ಸುದೀಪ್ ರ ಈ ಮಾತಿಗೆ ಪ್ರೇಮ್ ಹೃದಯ ತುಂಬಿ ಬಂದಿದೆ
Recommended Video
''ಜೋಗಿ ಪ್ರೇಮ್ ಹಾಗೂ ಹೆಬ್ಬುಲಿ ಕೃಷ್ಣ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾರು? ಎಂದು ಕೇಳಿದರೆ ಸುದೀಪ್ ಏನು ಹೇಳಬಹುದು. ಈ ಪ್ರಶ್ನೆಗೆ ಸುದೀಪ್ ಇಬ್ಬರೂ ನಿರ್ದೇಶಕರು ತನಗೆ ಅಷ್ಟೇ ಮುಖ್ಯ ಎಂದು ಹೇಳಿದ್ದಾರೆ.
ಇತ್ತೀಚಿಗಿನ ಸಂದರ್ಶನದಲ್ಲಿ ಜೋಗಿ ಪ್ರೇಮ್ ಹಾಗೂ ಹೆಬ್ಬುಲಿ ಕೃಷ್ಣ ಬಗ್ಗೆ ಸುದೀಪ್ ಮಾತನಾಡಿದ್ದರು. ''ಅವರಿಬ್ಬರು ನನ್ನ ಸಹೋದರರು. ಇಬ್ಬರು ನನಗೆ ಇಷ್ಟ. ಮುಖ್ಯವಾಗಿ ಪ್ರೇಮ್ ಬಗ್ಗೆ ಪ್ರಪಂಚದಲ್ಲಿ ಯಾರೂ ಏನೇ ಹೇಳಿದರೂ ಅವರು ನನ್ನ ತಮ್ಮನಾಗಿಯೇ ಇರುತ್ತಾರೆ. ಅವರು ಒಬ್ಬ ಅದ್ಬುತ ಮನುಷ್ಯ. ಯಾರು ಏನೇ ಹೇಳಿದರೂ ಅವನ ಪರ ನಾನು ನಿಲ್ಲುತ್ತಾನೆ.'' ಎಂದಿದ್ದರು.

ತಮ್ಮ ಬಗ್ಗೆ ಸುದೀಪ್ ಆಡಿದ ಈ ಮಾತು ಕೇಳಿ ಪ್ರೇಮ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ''ಸುದೀಪ್ ಅವರ ಮಾತುಗಳನ್ನು ಕೇಳಿದ ಮೇಲೆ ನನಗೆ ಆಗುತ್ತಿರುವ ಅನುಭವವನ್ನು ಪದಗಳಲ್ಲಿ ಹೇಳಲು ಆಗುವುದಿಲ್ಲ. ನೀವು ನನ್ನ ಹೃದಯಕ್ಕೆ ತುಂಬ ಆಪ್ತರಾಗಿಯೇ ಇರುತ್ತೀರಿ. ಥ್ಯಾಂಕ್ಯು ಸುದೀಪ್ ಲವ್ ಯೂ.'' ಎಂದು ಕಿಚ್ಚನಿಗೆ ಧನ್ಯವಾದ ತಿಳಿಸಿದ್ದಾರೆ.

ಪ್ರೇಮ್ ಹಾಗೂ ಸುದೀಪ್ ಕಾಂಬಿನೇಶನ್ ನಲ್ಲಿ ಈವರೆಗೆ ಒಂದೇ ಒಂದು ಸಿನಿಮಾ ಮಾತ್ರ ಬಂದಿದೆ. 'ದಿ ವಿಲನ್' ಚಿತ್ರದಲ್ಲಿ ಸುದೀಪ್ ಹಾಗೂ ಶಿವರಾಜ್ ಕುಮಾರ್ ನಟಿಸಿದ್ದರು.


Click it and Unblock the Notifications











