್ವರಗಳಿಗೂ ಉತ್ತರ ನೀಡಿದರೆ ಅಚ್ಚರಿಯಿಲ್ಲ. (ಏಜೆನ್ಸೀಸ್)