Don't Miss!
- News Lok Sabha Election 2024: ಟಿಕೆಟ್ ಹಂಚಿಕೆಯ ಬಳಿಕ ಬಿಜೆಪಿಯ ಮುಂದೆ ಹೊಸ-ಹೊಸ ಸವಾಲುಗಳು
- Automobiles ಎಲೆಕ್ಟ್ರಿಕ್ ಲೋಕಕ್ಕೆ ಎಸ್ಯುವಿ ದೈತ್ಯನ ಎಂಟ್ರಿ: ಇನ್ನು ಉಳಿದ ಕಾರುಗಳನ್ನು ದೇವರೇ ಕಾಪಾಡಬೇಕು!
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೋವಾದ ಜೂಜು ಅಡ್ಡೆಯಲ್ಲಿ ತಾರೆ ಪ್ರಿಯಾಮಣಿ
ಗೋವಾದ ಸಮುದ್ರತೀರದಲ್ಲಿ ಲಂಗರು ಹಾಕಿರುವ ಗ್ಯಾಂಬ್ಲಿಂಗ್ ಹಡಗಿನಲ್ಲಿ ನಡೆಯುವ ಜೂಜು ಅಡ್ಡೆಯಲ್ಲಿ ಬೆಂಗಳೂರು ಬೆಡಗಿ ಪ್ರಿಯಾಮಣಿ ಪ್ರತ್ಯಕ್ಷರಾಗಿದ್ದಾರೆ. ವಿಶೇಷ ಎಂದರೆ ಅವರ ಜೊತೆ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಇರುವುದು. ವಿಶೇಷ ಪರವಾನಗಿ ಪಡೆದು ಈ ಹಡಗನ್ನು ಹತ್ತಿದ್ದಾರೆ ಪ್ರಿಯಾಮಣಿ ಹಾಗೂ ಶಿವಣ್ಣ.
ಸಾಮಾನ್ಯವಾಗಿ ಜೂಜಾಟಕ್ಕೆ ಭಾರತದಲ್ಲಿ ಅನುಮತಿ ಇಲ್ಲ. ಆದರೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಗೋವಾ ಸರ್ಕಾರ ಬೃಹದಾಕಾರದ ಹಡಗಿನಲ್ಲಿ ಜೂಜಾಟ ನಡೆಸುತ್ತಿದೆ. ಇದರಲ್ಲಿ 'ಕ್ಯಾಸಿನೋ ಪ್ರೈಡ್' ಎಂಬ ಜೂಜಾಟದ ಅಡ್ಡೆಯನ್ನು ತೆರೆದಿದೆ.
ಈ ಹಡಗಿನಲ್ಲಿ ಸಿನೆಮಾಗಳ ಚಿತ್ರೀಕರಣಕ್ಕ್ಕೆ ಅವಕಾಶ ಬಂದ್ ಮಾಡಲಾಗಿದೆ. ಆದರೆ ವಿಶೇಷ ಎಂದರೆ ಈ ಹಡಗಿನಲ್ಲಿ ರಾಘವ ಲೋಕಿ ಆಕ್ಷನ್ ಕಟ್ ಹೇಳುತ್ತಿರುವ ಕನ್ನಡದ 'ಲಕ್ಷ್ಮಿ' ಚಿತ್ರವನ್ನು ಚಿತ್ರೀಕರಿಸಿರುವುದು. ಈ ಹಡಗಿನಲ್ಲಿರುವ ಅತ್ಯಾಕರ್ಷಕ ಒಳಾಂಗಣ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪ್ರಿಯಾಮಣಿ ಅಭಿನಯದ 'ಲಕ್ಷ್ಮಿ' ಚಿತ್ರ ಗ್ರಾಫಿಕ್ಸ್ ಕಾರಣದಿಂದ ಲೇಟ್ ಆಗುತ್ತಿದೆ ಎಂದು ಚಿತ್ರದ ನಿರ್ಮಾಪಕ ಭಾಸ್ಕರ್ ಹಾಗೂ ಆದಿ ನಾರಾಯಣ ತಿಳಿಸಿದ್ದಾರೆ. ಹೆಸರಾಂತ ಉದ್ಯಮ ಭರಣಿ ಮಿನರಲ್ಸ್ ಅವರ ಮೊದಲ ಪ್ರಯತ್ನ 'ಲಕ್ಷ್ಮಿ'.
ಅದ್ದೂರಿ ಮುಹೂರ್ತದ ಬಳಿಕ ಬೆಂಗಳೂರು ಹಾಗೂ ಹೊರದೇಶಗಳಲ್ಲೂ ಚಿತ್ರೀಕರಣ ಮಾಡಿ ತಾಂತ್ರಿಕ ಗ್ರಾಫಿಕ್ಸ್ ಕೆಲಸಕ್ಕಾಗಿ ಹಲವಾರು ತಿಂಗಳುಗಳೆ ಹಿಡಿಯಿತು ಎಂದು ತಿಳಿಸುತ್ತಾರೆ ನಿರ್ದೇಶಕ ರಾಘವ ಲೋಕಿ.
ಗುರುಕಿರಣ್ ಅವರು ಆರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆ ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ, ಕೆ. ಎಂ ಪ್ರಕಾಶ್ ಅವರ ಸಂಕಲನ, ಎಂ ಎಸ್ ರಮೇಶ್ ಅವರ ಸಂಭಾಷಣೆ, ಇಸ್ಮಾಯಿಲ್ ಅವರ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು ಸ್ಟಂಟ್ಸ್, ಪ್ರದೀಪ್ ಆಂಟೋನಿ ನೃತ್ಯ ನಿರ್ದೇಶನ, ಆನಂದಪ್ರಿಯ ಅವರ ಸಹಾಯ ನಿರ್ದೇಶನ, ಬಾಬು ಹಾಗೂ ಸಾನಿಯಾ ಸರ್ದಾರಿಯ ವಸ್ತ್ರ ವಿನ್ಯಾಸ ಚಿತ್ರಕ್ಕಿದೆ.
ಆಶಿಷ್ ವಿದ್ಯಾರ್ಥಿ, ರವಿಕಾಳೆ, ವಿನ್ಸೆಂಟ್, ಕೋಮಲ್, ರಂಗಾಯಣ ರಘು ಹಾಗೂ ಇತರರು ಪಾತ್ರವರ್ಗದಲ್ಲಿದ್ದಾರೆ. ಲಕ್ಷ್ಮಿ ಚಿತ್ರದ ಅಡಿಬರಹ "ನೋ ವನ್ ಕ್ಯಾನ್ ಟಚ್ ಮೀ". ಆಕ್ಷನ್ ಥ್ರಿಲ್ಲರ್ ಆದ ಚಿತ್ರದ ಕಥಾವಸ್ತುವು ಭಿನ್ನವಾಗಿದೆ. ಸಾಮಾನ್ಯನೊಬ್ಬ ಭಯೋತ್ಪಾದನೆಯೊಂದಿಗೆ ಮುಖಾಮುಖಿಯಾಗುವುದೇ ಚಿತ್ರದ ಕಥಾಹಂದರ. (ಏಜೆನ್ಸೀಸ್)